ನಿಧನ ವಾರ್ತೆ, ಶ್ರೀಮತಿ ಆನೆಪ್ಪರ ಶಾರದಮ್ಮ ನಿಧನ.
ಕೂಡ್ಲಿಗಿ ಅ.01

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ರಾಜೀವ ಗಾಂಧಿ ನಗರದ ವಾಸಿಗಳು, ಹಾಗೂ ದಲಿತ ಹಿರಿಯ ಮಹಿಳಾ ಚೇತನರು. ದಲಿತರ ಪರ ಹೋರಾಟಗಾರರು, ಹಾಗೂ DSS ತಾಲೂಕಾ ಘಟಕದ ಅಧ್ಯಕ್ಷರು ಹಾಗೂ ಮುಖಂಡರಾದ ಮಾಜಿ ಸೈನಿಕ ಎಚ್ ರಮೇಶ ರವರ ತಾಯಿ. ಶ್ರೀಮತಿ ಆನೆಪ್ಪರ ಶಾರದಮ್ಮ (74), ಆಗಸ್ಟ್ 1 ರಂದು ಬೆಳಿಗ್ಗೆ 11 ಗಂಟೆಗೆ ರಾಜೀವ್ ಗಾಂಧಿ ನಗರದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರು ಬಹು ದಿನಗಳಿಂದ, ವಯೋ ಸಹಜ ಅನಾರೋಗ್ಯ ದಿಂದ ಬಳಲುತಿದ್ದರು. ಮೃತರು ಮಕ್ಕಳು ಮೊಮ್ಮಕ್ಕಳು ಸೊಸೆಯಂದಿರು ಸೇರಿದಂತೆ, ತುಂಬು ಕುಟುಂಬವನ್ನು ಅಪಾರ ಬಂಧು ಬಳಗವನ್ನು ಹೊಂದಿದವರಾಗಿದ್ದರು. *ಅಂತ್ಯಕ್ರಿಯೆ*- ಆಗಸ್ಟ್ 2-8-2024 ರ ಶುಕ್ರವಾರ ರಂದು 10 ಘಂಟೆಗೆ ಕೂಡ್ಲಿಗಿ ಪಟ್ಟಣದ ರಾಜೀವ್ ಗಾಂಧಿ ನಗರದ ಹಿಂಭಾಗ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು. *ಸಂತಾಪ*- ಕೂಡ್ಲಿಗಿ ತಾಲೂಕಿನ ದಲಿತ ಸಮುದಾಯದವರು, ಹಾಗೂ ವಿವಿಧ ಸಮುದಾಯದವರು ಸಮಸ್ತ ಗ್ರಾಮಸ್ಥರು. ದಲಿತ ಸಮುದಾಯದವರು ಸೇರಿದಂತೆ, ದಲಿತ ಸಂಘರ್ಷ ಸಮಿತಿ ಸೇರಿದಂತೆ ದಲಿತ ಪರ ಸಂಘಟನೆಗಳು,ಮಾದಿಗ ದಂಡೋರ ಸಂಘಟನೆಯವರು, ಪತ್ರಕರ್ತರು ರೈತರು ಕಾರ್ಮಿಕರು ಮಹಿಳೆಯರು ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು. ದಲಿತ ಸಂಘರ್ಷ ಸಮಿತಿ ವಿವಿಧ ಗ್ರಾಮ ಘಟಕಗಳ, ತಾಲೂಕಾ ಜಿಲ್ಲಾ ರಾಜ್ಯ ಘಟಕಗಳ ಪದಾಧಿಕಾರಿಗಳು ಸರ್ವ ಸದಸ್ಯರು. ಶಾಸಕರು ಮೊದಲ್ಗೊಂಡು ತಾಲೂಕಿನ ವಿವಿಧ ಜನ ಪ್ರತಿನಿಧಿಗಳು, ಹಾಗೂ ಹೋರಾಟಗಾರರು ಗಣ್ಯರು. ಕೂಡ್ಲಿಗಿ ಪಟ್ಟಣದ ಪ್ರಮುಖ ನಾಗರಿಕರು, ಕೂಡ್ಲಿಗಿ ಪಟ್ಟಣದ ನೆರೆ ಹೊರೆ ಗ್ರಾಮಸ್ಥರು. ಮೃತ ಶ್ರೀಮತಿ ಆನೆಪ್ಪರ ಶಾರದಮ್ಮ ರವರ ಅಗಲಿಕೆಗೆ, ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ ಬಿ.ಸಾಲುಮನೆ.ಕೂಡ್ಲಿಗಿ