ಉಜ್ಜಿನಿ ಗ್ರಾ.ಪಂ. ಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸದ ಪಿ.ಡಿ.ಓ
ಉಜ್ಜಿನಿ ಜು.28

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಉಜ್ಜನಿ ಗ್ರಾಮದಲ್ಲಿ 28 ಜುಲೈ 2024 ರಂದು ನಿಂಬಳಗೇರಿ ರಸ್ತೆಯಲ್ಲಿ ಭಾಗೀರಥಿ ಕಾಲೋನಿ ಅಂದರೆ ಅಂಬ್ರಾದಿಯಲ್ಲಿ ಸುಮಾರು ದಿನಗಳಿಂದ ರಾತ್ರಿ ವೇಳೆ ಬೀದಿ ಕಂಬಗಳು ಇದ್ದರೂ ವಿದ್ಯುತ್ ಬಲ್ಪ ಬೆಳಕು ನೀಡುತ್ತಿಲ್ಲವಂತೆ.ಉಜ್ಜಿನಿ ಗ್ರಾಮ ಪಂಚಾಯಿತಿಯ ಪಿ ಡಿ ಓ ಜಯಮ್ಮನವರನ್ನು ಕರೆ ಮಾಡಿ ವಿದ್ಯುತ್ ಬಲ್ಪ್ ಚಾಲನೆಯಲ್ಲಿ ಇರುವುದಿಲ್ಲ ಎಂದು ಪ್ರಶ್ನೆ ಮಾಡಿದರೆ ಹೌದಾ ಕರೆಂಟ್ ಬಂದಿಲ್ವಾ ನೋಡೋಣ ಹಾಕೋಣ ಎನ್ನುತ್ತಿದ್ದಾರೆ.

ಪಿಡಿಓ ಜಯಮ್ಮ ಮಳೆಗಾಲದಲ್ಲಿ ರಸ್ತೆಯಲ್ಲಿ ಕೆಸರು ರಾತ್ರಿ ವೇಳೆ ಹಾವು ಚೇಳು ಇತ್ಯಾದಿ ಕಾಟಗಳಿಂದ ಎಚ್ಚರ ವಹಿಸುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ. ಮಕ್ಕಳು ವಯಸ್ಸಾದವರು ತೊಂದರೆಗಳು ಆಗುತ್ತವೆ, ಇದರ ಬಗ್ಗೆ ಪಿಡಿಓ ಜಯಮ್ಮನವರನ್ನು ಕೇಳಿದಾಗ 15 ದಿನಗಳ ಕಾಲ ಕರೆಂಟ್ ಇಲ್ಲ ಎಂದು ಹೇಳಿದರೆ. ಉಡಾಫೆ ಉತ್ತರಗಳನ್ನೇ ನೀಡುತ್ತಾ ಬಂದಿದ್ದಾರೆ ಎಂದು ಜಿ ಸಿದ್ದೇಶ್ ಸಮಾಜ ಸೇವಕರು ಸಿ ರಾಜಪ್ಪ ಮತ್ತಿತರರು ಪತ್ರಿಕೆಗೆ ತಿಳಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್ ಕುಮಾರ್ ಸಿ ಕೊಟ್ಟೂರು.