ಗ್ರಾಮಸ್ಥರು ಸೇರಿ ಗಾಳಿ ಮರಗಮ್ಮನಿಗೆ ಪೂಜೆ ಮಾಡಿ ಸೀಮೆಯಿಂದ ಬೇರೆ ಸೀಮೆಗೆ – ಬಿಟ್ಟು ಬರುವ ಕಾರ್ಯಕ್ರಮ ಜರುಗಿತು.

ಕಲಕೇರಿ ಜು.30

ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮಸ್ಥರು ಎಲ್ಲಾ ರೈತ ಬಾಂಧವರು ಕೂಡಿ ಕೊಂಡು ಜೋಡು ಗುಡಿಯಿಂದ ಡೊಳ್ಳು ಕುಣಿತ ಮೆರವಣಿಗೆ ಮಾಡುತ್ತಾ ಗಾಳಿ ಮರಗಮ್ಮನಿಗೆ ಪೂಜೆಯನ್ನು ಮಾಡಿ ಕಲಕೇರಿ ಸೀಮೆಯಿಂದ ಬೇರೆ ಸೀಮೆಯಲ್ಲಿ ಬಿಟ್ಟು ಅಲ್ಲಿ ಪೂಜೆಯನ್ನು ಮಾಡಿ ಕಲಕೇರಿ ಗ್ರಾಮದ ಎಲ್ಲಾ ರೈತ ಬಾಂಧವರ ಇದ್ದು. ಒಂದು ತಲಾ ತಲಾಂತರ ದಿಂದ ಬಂದಂತ ಪದ್ಧತಿ ಹಿರಿಯರು ಮಾಡಿದಂತ ನಿಯಮಗಳು ಮಳೆ ಬರುತ್ತೆ ಎಂಬ ನಂಬಿಕೆಯಿಂದ ನಾವು ಎಲ್ಲಾ ರೈತರು ಕೂಡಿ ಗಾಳಿ ಮರಗಮ್ಮನನ್ನು ಕಲಕೇರಿ ಸೀಮೆಯಿಂದ ಬೇರೆ ಸೀಮೆಗೆ ಒಯ್ದು ಬಿಟ್ಟು ಬರುವ ಒಂದು ಪದ್ಧತಿ ರೈತರು ಮಳೆ ಬರುತ್ತದೆ. ಎನ್ನುವುದು ಒಂದು ನಂಬಿಕೆ ಮತ್ತು ಒಂದು ಭರವಸೆ ಕಲಕೇರಿ ಗ್ರಾಮದ ಎಲ್ಲಾ ರೈತರು ಹಿರಿಯರು ಪಾಲ್ಗೊಂಡು ಅದ್ದೂರಿಂದ ಮೆರವಣಿಗೆ ಮಾಡುತ್ತಾ ಕಲಕೇರಿ ಸೀಮೆಯಿಂದ ಬೇರೆ ಸೀಮೆಗೆ ಗಾಳಿ ಮರ್ಗಮ್ಮನನ್ನು ಬಿಟ್ಟು ಬರುವುದು ಹಿರಿಯರು ಮಾಡಿದ ಪದ್ಧತಿಯನ್ನು ಎಲ್ಲಾ ರೈತ ಬಾಂಧವರು ಮಾಡಿದ್ದಾರೆ.ಈ ಸಂದರ್ಭದಲ್ಲಿ ಊರಿನ ಗ್ರಾಮಸ್ಥರು.ವಾಗೀಶ್. ಹಿರೇಮಠ್. ಮಡಿವಾಳಯ್ಯ ಲಕ್ಕುಂಡಿ ಮಠ. ವಿಶ್ವನಾಥ್ ಬಡಿಗೇರ್. ಮಲ್ಲು ಎಸ್ ಜಂಬಗಿ. ಕಲ್ಲಪ್ಪ ಜಂಬಗಿ. ಬಸಲಿಂಗಯ್ಯ ಬೆಕಿನಾಳ. ಹಣಮಂತ್ ಸುಂಕದ್. ತುಕಾರಾಂ ರಾಠೋಡ. ಇನ್ನೂ ಹಲವಾರು ರೈತರು ಪಾಲ್ಗೊಂಡು ಈ ಗ್ರಾಮದಲ್ಲಿ ಗಾಳಿಯ ಮರಗಮ್ಮನನ್ನು ಕಲಕೇರಿ ಸೀಮೆಯಿಂದ ಬೇರೆ ಸೀಮೆಗೆ ಬಿಟ್ಟು ಬರುವ ಕಾರ್ಯಕ್ರಮ ಮಾಡಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ ಮನಗೂಳಿ ತಾಳಿಕೋಟೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button