ಮುಷ್ಟಿಗೇರಿ ಶಾಲಾ ಸಂಸತ್ತು 2024-25 ….!

ಬಾದಾಮಿ(ಮುಷ್ಟಿಗೇರಿ , 13/07/24) :

ಶಾಲಾ ಶಿಕ್ಷಕ ವೃಂದ

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ನ 2024-25 ನೇ. ಸಾಲಿನ ಶಾಲಾ ಸಂಸತ್ತಿಗೆ ಚುನಾವಣೆ ನಡೆಸಲಾಯಿತು.ವಿಧ್ಯಾರ್ಥಿ ವಿದ್ಯಾರ್ಥಿನಿಯರಲ್ಲಿ ಭಾರತ ಸಂವಿಧಾನದ ಮೂಲ ಆಯ್ಕೆ ವಿಧಾನ  ಮತದಾನ , ಮತದಾನದ ಮಹತ್ವ, ಆಶಯ, ಮೌಲ್ಯಗಳನ್ನು ಹಾಗೂ ಚುನಾವಣೆ ಪರಿಕಲ್ಪನೆಯನ್ನು ಈ ರೀತಿಯ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ವಿಧ್ಯಾರ್ಥಿ ವಿದ್ಯಾರ್ಥಿನಿಯರಲ್ಲಿ ನಾಯಕತ್ವ ಗುಣ ಬೆಳೆಸುವ ನಿಟ್ಟಿನಲ್ಲಿ ಈ ಒಂದು ಚುನಾವಣೆಯನ್ನು ಕೈಗೊಳ್ಳಲಾಯಿತು. 

ನಾಮಪತ್ರ ಸಲ್ಲಿಕೆ
ಪೋಲಿಂಗ್ ಏಜೆಂಟ್ಸ್
ಮತದಾರರನ್ನು ಪರಿಶೀಲಿಸಿ ಒಳಗೆ ಬಿಡುವ ಕಾವಲುಗಾರ
ಗುರುತಿನ ಚೀಟಿ ಪರಿಶೀಲನೆ ಹಾಗೂ ಬೆರಳಿಗೆ ಮಸಿ ಹಚ್ಚುವ ಕ್ಷಣ
ಮತ ಪೆಟ್ಟಿಗೆ
ಮತ ಚಲಾಯಿಸಿ ಖುಷಿ ವ್ಯಕ್ತಪಡಿಸಿದ ಕ್ಷಣ
ಮತ ಎಣಿಕೆಯ ಕ್ಷಣ
ಮತ ಎಣಿಕೆಯ ಕೊನೆಯ ಫಲಿತಾಂಶ

ಚುನಾವಣೆಯ ಅಧಿಸೂಚನೆ ಪ್ರಕಟಣೆ, ಉಮೇದುವಾರರಿಂದ ನಾಮಪತ್ರ ಸಲ್ಲಿಕೆ, ಪರಿಶೀಲನೆ, ನಾಮಪತ್ರ ಹಿಂತೆಗೆತ, ಅಂತಿಮ ಉಮೇದುವಾರರ ಪ್ರಕಟ, ಚಿಹ್ನೆ ನೀಡುವುದು, ಮತದಾನ ಪ್ರಕ್ರಿಯೆ, ಮತದಾನ ಕಾರ್ಡ್ ನ ಪರಿಶೀಲನೆ,ಬೆರಳಿಗೆ ಮಸಿ ಹಚ್ಚುವ ಪ್ರಕ್ರಿಯೆಯವರೆಗೆ ಯಶಸ್ವಿ ಚುನಾವಣೆಯನ್ನು ನೆರವೇರಿಸಲಾಯಿತು.

9 ಜನ ಅಭ್ಯರ್ಥಿಗಳು .

ಹೀಗೆ ಹಲವು ಹಂತಗಳಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು, ಈ ಒಂದು ಚುನಾವಣೆಯಲ್ಲಿ ವಿದ್ಯಾರ್ಥಿನಿಯರು ನಾಮಪತ್ರ ಸಲ್ಲಿಸಿ, ಸ್ಪರ್ಧೆಯಲ್ಲಿ ಇದ್ದರು. ಅತ್ಯಂತ ಯಶಸ್ವಿಯಾಗಿ, ಅಚ್ಚು ಕಟ್ಟಾಗಿ ಚುನಾವಣೆ ಮಾಡುವುದರ ಮೂಲಕ ಮೆಚ್ಚುಗೆಗೆ ಪಾತ್ರವಾಯಿತು. ಮತದಾನ ಪ್ರಕ್ರಿಯೆಯಲ್ಲಿ ಎಲ್ಲಾ ವಿದ್ಯಾರ್ಥಿನಿಯರು ತಮ್ಮ ಗುರುತಿನ ಪತ್ರ ತೋರಿಸಿ, ಮತ ಹಾಕಿ ಸಂಭ್ರಮಿಸಿದರು. ಮತದಾನ ಪ್ರಕ್ರಿಯೆ ನಂತರ ಫಲಿತಾಂಶವನ್ನು ಘೋಷಣೆ ಮಾಡಲಾಯಿತು. 9 ವಿದ್ಯಾರ್ಥಿಗಳು ಶಾಲಾ ಸಂಸತ್ತಿಗೆ ಆಯ್ಕೆಯಾದರು.

ಪ್ರಧಾನ ಮಂತ್ರಿ ಅರುಣ್.ಕುಲಕರ್ಣಿ ..

ಶಾಲಾ ಸಂಸತ್ ಚುನಾವಣೆಗೆ ಭಾಗವಹಿಸಿದ ವಿದ್ಯಾರ್ಥಿಗಳು-

 1) ಕುಮಾರ ಅರುಣ್ ಕುಮಾರ್ ಕುಲಕರಣಿ – ಪ್ರಧಾನ ಮಂತ್ರಿ

2)ಕುಮಾರಿ ಪ್ರತಿಭಾ ಮಳವಾಡ – ಉಪಮುಖ್ಯಮಂತ್ರಿ

3) ಕುಮಾರಿ ದಿವ್ಯ ಮೆಣಸಿನಕಾಯಿ – ವಿರೋಧ ಪಕ್ಷದ ನಾಯಕಿ 4)ಕುಮಾರ್ ಪ್ರದೀಪ್ ಮಾದರ್-  ಕ್ರೀಡಾ ಮಂತ್ರಿ 

5) ಕುಮಾರ್  ಗಣೇಶ್ ಮಾದರ್ – ಸ್ವಚ್ಛತಾ ಮಂತ್ರಿ

6)ಕುಮಾರ್ ಭರತ್ ಗಿರಡ್ಡಿ- ಕಾನೂನು ಮಂತ್ರಿ

6) ಕುಮಾರಿ ಶ್ರೀರಕ್ಷಾ ಹಡಪದ – ಆರೋಗ್ಯ ಮಂತ್ರಿ

7) ಕುಮಾರಿ ನಂದಿನಿ ಸೋಮನಕೊಪ್ಪ –  ಪ್ರವಾಸ ಮಂತ್ರಿ .

8)ಕುಮಾರ ಸಮರ್ಥ ಚಿಮ್ಮನಕಟ್ಟಿ-  ಸಾಂಸ್ಕೃತಿಕ ಮಂತ್ರಿ

9) ಕುಮಾರಿ ಸ್ಪೂರ್ತಿ  ಅಮೇತಪ್ಪನವರ್ – ಹಣಕಾಸು ಮಂತ್ರಿ .

ಇವರೆಲ್ಲರೂ ಚುನಾವಣೆಗೆ ನಿಂತಿದ್ದು ಚುನಾವಣೆಯ ಎಣಿಕೆಯ ಮತದಾನ ಮುಗಿದಿದ್ದು ಇದರಲ್ಲಿ ಅರುಣ ಕುಮಾರ್ ಕುಲಕರ್ಣಿ ಜಯಭೇರಿಯನ್ನು ಬಾರಿಸಿದ್ದು ಇವನು ಎಲ್ಲರ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದು ಇವನಿಗೆ ಬಹಳ ಖುಷಿಯನ್ನು ತಂದು ಕೊಟ್ಟಿದೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button