ಕುಟುಂಬದ ಆರೋಗ್ಯಕ್ಕಾಗಿ ಮುಂಜಾಗ್ರತೆಯ ಜವಾಬ್ದಾರಿ ನಿಭಾಯಿಸಿ.
ಶಿರೂರು ಜು .13

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ಬಾಗಲಕೋಟೆ, ಜಿಲ್ಲಾ ಆಶ್ರಿತ ರೋಗವಾಹಕ ನಿಯಂತ್ರಣಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರ, ಸಹಯೋಗದಲ್ಲಿ ಉಪ ಕೇಂದ್ರ ಬೆನಕಟ್ಟಿ ವ್ಯಾಪ್ತಿಯ ಗುಂಡನಪಲ್ಲೆ ಗ್ರಾಮದಲ್ಲಿ ಡೆಂಗ್ಯೂ ಜ್ವರ ತಡೆಗೆ ಆರೋಗ್ಯ ಅರಿವು ಜಾಗೃತಿ ಆಯೋಜಿಸಲಾಗಿತ್ತು. ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ, ಎಸ್ ಎಸ್ ಅಂಗಡಿ, “ಕಡಿತ ಚಿಕ್ಕದು ಅಪಾಯ ದೊಡ್ಡದು” ಎಲ್ಲರೂ ಸೇರಿ ಡೆಂಗ್ಯೂ ಸೋಲಿಸೋಣ ಎಂಬ ಘೋಷಣೆಯೊಂದಿಗೆ, ಸೊಳ್ಳೆಗಳ ಕಚ್ಚುವಿಕೆಯಿಂದ ಸಾಂಕ್ರಾಮಿಕ ರೋಗಗಳ ತಡೆಗೆ ಮುಂಜಾಗ್ರತೆ ಕ್ರಮಗಳ ಪಾಲನೆ ಕುರಿತು ಕರಪತ್ರ ಬಿಡುಗಡೆ ಮಾಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಳೆಗಾಲದಲ್ಲಿ ಸಾಂಕ್ರಾಮಿಕವಾಗಿ ಹರಡುವ ಮಲೇರಿಯಾ, ಡೆಂಗ್ಯೂ, ಚಿಕೂನ್ ಗುನ್ಯಾ, ಆನೆಕಾಲು ರೋಗ, ಮೆದುಳು ಜ್ವರ, ಹಾಗೂ ವಾಂತಿ ಬೇಧಿ, ತಡೆಗೆ ನಾವೆಲ್ಲರೂ ಮುಂಜಾಗ್ರತೆ ಕ್ರಮಗಳ ಪಾಲಿಸುವುದು ಕಡ್ಡಾಯ. ಸೊಳ್ಳೆ ಉತ್ಪತ್ತಿ ತಾಣಗಳು ಬೆಳೆಯದಂತೆ ನೋಡಿ ಕೊಳ್ಳಬೇಕು ಸೊಳ್ಳೆ ಪರದೆ ನಿರೋಧಕ ಬಳಸಬೇಕು ನೀರಿನ ಸಂಗ್ರಹಗಳ ಮೇಲೆ ತಪ್ಪದೇ ಮುಚ್ಚಳಿಕೆ ಹಾಕಬೇಕು ಮನೆ ಸುತ್ತ ಮುತ್ತ ಟಾಯರ್ ಟ್ಯೂಬ್, ಟೆಂಗಿನ ಚಿಪ್ಪು ಒಡೆದ ಬಾಟಲ್, ಕಸ ವಿಲೇವಾರಿ ಮಾಡಬೇಕು ಸುತ್ತ ಮುತ್ತ ಪರಿಸರ ಸ್ವಚ್ಛತೆ ಕಾಪಾಡಿ ಕೊಳ್ಳಬೇಕು ವಾರದ ಒಂದು ದಿನ ಒಣ ದಿನ ಆಚರಿಸಿ ಸೊಳ್ಳೆ ಉತ್ಪತ್ತಿ ತಾಣಗಳು ಬೆಳೆಯದಂತೆ ನೋಡಿ ಕೊಳ್ಳಬೇಕು ಎಂದು ಸಾರ್ವಜನಿಕರ ಸಹಕಾರ ಕೋರಿದರು. ಪೊಷಕಾಂ ಯುಕ್ತ ಆಹಾರ ಸೇವನೆ ಮಾಡಬೇಕು ಶುದ್ಧ ನೀರು ಸೇವನೆ ನೀರು ಕಾಸಿ ಸೋಸಿ ಕುಡಿಯಬೇಕು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಆರೋಗ್ಯವಂತ ಕುಟುಂಬ ಸಮಾಜಕ್ಕಾಗಿ ಆರೋಗ್ಯ ಇಲಾಖೆಯ ಮುಂಜಾಗ್ರತೆ ಕ್ರಮಗಳ ಪಾಲನೆ ಮಾಡಬೇಕು ವಯೋವೃದ್ಧರು ಚಿಕ್ಕಮಕ್ಕಳು ಗರ್ಭಿಣಿಯರು ಬಾಣಂತಿಯರು ಸೊಳ್ಳೆ ಪರದೆ ಬಳಸಬೇಕು. ಡೆಂಗ್ಯು ಮಹಾಮಾರಿ ತಡೆಗೆ “ಈಡೀಜ್ ಇಜಿಪ್ತೆ” ಲಾರ್ವಾ ಮುಕ್ತಕ್ಕಾಗಿ ಎಲ್ಲರೂ ಕೈಜೋಡಿಸಿ ಆರೋಗ್ಯವಂತ ಸಮಾಜ ಕಟ್ಟೋಣ, ಮುಂಜಾಗ್ರತೆ ಕ್ರಮಗಳ ಪಾಲಿಸಿ ಆಸ್ಪತ್ರೆಗೆ ಅಲೆದಾಟ ತಪ್ಪಿಸಿಕೊಳ್ಳಿ. ಉತ್ತಮ ಆರೋಗ್ಯಕ್ಕಾಗಿ ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಿ, ಕುಟುಂಬದ ಆರೋಗ್ಯಕ್ಕಾಗಿ ಮುಂಜಾಗ್ರತೆಯ ಜವಾಬ್ದಾರಿ ನಿಭಾಯಿಸಿರಿ ಎಂದು ಕರೆ ಕೊಟ್ಟರು. ಗ್ರಾಮದಲ್ಲಿ “ಡೆಂಗ್ಯೂ ಜ್ವರ ತಡೆಗೆ ಆರೋಗ್ಯ ಅರಿವು ಜಾಗೃತಿ” ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ಪಟ್ಟಣ ಪಂಚಾಯತ ಶಿರೂರ ಸ್ವಚ್ಛ ಭಾರತ ಅಭಿಯಾನದ ಕಾರ್ಯಕರ್ತರು, ಗ್ರಾಮದ ಮುಖಂಡರು, ಯುವಕರು ಭಾಗವಹಿಸಿದ್ದರು.