ನ್ಯಾಯಪೀಠ ದಿಂದ ಮೀಸಲಾತಿಯ ನ್ಯಾಯೋಚಿತ ಹಂಚಿಕೆ – ಎಂ ಯು ಮುಗನೂರ ಅಭಿಮತ.

ಮುಗನೂರ ಆ.04

ಈ ವರೆಗೆ ಮೀಸಲಾತಿ ಸಂಘರ್ಷದ ದಾರಿ ಯಾಗಿತ್ತು ಈಗದು ಸಾಮರಸ್ಯದ ಸೇತುವೆಯಾಗಿದೆ. ಪರಿಶಿಷ್ಟ ಜಾತಿ ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸಲು ಆಯಾ ರಾಜ್ಯಗಳಿಗೆ ಅಧಿಕಾರವಿದೆ ಎಂಬ ಐತಿಹಾಸಿಕ ತೀರ್ಪುನ್ನು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಏಳು ಪೀಠದ ಸದಸ್ಯರು ತೀರ್ಪು ನೀಡಿದ್ದು. ಇದರಿಂದ ಹಂಚಿ ಉಣ್ಣುವುದು ನಮ್ಮ ಸೌಂಸ್ಕೃತಿ ಮೀಸಲಾತಿಯ ನ್ಯಾಯೋಚಿತ ಹಂಚಿಕೆ ಹೊಸ ಇತಿಹಾಸ ನಿರ್ಮಿಸಲಿದೆ ಎಂದು ಮಾದಿಗ ಸಮಾಜದ ಹಿರಿಯ ಹೋರಾಟಗಾರರಾದ ಎಂ ಯು ಮುಗನೂರ ಅಭಿಪ್ರಾಯಪಟ್ಟರು.

ಅವರು ಸಮೀಪದ ಮುಗನೂರದಲ್ಲಿ ಏರ್ಪಡಿಸಿದ್ದ ಒಳ ಮೀಸಲಾತಿ ಹೋರಾಟಗಾರ ರೊಂದಿಗಿನ ಸಮಾಲೋಚನಾ ಸಭೆಯನ್ನು ಜ್ಯೋತಿ ಬೆಳಗಿಸಿ ಮಾತನಾಡುತ್ತಾ ಮೀಸಲಾತಿ ಒಳಗಿದ್ದ ಮೀಸಲಾತಿ ಯಿಂದ ದೂರವೇ ಉಳಿದಿದ್ದ ನಿರ್ಲಕ್ಷ್ಯಿತ ಕುಟುಂಬಗಳ ಜಾತಿ ಸಮುದಾಯಗಳಿಗೆ ಸುಪ್ರೀಂ ಕೋರ್ಟ್ ತೀರ್ಪುನಿಂದ ಒಳ ಮೀಸಲಾತಿ ಆಶಾಕಿರಣವಾಗಿದೆ ಅದಕ್ಕಾಗಿ ಅಳುವ ಸರಕಾರಗಳು ಸಾಮಾಜಿಕ ನ್ಯಾಯದ ಇಚ್ಚಾ ಶಕ್ತಿಯನ್ನು ಪ್ರದರ್ಶಿಸ ಬೇಕು ಮಾದಿಗ ಸಂಘಟನೆಗಳು ಅತ್ಯಂತ ತೀವ್ರ ತರವಾಗಿ ಸರಕಾರದ ಮೇಲೆ ಒತ್ತಡ ತರಲು ಹೋರಾಟ ರೂಪಿಸ ಕೊಳ್ಳಬೇಕಿದೆ ಎಂದರು.

ನ್ಯಾಯಾವಾದಿಗಳಾದ ಶಿವಾನಂದ ಎಂ ಟವಳಿ, ರಾಜು ಎಸ್ ಮಣ್ಣಿಕೇರಿ,ಮಾದಿಗ ಜಿಲ್ಲಾ ಮುಖಂಡರಾದ ಲಕ್ಷ್ಮಣ ಚಂದರಗಿ,ವೈ ವೈ ತಿಮ್ಮಾಪುರ, ಸತ್ತ್ಯಪ್ಪ ದಳವಾಯಿ, ಮಾತನಾಡಿದರು ಮಾದಿಗ ಹೋರಾಟಗಾರ ಮುತ್ತಣ್ಣ ಬೆಣ್ಣೂರ ಅಧ್ಯಕ್ಷತೆ ವಹಿಸಿಕೊಂಡಿದ್ದ ವೇದಿಕೆಯಲ್ಲಿ ಕೆ ಡಿ ಮುಗನೂರ, ಪರಶುರಾಮ ಬಸವನಾಳ, ಅಶೋಕ್ ಬೂದಿಹಾಳ, ಉಪಸ್ಥಿತರಿದ್ದರು ಆರಂಭದಲ್ಲಿ ಜಗದೀಶ್ ಮಾದರ್ ಸ್ವಾಗತಿಸಿದರು ಕೊನೆಯಲ್ಲಿ ಮಲ್ಲು ವಂದಿಸಿದರು ಇದೆ ಸಂದರ್ಭದಲ್ಲಿ ಮೂರು ದಶಕಗಳ ಒಳ ಮೀಸಲಾತಿ ಚಳುವಳಿಯಲ್ಲಿ ಮುಂಚೂಣಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ ಸುಮಾರು 19 ಮುಖಂಡರನ್ನು ಶ್ರೀ ಶಿವಶರಣ ಚನ್ನಯ ವೇದಿಕೆಯಿಂದ ಸನ್ಮಾನಿಸಲಾಯಿತು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್ ವಾಯ್ ಕಿಳ್ಳಿ ಇಲಕಲ್ಲ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button