“ಜಗದ ಮನುಕುಲದ ಸ್ನೇಹ ಅಜರಾಮರ”…..

ಎಲ್ಲೋ ಜನನ ಎಲ್ಲೋ ಪಯಣ
ಸಹಜೀವನ ಸ್ನೇಹ ಗುಣ
ಬದುಕಿನ ಬೆಳಕು
ಸ್ನೇಹದ ಹಸ್ತ ಸೌಹಾರ್ದಯುತ
ಬಾಳಿಗೆ ಬೇಕು ಸುಗುಣ ಸ್ನೇಹ
ಬಡತನ ಸಿರಿತನ
ಸುಖ ದುಃಖ
ಉತ್ತಮ ಮಧ್ಯಮ
ಶ್ರೇಷ್ಠ ಕನಿಷ್ಠ
ನೋವು ನಲಿವು
ನಗು ಅಳು
ಯಾವುದೇ ಸಂದರ್ಭದಲ್ಲೂ
ನಿಸ್ವಾರ್ಥವಾಗಿ ಪಾಲ್ಗೊಳ್ಳುವ
ಮನಸ್ಸೆಂದರೆ ಸ್ನೇಹ
ಭಾವ ಸುಂದರ
ಸ್ವಚ್ಛ ಗೆಳತನದ ಒಲವು
ನಿಸ್ವಾರ್ಥಸ್ನೇಹ ಜಗದ ಸಿರಿ
ವಜ್ರ ಮುಷ್ಠಿ ಸದಾ ಸಿದ್ಧ
ಗೆಳತನ ಅಜರಾಮರ.
-ದೇಶಂಸು.
(ಶ್ರೀಎಸ್.ಎಸ್.ಅಂಗಡಿ)
ಆರೋಗ್ಯ ನಿರೀಕ್ಷಣಾಧಿಕಾರಿ
“ವಿಶ್ವಆರೋಗ್ಯಸಂಜೀವಿನಿ”
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು.
ಬಾಗಲಕೋಟ