ಕೊಟ್ಟೂರೇಶ್ವರ ಕಾಲೇಜಿನಲ್ಲಿ ಸಂಶೋಧನಾ ವಿಧಾನ ಕಾರ್ಯಗಾರ.
ಕೊಟ್ಟೂರು ಜು.13

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೊಟ್ಟೂರು ಪಟ್ಟಣದ ಕೊಟ್ಟೂರೇಶ್ವರ ಮಹಾ ವಿದ್ಯಾಲಯದಲ್ಲಿ ದಿನಾಂಕ 12.07.2024 ರಂದು ಸ್ನಾತಕೋತ್ತರ ವಾಣಿಜ್ಯ ವಿಭಾಗ ದಿಂದ ಒಂದು ದಿನದ ಸಂಶೋಧನಾ ವಿಧಾನ ಕಾರ್ಯಗಾರವನ್ನು ಆಯೋಜನೆ ಮಾಡಲಾಗಿತ್ತು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಹಾ ವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ. ರವಿಕುಮಾರ್ ಇವರು ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡುತ್ತಾ ವಿಶ್ವವಿದ್ಯಾಲಯದ ಆದೇಶದ ಅನ್ವಯ ಎಂ.ಕಾಂ. ಮತ್ತು ಬಿ.ಕಾಂ ವಿದ್ಯಾರ್ಥಿಗಳಿಗೆ ಸಂಶೋಧನ ವಿಧಾನವನ್ನು ಪಠ್ಯಕ್ರಮದಲ್ಲಿ ಅಳವಡಿಸಿರುವುದು ತುಂಬಾ ಉಪಯುಕ್ತವಾಗಿರುತ್ತದೆ, ಏಕೆಂದರೆ ವಿದ್ಯಾರ್ಥಿಗಳು ಸ್ನಾತಕೋತ್ತರ, ಪದವಿ ಮುಗಿದ ನಂತರ ತಮ್ಮ ಉನ್ನತ ವ್ಯಾಸಂಗ ಮತ್ತು ಎಂ.ಫಿಲ್ ಪಿ.ಹೆಚ್.ಡಿ ಮಾಡಲು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಸಂಶೋಧನಾ ವಿಧಾನದಲ್ಲಿ ಪ್ರಾಥಮಿಕ ದತ್ತಾಂಶಗಳ ಸಂಗ್ರಹಣೆ, ಉಲ್ಲೇಖ ಹಾಗೂ ವಿವಿಧ ಕಂಪನಿ ಅಥವಾ ಸಂಘ-ಸಂಸ್ಥೆಗಳಲ್ಲಿ ಮಾಹಿತಿ ಕ್ರೂಡೀಕರಿಸಲು ಪ್ರಬಂಧವನ್ನು ಬರೆಯಲು ತುಂಬಾ ಅನುಕೂಲವಾಗುತ್ತದೆ ವಿದ್ಯಾರ್ಥಿಗಳಿಗೆ ಆಸಕ್ತಿ ಮತ್ತು ಶ್ರಮ ಇರುತ್ತದೆಯೋ ಅವರು ಸಂಶೋಧನೆಯಲ್ಲಿ ಯಶಸ್ಸನ್ನು ಸಾಧಿಸಿ ಉತ್ತಮ ವಿಜ್ಞಾನಿಯಾಗಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಈ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಾ.ಮುಬಾರಕ್ ಸಹಾಯಕ ಪ್ರಾಧ್ಯಾಪಕರು ಪಿ.ಜಿ ಸೆಂಟರ್ ನಂದಿಹಳ್ಳಿ ಇವರು ವಿದ್ಯಾರ್ಥಿಗಳಿಗೆ ಸಂಶೋಧನಾ ವಿಧಾನಗಳ ಬಗ್ಗೆ ಸ್ವ ವಿವರವಾಗಿ ತಿಳಿಸಿ ಕೊಟ್ಟರು. ಈ ಮಾಹಿತಿ ವಿದ್ಯಾರ್ಥಿಗಳಿಗೆ ಪ್ರೊಜೆಕ್ಟನ್ನು ಬರೆಯಲು ತುಂಬಾ ಅನುಕೂಲವಾಯಿತು. ಉಪನ್ಯಾಸದ ನಂತರ ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ ಮಾಡುವುದರ ಮುಖಾಂತರ ತಮ್ಮ ಸಂದೇಹಗಳಿಗೆ ಪರಿಹಾರವನ್ನು ಕಂಡು ಕೊಂಡರು. ಈ ಸಂದರ್ಭದಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಶಾಂತ್ ಕುಮಾರ್ ಎಂ.ಹೆಚ್, ನ್ಯಾಕ್ ಕೋ ಆರ್ಡಿನೇಟರ್ ಡಾ. ಪೃಥ್ವಿರಾಜ್, ಡಿ. ರವೀಂದ್ರ ಗೌಡ, ಸಿ.ಬಸವರಾಜ್, ವಸಂತ್ ಕುಮಾರ್ ಲೆಕ್ಕ ಪರಿಶೋಧಕರು, ದೈಹಿಕ ನಿರ್ದೇಶಕರಾದ ಡಾ.ಶಿವಕುಮಾರ್, ಬಸವರಾಜ್ ಬಣಕಾರ್ ಉಪಸ್ಥಿತರಿದ್ದರು.

ಈ ಕಾರ್ಯಗಾರವನ್ನು ಸ್ನಾತಕೋತರ ವಿಭಾಗದ ಮುಖ್ಯಸ್ಥರಾದ ಪಿ. ಗುರುಲಿಂಗನಗೌಡ ಇವರ ನೇತೃತ್ವದಲ್ಲಿ ವಿಭಾಗದ ಉಪನ್ಯಾಸಕರುಗಳಾದ ಸುರೇಶ್, ಶ್ರೀನಿವಾಸ್, ಶರಣೇಶ್, ಶ್ರೀಮತಿ ರಹಿಮ್ ಬಿ, ಸತ್ಯಣ್ಣ, ಕುಮಾರಿ ಭವಾನಿ ಮತ್ತು ಚೈತ್ರ ಇವರುಗಳು ಕಾರ್ಯಗಾರವನ್ನು ತುಂಬಾ ಅಚ್ಚು ಕಟ್ಟಾಗಿ ಆಯೋಜಿಸಿದ್ದರು.ಈ ಕಾರ್ಯಗಾರದಲ್ಲಿ ಸುಮಾರು 260 ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳು ವಿವಿಧ ಕಾಲೇಜುಗಳಾದ ಹರಪನಹಳ್ಳಿ, ಕೂಡ್ಲಿಗಿ, ಕೊಟ್ಟೂರಿನ ಇತರೆ ಕಾಲೇಜುಗಳಿಂದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿನಿಯಾದ ಕಾವೇರಿ ಮತ್ತು ಅಮೃತ ನಿರೂಪಿಸಿದರೆ, ವಿಭಾಗದ ಮುಖ್ಯಸ್ಥರು ಪ್ರಾಸ್ತಾವಿಕ ನುಡಿದರು, ವಂದನಾರ್ಪಣೆಯನ್ನು ವಿದ್ಯಾರ್ಥಿನಿ ಅಮೂಲ್ಯ ನೆರವೇರಿಸಿದರು. ಮಹಾ ವಿದ್ಯಾಲಯದ ಎಲ್ಲಾಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಗಾರವನ್ನು ಯಶಸ್ವಿ ಗೊಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್. ಕುಮಾರ್ ಸಿ ಕೊಟ್ಟೂರು.