ಹಟ್ಟಿ ಚಿನ್ನದ ಗಣಿಯಲ್ಲಿ ಭೂಕುಸಿತದಲ್ಲಿ ಮೃತಪಟ್ಟ ಕಾರ್ಮಿಕನ ಕುಟುಂಬಕ್ಕೆ ಪರಿಹಾರ ನೀಡಲು – ಸಿ.ಐ.ಟಿ.ಯು ಆಗ್ರಹ.

ಹಟ್ಟಿ ಜು.13

ರಾಯಚೂರು ಜಿಲ್ಲೆಯ ಲಿಂಗಸ್ಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಭೂಕುಸಿತ ಸಂಭವಿಸಿದ್ದು. ಕಾರ್ಮಿಕರೊಬ್ಬರು ಸಾವನ್ನಪ್ಪಿದ್ದಾರೆ. ಜೊತೆಗೆ ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ಮೃತ ಕಾರ್ಮಿಕನಿಗೆ ಸಿಐಟಿಯು ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಹಟ್ಟಿ ಚಿನ್ನದ ಗಣಿ ಕಂಪನಿಯ ಮಲ್ಲಪ್ಪ ಶಾಫ್ಟ್‌ನ ಭೂಮಿಯ ಕೆಳಮೈ ವಿಭಾಗದಲ್ಲಿ ಶುಕ್ರವಾರ ಬೆಳಗಿನ ಜಾವ 3.30ಕ್ಕೆ ಭೂಕುಸಿತವಾಗಿದೆ. ಮೃತ ಕಾರ್ಮಿಕರ ಕುಟುಂಬಕ್ಕೆ ಘೋಷಣೆ ಮಾಡಿದ ಪರಿಹಾರದ ಮೊತ್ತ ಕಡಿಮೆಯಾಗಿದ್ದು, ಜೀವ ಕಳೆದುಕೊಂಡ ಮಲ್ಲಪ್ಪ ಶಾಫ್ಟ್ ವಿಭಾಗದಲ್ಲಿ ಕರ್ತವ್ಯ ಮಾಡುತ್ತಿದ್ದ. ಮೌನೇಶ್ ಎನ್ನುವ ಕಾರ್ಮಿಕನ ಕುಟುಂಬಕ್ಕೆ ಕೇವಲ 5₹ ಲಕ್ಷ ನೀಡಿ ಕೈ ತೊಳೆದು ಕೊಳ್ಳುವ ಕೆಲಸ ಮಾಡಿದೆ. ಇದನ್ನು ಸಿಐಟಿಯು ಹಟ್ಟಿ ಚಿನ್ನದ ಗಣಿ ಘಟಕ ತೀವ್ರವಾಗಿ ಖಂಡಿಸುತ್ತದೆ.

ಕೂಡಲೇ ಗಣಿ ಕಂಪನಿ ಆಡಳಿತ ಮಂಡಳಿ ಮೃತ ಕುಟುಂಬಕ್ಕೆ 50,0000 ಲಕ್ಷ ರೂಪಾಯಿ ಮೊತ್ತದ ಪರಿಹಾರ ನೀಡಬೇಕು. ಮುಂದೆ ಯಾವುದೇ ಜೀವ ಹಾನಿ ಯಾಗದಂತೆ ಸುರಕ್ಷತೆಯ ಕ್ರಮಗಳನ್ನು ತೆಗೆದು ಕೊಳ್ಳಬೇಕು. ಕಾರ್ಮಿಕರ ಜೀವದ ಜೊತೆ ಕಂಪನಿ ಆಡಳಿತ ಚೆಲ್ಲಾಟವಾತ್ತಿದೆ. ನಿರಂತರವಾಗಿ ಭೂ ಕೆಳಮೈನಲ್ಲಿ ನಿರಂತರ ಹೇರ್ ಬ್ಲಾಸ್ಟ್ ಹಾಗೂ ಕಲ್ಲು ಬಂಡೆ ಕುಸಿತ ಸಂಭವಿಸುತ್ತಿದ್ದು, ಆಡಳಿತ ನಿರ್ಲಕ್ಷ್ಯ ವಹಿಸಿದೆ. ಕಾರ್ಮಿಕರನ್ನು ಯಂತ್ರದಂತೆ ಟ್ರೀಟ್ ಮಾಡುತ್ತಿರುವ ಕಂಪನಿ ಆಡಳಿತದ ಕಾರ್ಮಿಕ ವಿರೋಧಿ ಕ್ರಮವನ್ನು ಸಿಐಟಿಯು ಹಟ್ಟಿ ಚಿನ್ನದ ಗಣಿ ಘಟಕವನ್ನು ಖಂಡಿಸುತ್ತದೆ.

ಇನ್ನೂ ನಾಲ್ಕು ಜನಕ್ಕೆ ಗಂಭೀರ ಗಾಯಗಳಾಗಿದ್ದು, ಗಾಯಾಳು ಶಿವರಾಜ್, ಪರುಶುರಾಮ, ಬೂದೆಪ್ಪ, ರಂಗಸ್ವಾಮಿ, ಹನುಮಂತರಾಯ ಅವರಿಗೆ ಸರಿಯಾದ ಚಿಕತ್ಸೆ ಸೇರಿದಂತೆ ವಿಶೇಷ ಸೌಲಭ್ಯಗಳು ಸೇರಿದಂತೆ ಪರಿಹಾರವೂ ನೀಡಬೇಕು.ಸಿಐಟಿಯು ಮುಖಂಡರಾದ ಅಮರೇಶ ಗುರಿಕಾರ್, ರಮೇಶ ವೀರಾಪೂರು, ಹನೀಫ್,ಆಲ್ಲಾಭಕ್ಷ, ಫಕ್ರುದ್ದೀನ್, ವೆಂಕಟೇಶ್, ಮಲ್ಲಿಕಾರ್ಜುನ್, ಪೆಂಚಲಯ್ಯ,ನಿಂಗಪ್ಪ ಎಂ ಹಾಗೂ ಅನೇಕ ಕಾರ್ಮಿಕರು ಆಗ್ರಹಿಸಿದ್ದಾರೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್ ವಾಯ್ ಕಿಳ್ಳಿ. ಇಲಕಲ್ಲ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button