ಜು.14 ರಂದು ವಿದ್ಯುತ್ ಸರಬರಾಜು ನಲ್ಲಿ ವ್ಯತ್ಯಯ.
ಹುನಗುಂದ ಜು.12

ಪಟ್ಟಣದ ೧೧೦/೧೧ ಕೆ.ವಿ. ಉಪ-ಕೇಂದ್ರದಲ್ಲಿ ದೋಷ ಪೂರಿತ ಸಿ.ಟಿ ಬದಲಾವಣೆ ಕೆಲಸವು ಅತೀ ಅವಶ್ಯವಿರುವುದು ಹಾಗೂ ಸದರಿ ದೋಷ ಪೂರಿತ ಸಿ.ಟಿ ೧೧ ಕೆವಿ ಮಾರ್ಗಗಳಲ್ಲಿ ತೊಂದರೆ ಉಂಟಾಗುತ್ತಿರುವ ಕಾರಣ ಮತ್ತು ಕರ್ನಾಟಕ ಗೃಹ ಮಂಡಳಿ ಬಾಗಲಕೋಟರವರು ವಿವಿಧ ಕಾಮಗಾರಿಗಳನ್ನು ಕೈಗೊಳ್ಳುವ ಪ್ರಯುಕ್ತ ಜು. ೧೪ ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಾಯಾಂಕಾಲ ೦೫:೦೦ ಗಂಟೆಯವರೆಗೆ ೧೧೦/೧೧ ಕೆ.ವಿ. ಉಪ-ಕೇಂದ್ರದಿಂದ ಸರಬರಾಜು ಆಗುವ ಎಲ್ಲಾ ೧೧ ಕೆ.ವಿ. ಮಾರ್ಗಗಳ ವ್ಯಾಪ್ತಿಯಲ್ಲಿ ಬರುವಂತಹ ಹೆಚ್.ಟಿ/ಐ.ಪಿ.ಪಿ/ನಗರ/ಗ್ರಾಮ ಕೃಷಿ ಗ್ರಾಹಕರುಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸ ಬೇಕು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಮಲ್ಲಿಕಾರ್ಜುನ ಎಂ ಬಂಡರಗಲ್ಲ ಹುನಗುಂದ