ರಾಂಪುರ ಗ್ರಾಮದಲ್ಲಿ ಬನ್ನಿ ಮಹಾ ಕಾಳೇಶ್ವರಿ ಜೀರ್ಣೋದ್ಧಾರ ಹುಚ್ಚು ಮಲ್ಲೇಶ್ವರ ದೇವಸ್ಥಾನ ಸಿ.ಸಿ ರಸ್ತೆ ವಿವಿಧ ಕಾಮಗಾರಿಗಳಿಗೆ – ಭೂಮಿ ಪೂಜೆ ಮಾಡಿದ ಶಾಸಕರು.
ರಾಂಪುರ ಆ.05

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಎನ್.ವೈ ಗೋಪಾಲಕೃಷ್ಣ ಶಾಸಕರು ಇಂದು ರಾಂಪುರದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ 2023 24 ನೇ ಸಾಲಿನ ಪಂಚಾಯತ್ ರಾಜ್ ಇಲಾಖೆ ಚಿತ್ರದುರ್ಗ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಅನುದಾನ 88 ಲಕ್ಷ ರಾಂಪುರದ ಬನ್ನಿ ಮಹಾಕಾಳೇಶ್ವರಿ ಜೀರ್ಣೋದ್ಧಾರಕ ಮತ್ತು ಹುಚ್ಚು ಮಲ್ಲೇಶ್ವರ ರಸ್ತೆ ಅಭಿವೃದ್ಧಿ ಸುತ್ತ ಮುತ್ತಲಿನ 22 ದೇವಸ್ಥಾನಗಳು ಮತ್ತು ಹಳ್ಳಿಗಳ ಸಿಸಿ ರಸ್ತೆಗಳು ಅಭಿವೃದ್ಧಿ ಮಾಡಿಸಿದಂತ ಶಾಸಕರು ತಾಲೂಕಿನ ಇನ್ನು ಅನೇಕ ಅಭಿವೃದ್ಧಿಗಳು ಮಾಡಿಸಿ ಈಗ ಮೊಳಕಾಲ್ಮೂರು ಕ್ಷೇತ್ರಕ್ಕೆ ಇನ್ನು ಒಳ್ಳೆಯ ಕೆಲಸಗಳನ್ನು ಹಮ್ಮಿಕೊಂಡಿರುವ ಶಾಸಕರು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕುಡಿಯುವ ನೀರಿನ ಯೋಜನೆ ಹೊಸ ಹೊಸ ಕಂಪನಿಗಳು ತಂದು ಉದ್ಯೋಗ ಭರವಸೆ ನೀಗಿಸಿ ವಿರೋಧ ಪಕ್ಷದವರು ಸರ್ಕಾರದಲ್ಲಿ ಅನುದಾನ ಇಲ್ಲ ಕ್ಷೇತ್ರ ಹೇಗೆ ಡೆವಲಪ್ಮೆಂಟ್ ಮಾಡ್ತೀರಾ ಅಂತ ಮಾತಾಡುವಂತ ಮಾತುಗಳು ಆದರೆ ಕಾಂಗ್ರೆಸ್ ಸರ್ಕಾರದಲ್ಲಿ ಎನ್ ವೈ ಗೋಪಾಲಕೃಷ್ಣ ಶಾಸಕರು ಧರ್ಮ ಮಾರ್ಗದಲ್ಲಿ ಕೆಲಸಗಳು ಸಾಗುತ್ತಲೇ ಇರುತ್ತವೆ ಧರ್ಮ ಮಾರ್ಗದಲ್ಲಿ ಯಾರು ಇರುತ್ತಾರೆ ಅಂತಹ ವ್ಯಕ್ತಿಗೆ ಯಾವತ್ತಿಗೂ ರಾಜ ಮರ್ಯಾದೆ ಇರುತ್ತೆ ಅಂತ ಗೊತ್ತಾಗುತ್ತದೆ.

ಕ್ಷೇತ್ರಕ್ಕೆ ಕೆಲಸ ಮಾಡುವವರಿಗೆ ಯಾವ ಕೊರತೆಯೂ ಬೇಕಾಗಿಲ್ಲ ಹಾಗೆ ಕೆಲಸಗಳು ಮಾಡಿಸುತ್ತಾ ಇರುತ್ತಾರೆ ಈಗ ಅಂದಾಜು ನೂರಾರು ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಲು ಮುಂದಾಗಿದ್ದಾರೆ ಈಗ ಕಾಮಗಾರಿಗಳು ಸಹ ನಡೆಯುತ್ತಾ ಇರುತ್ತವೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ. ಹೊಂಬಾಳೆ ಮೊಳಕಾಲ್ಮುರು.