ಉತ್ತಮ ಆರೋಗ್ಯವೇ ನಮ್ಮ ಗುರಿ, ಡೆಂಗ್ಯೂ ರೋಗ ತಡೆಗೆ – ಮುಂಜಾಗ್ರತೆ ಅರಿವು.

ಬಾಗಲಕೋಟೆ ಅ.02

ಬಾಗಲಕೋಟೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟೆ ಶಂಕ್ರೆಪ್ಪ ಸಕ್ರಿ ಪ್ರೌಢಶಾಲೆ ನವನಗರ ಸಹಯೋಗದಲ್ಲಿ, “ಈಡೀಜ್ ಇಜಿಪ್ತೆ” ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆ ದಿನ ಆರೋಗ್ಯ ಜಾಗೃತಿಯಲ್ಲಿ ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ, ಎಸ್.ಎಸ್ ಅಂಗಡಿಯವರು, ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಮುಂಜಾಗ್ರತೆ ಕ್ರಮಗಳ ಪಾಲನೆ ಆಸ್ಪತ್ರೆಗೆ ಅಲೆದಾಟ ತಪ್ಪಿಸಿ ಕೊಳ್ಳಿ”ಕಡಿತ ಚಿಕ್ಕದು ಅಪಾಯ ದೊಡ್ಡದು” ಘೋಷಣೆಗಳೊಂದಿಗೆ, ಡೆಂಗ್ಯೂ ಸೊಳ್ಳೆ ಸ್ವಚ್ಛ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ ನೀರಿನ ಸಂಗ್ರಹಗಳ ಮೇಲೆ ತಪ್ಪದೇ ಮುಚ್ಚಳಿಕೆ ಹಾಕಬೇಕು ಮುಂಜಾಗ್ರತೆ ಕ್ರಮಗಳ ಪಾಲಿಸಿ ಆಸ್ಪತ್ರೆಗೆ ಅಲೆದಾಟ ತಪ್ಪಿಸಿ ಕೊಳ್ಳಿ ಎಲ್ಲರೂ ಡೆಂಗ್ಯೂ ತಡೆಗೆ ಸಹಕರಿಸ ಬೇಕು ಅಗತ್ಯ ಎಂದರು. ನೀರಿನ ಸಂಗ್ರಹಗಳ ಮೇಲೆ ತಪ್ಪದೇ ಮುಚ್ಚಳಿಕೆ ಹಾಕಬೇಕು, ಸೊಳ್ಳೆ ಪರದೆ ನಿರೋಧಕ ಬಳಸ ಬೇಕು. ಸುತ್ತ ಮುತ್ತ ಪರಿಸರ ಸ್ವಚ್ಛತೆ ಕಾಪಾಡಿ ಕೊಳ್ಳಬೇಕು, ಅನುಪಯುಕ್ತ ವಸ್ತು ಕಸ ವಿಲೇವಾರಿ ಮಾಡಬೇಕು. ವಿವಿಧ ಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ ನೀಡಿದರು. ಹಿರಿಯ ಆರೋಗ್ಯನಿರೀಕ್ಷಣಾಧಿಕಾರಿ,ಬಿ ಎಚ್ ಗುಗ್ಯಾಳ, ಶಂಕ್ರೆಪ್ಪ ಸಕ್ರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ, ಎಮ್ ಎಸ್ ಶೆಟವಾಜಿ, ಗುರು ವೃಂದದವರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button