ಹಣಕಾಸು ಸೈಬರ್ ಕ್ರೈಮ್ ಗೆ 1930 ಸಹಾಯ ವಾಣಿಗೆ ಕರೆ ಮಾಡಿ.
ಕೊಟ್ಟೂರು ಜು. 19

ಪಟ್ಟಣ ಉಜ್ಜಿನಿ ಸರ್ಕಲ್ ನಲ್ಲಿ ಇಸ್ಮಾಯಿಲ್ ಎಎಸ್ಐ ಹೊಸಹಳ್ಳಿ ಪೋಲಿಸ್ ದೊಡ್ಡಬಸಪ್ಪ ಹೆಡ್ ಕಾನ್ಸ್ಟೇಬಲ್ ಮತ್ತು ನಾಗರಾಜ್ 112 ಡ್ರೈವರ್ ನೇತೃತ್ವದಲ್ಲಿ ಜನನಿಬಿಡ ಪ್ರದೇಶದಲ್ಲಿ 112 ಪೊಲೀಸ್ ವಾಹನದ ಮೂಲಕ ಹಣಕಾಸು ಕ್ರೈಮ್ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು. ಸೈಬರ್ ಕ್ರೈಮ್ ಗಳಲ್ಲಿ ಒಂದಾದ ಹಣಕಾಸು ವಂಚನೆ ಇತ್ತೀಚಿನ ದಿನ ಮಾನಗಳಲ್ಲಿ ಹೆಚ್ಚಾಗಿ ಸಾರ್ವಜನಿಕರಿಂದ ದೂರುಗಳು ಕಂಡು ಬರುತ್ತಿವೆ. ಮೊಬೈಲ್ ಬಳಕೆ ಸರಿಯಾಗಿ ಬಳಕೆಯ ತಿಳುವಳಿಕೆ ಜನರಲ್ಲಿ ಇಲ್ಲದ ಕಾರಣ ಹಾಗೂ ಮೂಲ ದಾಖಲೆಗೂ ಮತ್ತು ನಕಲು ದಾಖಲು ವ್ಯತ್ಯಾಸ ತಿಳಿಯದಂತೆ ದಾಖಲೆಯನ್ನು ಸೃಜನ ಶೀಲತೆಯಿಂದ ಸೃಷ್ಟಿ ಮೊಬೈಲ್ ಗೆ ಒಟಿಪಿ ಕಳುಹಿಸಿ ಹೆಚ್ಚಿನ ಹಣದಾಸೆ ತೋರಿಸಿ ಗ್ರಾಹಕರ ಖಾತೆಗಳಲ್ಲಿರುವ ಹಣವನ್ನು ಕ್ಷಣಾರ್ಧದಲ್ಲಿ ಲಪಟಾಯಿಸುವ ವಂಚನೆ ಜಾಲಗಳು ಹೆಚ್ಚಾಗಿವೆ ಈ ವಿಷಯಗಳಲ್ಲಿ ಜನರು ಜಾಗೃತ ರಾಗಿರಬೇಕು. ಆ ರೀತಿ ನಿಮ್ಮ ಮೊಬೈಲ್ ಗೆ ಸಂದೇಶಗಳು ಬಂದಲ್ಲಿ ಅದಕ್ಕೆ ಪ್ರತಿಕ್ರಿಯೆ ನೀಡಬಾರದು. ನಿಮಗೆ ಆ ಬಗ್ಗೆ ಅನುಮಾನ ಬಂದಲ್ಲಿ ಸಹಾಯವಾಣಿ 1930 ಕರೆ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆ ಲಾಕ್ ಮಾಡಿ ನಂತರ ಸಂದೇಶ ಕಳುಹಿಸಿದವರ ಮೇಲೆ ದೂರು ದಾಖಲು ಮಾಡಬೇಕು.ಸಾರ್ವಜನಿಕರು 1930 ಗೆ ಕರೆ ಮಾಡುವುದರಿಂದ ನಿಮ್ಮ ಖಾತೆಯಲ್ಲಿರುವ ನಿಮ್ಮ ಹಣ ಸುರಕ್ಷತೆ ಯಾಗಿರಲು ನೀವೇ ನಮಗೆ ಸಹಕರಿಸಿದಂತೆ ಆಗುತ್ತದೆ ಎಂದು ಸಾರ್ವಜನಿಕವಾಗಿ ಕೊಟ್ಟೂರು ಪೊಲೀಸ್ ರು ಇಂದು ಪಟ್ಟಣದ ಉಜ್ಜಿನಿ ವೃತ್ತದಲ್ಲಿ ಜನ ಜಾಗೃತಿ ಮೂಡಿಸುವಲ್ಲಿ ಮುಂದಾದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್ ಕುಮಾರ್ ಸಿ ಕೊಟ್ಟೂರು.