ಜಲಧೂತ ಜಾಗೃತಿ ಜಾಥಾ ಕಾರ್ಯಕ್ರಮ.
ಕಲಕೇರಿ ಜು.20

ಇoದು ದಿನಾಂಕ 20/07/2024 ರಂದು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಲಕೇರಿ & ಸರ್ಕಾರಿ ಹಿರಿಯ ಹೆಣ್ಣು ಮಕ್ಕಳ ಶಾಲೆ ಕಲಕೇರಿ & ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಕಲಕೇರಿ ಶಾಲೆಯಲ್ಲಿ ಸರ್ಕಾರದ ಆದೇಶದಂತೆ ಮಳೆ ನೀರಿನ ಹನಿ ಹಾಗೂ ಮಳೆ ನೀರಿನ ಉಪಯೋಗ ಮತ್ತು ಮಳೆ ನೀರು ಕೊಯ್ಲಿಗೆ ಹೇಗೆ ಅಳವಡಿಸಿ ಕೊಳ್ಳಬೇಕು, ಇದರಿಂದ ಏನು ಉಪಯೋಗ ಹಾಗೂ ನೀರು ನಮ್ಮ ಜೀವನದಲ್ಲಿ ಎಷ್ಟು ಪ್ರಾಮುಖ್ಯತೆ ನೀರಿಲ್ಲದೆ ಪ್ರತಿ ಜೀವಿಯು ಬದುಕಲಾರದು ಎಂಬ ಸಂದೇಶವನ್ನು ಊರಿನ ಪ್ರಮುಖ ಬೀದಿಗಳಲ್ಲಿ ಪ್ರಭಾತ ಪೇರಿ ಮಾಡುವುದ ರೊಂದಿಗೆ ಜಲಧೂತ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಯಾದ ಶ್ರೀ ಎಸ್ ಎಲ್ ನಾಯ್ಕೋಡಿ, ಮುಖ್ಯ ಗುರುಗಳಾದ ಶ್ರೀ ಜೆ ಬಿ ಕುಲಕರ್ಣಿ, ಎಸ್ ಬಿ ಪಡಶೆಟ್ಟಿ, ಶ್ರೀ ಡಿ ಬಿ ಅಡಿಕಿ, ಶಾಲೆಯ ಸಿಬ್ಬಂದಿ ವರ್ಗ, ಎಸ್ ಡಿ ಎಮ್ ಸಿ ಅಧ್ಯಕ್ಷರು ಹಾಗೂ ಸದಸ್ಯರು ಮುದ್ದು ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ ಮನಗೂಳಿ ತಾಳಿಕೋಟೆ.