“ಬೆಲೆ ಕಟ್ಟಲಾಗದ ಬಳಪ ಹಿಡಿದು ಭಗವಂತ”….. (ಗುರು ಪೂರ್ಣಿಮೆಯ ವಿಶೇಷ)

ಅಕ್ಷರ ಕಲಿಸಿ ಬದುಕು ತೋರಿಸಿದವರು ಮಾರ್ಗದರ್ಶನ ಮಾಡಿ ಹರಸಿ ಹಾರೈಸಿದವರು ಪರ ಊರಿನಿಂದ ಬಂದು ಬೋಧಿಸಿದವರು ಸ್ವಾರ್ಥವಿಲ್ಲದ ನಿಸ್ವಾರ್ಥ ಮನದ ಗುರು ದೇವರು

ಬೆಳೆಸಿದರು ಅಜ್ಞಾನದಿಂದ ಜ್ಞಾನದ ಕಡೆಗೆ ಸ್ಫೂರ್ತಿ ತುಂಬಿದರು ಪ್ರತಿ ಮಗುವಿನ ಸಾಧನೆಗೆ ಪೂಜಿಸಿ ಬಳಪ ಹಿಡಿದ ಭಗವಂತನಿಗೆ ಪ್ರೀತಿ ಮಮತೆಯ ಎರಡನೇ ತಾಯಿಗೆ

ತಮ್ಮ ಮಕ್ಕಳಂತೆ ಪ್ರೀತಿಸಿ ಮುದ್ದಿಸಿದರು ಏನು ಇಲ್ಲದ ಮೆದುಳಿಗೆ ಜ್ಞಾನ ತುಂಬಿದರು ನನ್ನಂತೆ ನನ್ನ ಶಿಷ್ಯ ಬೆಳೆಯಬೇಕು ಎಂದರು ಮಕ್ಕಳ ಪಾಲಿಗೆ ಬೆಲೆ ಕಟ್ಟಲಾಗದ ಭಗವಂತನಾದರು

ಸೋತಾಗ ಬೆನ್ನು ತಟ್ಟಿ ಪ್ರೋತ್ಸಾಹಿಸಿದವರು ಗೆದ್ದಾಗ ಶಿಷ್ಯರಿಗಿಂತ ಮುಂಚೆ ಖುಷಿ ಪಟ್ಟವರು ಆರಕ್ಕೇಳದೆ ಮೂರಕ್ಕಿಳಿಯದೆ ಬದುಕು ಸಾಗಿಸಿದವರು

ಜೀವನ ಪೂರ್ತಿ ಸರಳ ಜೀವನ ನಡೆಸಿದವರು

ಗುರುದೇವ ನಿನ್ನ ನಂಬಿದರೆ ಮೋಸವಿಲ್ಲವಯ್ಯ ಕಣ್ಣಿಗೆ ಕಾಣುವ ದೇವರು ನೀನಯ್ಯ ಅಕ್ಷರ ಕ್ರಾಂತಿಗೆ ರೂವಾರಿ ನೀವಯ್ಯ ನೀವಿಲ್ಲದೆ ಜಗವು ಶೂನ್ಯ ನಂಬಯ್ಯ

ಶ್ರೀ ಮುತ್ತು ಯ. ವಡ್ಡರ ಶಿಕ್ಷಕರು

ಹೆಚ್.ಪಿ.ಎಸ್ ಹಿರೇಮಳಗಾವಿ

ಬಾಗಲಕೋಟ 9845568484

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button