ವ್ಯಾಪಕ ಭ್ರಷ್ಟಾಚಾರ ಮಾಡಲು ಹೊರಟಿರುವ ಶಾಸಕ – ಬಲ್ಲಾವುಣಸಿ ರಾಮಣ್ಣ.

ಕೊಟ್ಟೂರು ಜು .30

ಮಲ್ಲಿಕಾರ್ಜುನ ಖರ್ಗೆ ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ 2013 ರಲ್ಲಿ ರಚನೆಯಾಗಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಜಿಲ್ಲೆಯ ಅಭಿವೃದ್ಧಿಗಾಗಿ ವಿವಿಧ ಉದ್ದೇಶಗಳ ವಿಷಯ ತಜ್ಞರು, ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರು, ಸ್ಥಳೀಯ ಸಂಸ್ಥೆ ಅಧ್ಯಕ್ಷರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಜಿಲ್ಲಾಧಿಕಾರಿಗಳು, ಜಿಲ್ಲಾ ಸಿ.ಇ.ಓ ಒಳ ಗೊಂಡು ಅನುಷ್ಟಾನ ಸಮಿತಿ ಒಳ ಗೊಂಡಿರುತ್ತದೆ. ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕರು ಕೆ.ಕೆ.ಆರ್.ಡಿ.ಬಿ ಯೋಜನೆಯ ಹಣ ಮೊದಲ ಆದ್ಯತೆಯಾಗಿ ವಿಧಾನ ಸಭಾ ಕ್ಷೇತ್ರದಲ್ಲಿನ ಶಿಕ್ಷಣ ಅಭಿವೃದ್ಧಿಗೆ ಬಳಸ ಬೇಕಿತ್ತು ಆದರೆ ಶಾಸಕರು ಆ ಹಣವನ್ನು ತಮ್ಮ ಮನೆಯ ಮುಂದಿನ ಸಿ.ಸಿ. ರಸ್ತೆ ಅಭಿವೃದ್ಧಿಗೆ ಬಳಸಿ ಕೊಳ್ಳುತ್ತಿದ್ದಾರೆ, ಅದು ಯಾವುದೇ ಸರ್ಕಾರದ ಸಂಸ್ಥೆಗಳಿಗೆ ಗುತ್ತಿಗೆ ನೀಡದೇ ಅನಧಿಕೃತ ಹೆವಿಡೆಂಟ್ ಸಂಸ್ಥೆಗೆ ಗುತ್ತಿಗೆ ನೀಡಿ ಆ ಸಂಸ್ಥೆ ಮೂಲಕ ರಸ್ತೆ ಕಾಮಗಾರಿ ಮಾಡಿ ಕೊಳ್ಳುತ್ತಿದ್ದಾರೆ ಎಂದು ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಶಾಸಕರ ವಿರುದ್ಧ ಬಲ್ಲಾವುಣಿಸಿ ರಾಮಣ್ಣ ನೇರವಾಗಿ ಆರೋಪ ಮಾಡಿದರು.ನಮ್ಮ ಕ್ಷೇತ್ರದ ಶಾಸಕರು ಕೇವಲ ಪ್ರಚಾರ ಪ್ರಿಯರು, ನಮ್ಮ ಕ್ಷೇತ್ರದಲ್ಲಿ ಸುಮಾರು 15 ಏತ ನೀರಾವರಿಗಳು ಇದ್ದು ಅವುಗಳು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುತ್ತವೆ. ಇದರಲ್ಲಿ ಸುಮಾರು 65 ಜನ ಗುತ್ತಿಗೆ ನೌಕರರಿದ್ದು ಇವರಿಗೆ 2 ವರ್ಷಗಳಿಂದ ವೇತನವಾಗಿಲ್ಲ, ಜೊತೆಗೆ ಗುತ್ತಿಗೆ ಕರಾರು ನವೀಕರಣ ಗೊಂಡಿಲ್ಲ, ಆ ಕೆಲಸಗಳ ಕಡೆಗೆ ಗಮನ ಹರಿಸದೇ ಕೇವಲ ಪ್ರಚಾರಕ್ಕಾಗಿ 40 ವರ್ಷಗಳ ಇತಿಹಾಸ ಇರುವ ಏತ ನೀರಾವರಿಗಳಿಗೆ ಚಾಲನೆ ನೀಡುತ್ತಾ ಬಂದಿದ್ದಾರೆ. ಎಂದು ಪರಾಜಿತ ಬಿಜೆಪಿ ಅಭ್ಯರ್ಥಿ ಬಲ್ಲಾವುಣಸಿ ರಾಮಣ್ಣ ಹೇಳಿದರು. ಕೆ.ಕೆ.ಆರ್.ಡಿ.ಬಿ ಯೋಜನೆ ಮೊದಲ ಆದ್ಯತೆಯಾಗಿ ಶಾಲಾ ಕೊಠಡಿ, ಶಾಲಾ ಕಾಂಪೌಂಡ್, ಶಾಲಾ ಅಭಿವೃದ್ಧಿಗಳಿಗೆ ಮೊದಲ ಆದ್ಯತೆಗೆ ನೀಡಬೇಕಾದ ಹಣವನ್ನು ಅವರು ರಸ್ತೆ ಕಾಮಗಾರಿಗಳಿಗೆ ಬಳಸಿ ಕೊಂಡಿದ್ದು ಎಷ್ಟು ಸರಿ ಎಂದು ಶಾಸಕರನ್ನು ಪ್ರಶ್ನಿಸಿದರು. ನಂತರ ಮೈತ್ರಿ ಕುರಿತು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಉತ್ತಮವಾಗಿದೆ. ಸ್ಥಳೀಯ ಮಟ್ಟದಲ್ಲಿ ಸ್ವಲ್ಪ ಸಮಸ್ಯೆ ಗೊಂದಲ ಇರುವುದು ನಿಜ ಎಂದು ತಾವೇ ಒಪ್ಪಿಕೊಂಡರು. ಕೆ.ಕೆ.ಆರ್.ಡಿ.ಬಿ ಯೋಜನೆ ಹಣ ಶಿಕ್ಷಣಕ್ಕೆ ಬಳಕೆಯಾಗಲಿ ಎಂಬುದು ಅಷ್ಟೆ ನನ್ನ ಉದ್ದೇಶ, ಕೆ.ಕೆ.ಆರ್.ಡಿ.ಬಿ ಹಣದಿಂದ ಸಿಸಿ ರಸ್ತೆಗಳು ಮಾಡಿಸುತ್ತಿರುವುದಕ್ಕೆ ನನ್ನ ಆರೋಪವಿದೆ ಎಂದು ಬಲ್ಲಾವುಣಸಿ ರಾಮಣ್ಣ ಹೇಳಿದರು. ಈ ಸಂದರ್ಭದಲ್ಲಿ ಜೋಗಿ ಹನುಮಂತಪ್ಪ ಪುರಸಭೆ ಸದಸ್ಯರು ಹನುಮಂತಪ್ಪ ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್ ಕುಮಾರ್ ಸಿ ಕೊಟ್ಟೂರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button