ಪಿ.ಎಸ್.ಐ ಪರಶುರಾಮ್ ನಿಗೂಢ ಸಾವಿನ ತನಿಖೆ ಸಿಬಿಐಗೆ ವಹಿಸಿ, ನೊಂದ ಕುಟುಂಬಕ್ಕೆ 2. ಕೋಟಿ ಪರಿಹಾರ – ಹುದ್ದೆ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ.

ಮಸ್ಕಿ ಆ.09

ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿ ಯಾದಗಿರಿ ಠಾಣೆಯಲ್ಲಿ ಪಿ.ಎಸ್.ಐ ಪರಶುರಾಮ್ ಅವರ ಸಾವಿನ ಕುರಿತು ತನಿಖೆಗೆ ಸಿ.ಬಿ.ಐಗೆ ವಹಿಸುವುದು, ನೊಂದಿರುವ ಕುಟುಂಬಕ್ಕೆ 2₹ ಕೋಟಿ ಮೊತ್ತದ ಪರಿಹಾರ ಮಂಜೂರಿ ಮಾಡುವುದು, ಮತ್ತು ನೊಂದಿರುವ ಕುಟುಂಬದವರಿಗೆ ಸರಕಾರ ಉದ್ಯೋಗ ನೀಡಲು ಒತ್ತಾಯಿಸಿ ಆಗ್ರಹದ ಮನವಿ ಪತ್ರವನ್ನು ದಲಿತ ಪ್ರಗತಿಪರ ಸಂಘಟನೆಯು ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಹತ್ತು ಹಲವು ಕನಸುಗಳನ್ನು ಕಟ್ಟಿ ಕೊಂಡು ಬಾಳ ಬೇಕಾದ ಒಬ್ಬ ದಕ್ಷ ಮತ್ತು ಪ್ರಮಾಣಿಕ ಅಧಿಕಾರಿ ಸಾವು ಕಂಡಿರುವದು ವಿಪರ್ಯಾಸ ಸಂಗತಿಯಾಗಿದೆ. ಇದು ಒಬ್ಬ ಪಿ.ಎಸ್.ಐ ಅವರ ಸಂಗತಿಯಲ್ಲ, ಬಹುತೇಕವಾಗಿ ಇಂತಹ ಉದ್ಯೋಗ ಮಾಡುವ ದಕ್ಷ ಅಧಿಕಾರಿಗಳಿಗೆ ಕಿರುಕುಳ ತಪ್ಪಿದ್ದಲ್ಲ. ಶಾಸಕ ಮತ್ತು ಅವರ ಮಗನ ಪಿತೂರಿ, ಹಣದ ದಾಹದಿಂದ ಒಬ್ಬ ಯುವ ಅಧಿಕಾರಿ ಸಾವನ್ನಪ್ಪಿರುವುದು ಯುವ ಪೀಳಿಗೆ ತಲೆ ತಗ್ಗಿಸುವಂತಾಗಿದೆ. ಅಲ್ಲದೆ ಇದನ್ನು ಖಂಡಿಸುವದು ಅನಿವಾರ್ಯವಾಗುತ್ತದೆ. ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟ ಮಸ್ಕಿ ತಾಲೂಕ ವತಿಯಿಂದ ತಮ್ಮಲ್ಲಿ ವಿನಂತಿ ಪೂರ್ವಕವಾಗಿ ಮತ್ತು ಅಗತ್ಯದ ಕ್ರಮಕ್ಕಾಗಿ ಪಕ್ಷ ಯಾವುದೇ ಇರಲಿ, ಶಾಸಕರು ಯಾವುದೇ ಪಕ್ಷದವರು ಇರಲಿ, ನ್ಯಾಯ ಎಲ್ಲರಿಗೂ ಒಂದೇ ಆಗಿರಬೇಕು. ತಮ್ಮ ಪಕ್ಷದವರು ಎಂದು ಅವರನ್ನು ಕರೆಯಿಸಿ ಮಣೆ ಹಾಕುವ ಕೆಲಸವನ್ನು ಸರಕಾರ ಮಾಡಬಾರದು ಎಂಬುದು ಸತ್ಯವಾದ ಮಾತಾಗಿದೆ. ಯಾಕೆಂದರೆ ಪರಶುರಾಮ ಪಿ.ಎಸ್.ಐ. ಯಾದಗಿರಿಯಲ್ಲಿ ಕರ್ತವ್ಯ ನಿರ್ವಹಿಸಿದ ಇವರು ದಕ್ಷ ಮತ್ತು ಪ್ರಮಾಣಿಕ ಅಧಿಕಾರಿಯಾಗಿದ್ದು, ಇದನ್ನು ಸಹಿಸದ ಯಾದಗಿರಿ ಶಾಸಕ ಚನ್ನಾರೆಡ್ಡಿ ಮತ್ತು ಅವರ ಮಗನಾದ ಪಂಪನಗೌಡ ಇವರು ಸೇರಿ ಇನ್ನಿಲ್ಲದ ತೊಂದರೆ, ಹಣಕ್ಕಾಗಿ ಒತ್ತಾಯಿಸುವದು, ಮತ್ತು ವರ್ಗಾವಣೆ ಎಂಬ ಬೆದರಿಕೆ ಹಾಕುವುದು ಹಾಗೂ ಇನ್ನೂ ಅನೇಕ ತರಹದ ತೊಂದರೆ ಕೊಟ್ಟಿರುವುದು ಈಗಾಗಲೇ ಮಾಧ್ಯಮಗಳಿಂದ ಬಯಲಾಗಿದೆ. ಆದರೆ ತಮ್ಮ ಸರಕಾರ ಈ ಸಾವನ್ನು ಕೇವಲ ಸಿ.ಐ.ಡಿ ಗೆ ವಹಿಸಿ ಕೈ ತೊಳೆದು ಕೊಂಡಿರುವುದು ಸರಿಯಾದ ಕ್ರಮವಾಗುವದಿಲ್ಲ, ಸತ್ಯಾ ಸತ್ಯತೆಯನ್ನು ಬಯಲು ಮಾಡಲು ಸಿ.ಬಿ.ಐ ಗೆ ವಹಿಸುವದು ಸೂಕ್ತವಾಗುತ್ತದೆ. ಕಾರಣ ದಯವಿಟ್ಟು ಅಹಿತಕರ ಘಟನೆಗಳಿಗೆ ಅವಕಾಶ ನೀಡದೇ ಕೂಡಲೇ ಕ್ರಮ ಜರುಗಿಸಲು ನಮ್ಮ ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟ ತಾಲೂಕ ಘಟಕದ ಒತ್ತಾಸೆಯಾಗಿದೆ. ಒಟ್ಟಿನಲ್ಲಿ ಯಾದಗಿರಿ ಠಾಣೆಯಲ್ಲಿ ಪಿ.ಎಸ್.ಐ ಪರಶುರಾಮ್ ಅವರ ಸಾವಿನ ಕುರಿತು ತನಿಖೆಗೆ ಸಿ.ಬಿ.ಐಗೆ ವಹಿಸುವದು, ನೊಂದಿರುವ ಕುಟುಂಬಕ್ಕೆ 2₹ ಕೋಟಿ ಮೊತ್ತದ ಪರಿಹಾರ ಮಂಜೂರಿ ಮಾಡುವುದು, ಮತ್ತು ನೊಂದಿರುವ ಕುಟುಂಬದವರಿಗೆ ಸರಕಾರ ಉದ್ಯೋಗ ನೀಡುವಂತೆ ದಲಿತಪರ ಕಾಳಜಿಯ ನಿಲುವನ್ನು ಹೊಂದಿರುವ ಎಲ್ಲಾ ದಲಿತ ಪ್ರಗತಿಪರ ಸಂಘಟನೆ ಒಕ್ಕೂಟ ಆಕ್ರೋಶದ ಮನವಿ ಪತ್ರವನ್ನು ಮಸ್ಕಿ ತಹಶೀಲ್ದಾರರಾದ ಡಾ. ಮಲ್ಲಪ್ಪ. ಕೆ. ಯರಗೋಳ ಇವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ದಲಿತ ಮುಖಂಡರಾದ ದೊಡ್ಡಪ್ಪ ಮುರಾರಿ, ಸಿ ದಾನಪ್ಪ ಮಸ್ಕಿ ದಲಿತ ಸಾಹಿತಿ, ಮಲ್ಲಪ್ಪ ಎಸ್.ಗೋನಾಳ, ಗಂಗಾಧರ್ ಬುದ್ದಿನ್ನಿ,ಮೌನೇಶ್ ಮುರಾರಿ,ಅಶೋಕ ನಂಜಲದಿನ್ನಿ, ಶ್ರೀಕಾಂತ್ ಮುರಾರಿ,ಹನುಮಂತಪ್ಪ ವೆಂಕಟಾಪುರ, ಮಲ್ಲಯ್ಯ ಬಳ್ಳಾ, ಪ್ರಶಾಂತ್ ಮುರಾರಿ,ಕಾಸಿಮಪ್ಪ ಡಿ ಮುರಾರಿ, ಕಿರಣ್ ಮುರಾರಿ,ಹುಲುಗಪ್ಪ ಹಸಮಕಲ್, ಚಿನ್ನಪ್ಪ ಹೆಡಿಗಿಬಾಳ ಕ್ಯಾಂಪ್,ಬಾಲರಾಜ್ ವಿರುಪಾಪುರ, ಅಶೋಕ್ ಮುರಾರಿ,ಮೌನೇಶ್ ಅಮೀನಗಡ,ಬಸವರಾಜ್ ಡಿ ಉದ್ಭಾಳ, ದುರುಗರಾಜ ವಟಗಲ್, ಶಿವರೆಡ್ಡಿ ಮಸ್ಕಿ,ಸಿದ್ದು ಮುರಾರಿ, ಹುಚ್ಚರೆಡ್ಡಿ ಹಿರೇ ದಿನ್ನಿ,ಬಸವರಾಜ್ ಗೌಡನಭಾವಿ,ಮರಿಸ್ವಾಮಿ ಬೆನಕನಾಳ,ಜಮದಗ್ನಿ ಗೋನಾಳ, ದಲಿತಪರ ನಿಲುವುಳ್ಳ ಹೋರಾಟಗಾರರು, ಸಾರ್ವಜನಿಕರು, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button