“ನಿತ್ಯ ಕಾಯಕದೊಂದಿಗೆ ಸಮಾಜಮುಖಿ ಕಾರ್ಯ ಚಿಂತನೆಗಳು ನಿಜ ಬದುಕಿನ ಬೆಳಕು”…..

ಮಾನವ ಭೂಮಿಗೆ ಬಂದ ಕ್ಷಣಗಳಿಂದ ಸಂತಾನ ಬೆಳೆಸಿ ಪೋಷಿಸುವದೇ ನಿಜ ಬದುಕಿನ ಪಯಣದಲ್ಲಿ ಯಶಸ್ವಿ ಇರುವಿಕೆ ನಡವಳಿಕೆ ಸಂಸ್ಕಾರ ಸಂಸ್ಕೃತಿ ಸಿದ್ಧಾಂತ ಶುದ್ಧತೆ ಸರಳತೆ ಮತ್ತು ಕುಟುಂಬ ತನ್ನ ಸದಸ್ಯರಿಗೆ ಸಮಾಜದಲ್ಲಿ ಆದರ್ಶ ತನವೆನಸಿ ಅನುಸರಿಸಲು ಉತ್ತಮ ಬದುಕು ಸಾಗಿಸಲು ಉತ್ತಮವಾದಾಗ ಬದುಕಿಗೊಂದು ಅರ್ಥ. ಬದುಕಿನಲ್ಲಿ ಜರುಗುವ ಸಣ್ಣ ಪುಟ್ಟ ಘಟನಾವಳಿಗಳು ನೈಜತೆಯ ಅನಾವರಣ ಮಾಡುವ ಮೂಲಕ ವೈಯಕ್ತಿಕ ಕುಟುಂಬ ಸಮಾಜದ ಹಿತ ಬಯಸುವ ಕಾರ್ಯದ ಭರವಸೆಯ ಬೆಳಕು ಚೆಲ್ಲುವ ಮಹೋನ್ನತ ಸಂಸ್ಕಾರ ಸಂಸ್ಕೃತಿ ಸಿದ್ಧಾಂತ ಅಳವಡಿಸಿ ಕೊಂಡು ಉತ್ತಮ ಕಾರ್ಯ ನಿರ್ವಹಿಸಲು ಸಾಧ್ಯ. ನೋವು ನಲಿವು ಸುಖ ದುಃಖಗಳ ಅರಿವು ಹಿರಿಯ ಕುಟುಂಬ ಸದಸ್ಯರ ಪ್ರಭಾವ ಬೀರುತ್ತದೆ. ಸೃಷ್ಠಿಯಲ್ಲಿ ಜೀವ ಸಂಕುಲಗಳ ಜೀವಿತಾವಧಿಯಲ್ಲಿ ಸಂಘ ಪರಿವಾರದ ನಡುವಳಿಕೆ ಆಹಾರ ಪದ್ಧತಿ ನಿತ್ಯ ಕಾಯಕದ ಮಹತ್ವ ಅವಶ್ಯಕ, ಅನಿವಾರ್ಯ ಬದುಕುವ ರೀತಿ ತನ್ನ ನೈಜತೆ ನೈತಿಕ ಮೌಲ್ಯ ಪಳೆಯುಳಿಕೆ ಮುಖ್ಯವಾಗಿದೆ. ನಿತ್ಯ ಕಾಯಕದೊಂದಿಗೆ ಸಮಾಜಮುಖಿ ಕಾರ್ಯ ಚಿಂತನೆಗಳು ನಿಜ ಬದುಕಿನ ಬೆಳಕು ಶ್ರಮವಹಿಸಿ ದುಡಿಯುವವರು ನಿಜ ಸುಖಿ ಜೀವಿಗಳು ಜೀವನದ ದಿನನಿತ್ಯ ಕಾರ್ಯದೊಂದಿಗೆ ಹಿರಿಯ ಅನುಭವಿಕರ ಜೊತೆ ಕೆಲ ಕ್ಷಣಗಳು ಆನಂದ ಹಾಗೂ ಆರೋಗ್ಯಕರ ಪ್ರಯೋಜವಾಗುವದು, ಮಕ್ಕಳ ಸ್ನೇಹ ಅವರೊಂದಿಗೆ ಮಾತುಕತೆ ನಡೆಸುವದರಿಂದ ಜೀವಮಾನದ ಉತ್ತಮ ಸಮಯವಾಗುವದು.ಕುಟುಂಬ ಸಮೇತರಾಗಿ ಭೋಜನ ಸವಿಯೋದು ಒಂದು ಸಂತೋಷ ದಾಯಕ ಕ್ಷಣಗಳಿದ್ದರೆ ಸುಖಾನಂದ ಸಿರಿತನ ಮನೆಯಲ್ಲಿ ಯಾರು ನಿನಗಿಂತ ಕಿರಿಯರಿಲ್ಲ ಹಿರಿಯರಲ್ಲಿ ಯೋಗಕ್ಷೇಮ ವಿಚಾರಣೆ ಮಾಡುವುದು ಆದ್ಯ ಕರ್ತವ್ಯ ಜವಾಬ್ದಾರಿ ಯಾಗಬೇಕು ಹಣ ಆಸ್ತಿಗಳಿಕೆಗೆ ಅಂತಸ್ತಿಕೆ ಎನ್ನುವುದು ಮನಸ್ಸಿನ ಅಹಂ ಎನಿಸುವುದು ಸಹಜ ಜೀವನ ಶೈಲಿ ಮಾನವೀಯ ಮೌಲ್ಯಗಳೇ ನಿಜ ಶ್ರೀಮಂತಿಕೆಯ ಆಸ್ತಿಗಳಿಕೆ ಅಳವಡಿಸುವ ಗುಣ ಸಣ್ಣ ಸಣ್ಣ ಸಹಾಯ ಕಾಯಕ ಬೇರೆಯವರು ಸಂತೋಷ ದಾಯಕ ಜೀವನ ಬಯಕೆಯ ಭಾವ ಸುಂದರತೆಯ ಮೇರು ವ್ಯಕ್ತಿತ್ವ ವಿಕಸನ ವಾಗುವುದು ಪರಿಸರ ಸ್ನೇಹಿ ಪ್ರಾಣಿ ಸಂಕುಲಗಳ ಉಳಿಸಿ ಬೆಳಸಲು ಬೇಕಾದ ವ್ಯವಸ್ಥೆ ರೂಪಿಸಿ ಸಕಲ ಜೀವಿ ಲೇಸ ಬಯಸಿದವ ಜಗಕೆ ಮಾದರಿ ಎನಿಸುವುದು.

-ದೇಶಂಸು

ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ

ಆರೋಗ್ಯ ನಿರೀಕ್ಷಣಾಧಿಕಾರಿ

ಬಾಗಲಕೋಟೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button