ಹುನಗುಂದ ತಾಲೂಕಿನ ಜೀವ ನದಿಗಳಿಗೆ ಬಾಗಿನ ಅರ್ಪಿಸಿದ – ಎಸ್.ಆರ್. ನವಲಿ ಹೀರೆಮಠ.

ಹುನಗುಂದ ಆ.06

ಕೃಷ್ಣೆ ಘಟಪ್ರಭೆ ಮತ್ತು ಮಲಪ್ರಭೆ ನದಿಗಳ ಆಯಕಟ್ಟಿನ ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿ ತ್ರಿವೇಣಿ ಸಂಗಮ ನದಿಗಳು ಮೈದುಂಬಿ ಹರಿಯುತ್ತಿರುವ ಹಿನ್ನಲೆಯಲ್ಲಿ ಹುನಗುಂದ ಮತ ಕ್ಷೇತ್ರದ ಸಮಾಜ ಸೇವಕರು ಹಾಗೂ ಎಸ್.ಆರ್.ಎನ್.ಇ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್ ನವಲಿ ಹಿರೇಮಠ ಮತ್ತು ಅವರು ಅಪಾರ ಬೆಂಬಲಿಗರೊಂದಿಗೆ ಕೂಡಲ ಸಂಗಮದ ಮೂರು ನದಿಗಳ ಸಂಗಮದ ಸ್ಥಳದಲ್ಲಿ ಬಾಗಿನ ಅರ್ಪಿಸಿದರು. ಉತ್ತರ ಕರ್ನಾಟಕ ಸೇರಿದಂತೆ ಬಾಗಲಕೋಟಿ ವಿಜಯಪುರ ಅಖಂಡ ಜಿಲ್ಲೆಯ ಅದರಲ್ಲೂ ಹುನಗುಂದ ತಾಲೂಕಿನ ಜೀವ ನದಿಗಳಾದ ಕೃಷ್ಣೆ ಘಟಪ್ರಭೆ ಮತ್ತು ಮಲಪ್ರಭೆ ನದಿಗಳು ಈ ಬಾರಿ ಆಷಾಡ ಮಾಸದಲ್ಲಿಯೇ ಭರ್ತಿಯಾಗಿದ್ದು. ಇದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ನದಿಗಳು ಭರ್ತಿ ಯಾಗುತ್ತಿದಂತೆ ಕ್ಷೇತ್ರದ ಜನ ಪ್ರತಿನಿಧಿಗಳು,ರೈತರು ಬಾಗಿನ ಅರ್ಪಿಸುವುದು ವಾಡಿಕೆ. ಅದರಂತೆ ಹುನಗುಂದ ಮತ ಕ್ಷೇತ್ರದ ಸಮಾಜ ಸೇವಕ ಎಸ್.ಆರ್ ನವಲಿ ಹಿರೇಮಠ ಮಂಗಳವಾರ ಕೂಡಲ ಸಂಗಮಕ್ಕೆ ಕೃಷ್ಣೆ ಘಟಪ್ರಭೆ ಮಲಪ್ರಭೆಗೆ ಬಾಗಿನ ಅರ್ಪಿಸಲು ಆಗಮಿಸುತ್ತಿದ್ದಾರೆ ಎನ್ನುವ ವಿಷಯ ಕೇಳಿದ ಅವರ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಜಮಾವಣೆ ಯಾಗಿದ್ದರು ಎಸ್.ಆರ್.ನವಲಿ ಹಿರೇಮಠ ಕೂಡಲ ಸಂಗಮಕ್ಕೆ ಬರುತ್ತಿದಂತೆ ಬಾಜಾ- ಭಜಂತ್ರಿ ಸಮೇತ ಸಂಗಮನಾಥನ ದೇಗುಲ ಪ್ರವೇಶಿಸಿ ಕ್ಷೇತ್ರದ ಒಡೆಯ ಶ್ರೀ ಸಂಗಮನಾಥನಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಕ್ಷೇತ್ರದ ರೈತರಿಗೆ, ಜನ ಸಾಮಾನ್ಯರಿಗೆ ಒಳ್ಳೆಯದಾಗಲಿ ಮತ್ತು ಸಮೃದ್ದಿ ಬೆಳೆ ಬರಲಿ ರೈತರ ಮುಖದಲ್ಲಿ ಸದಾ ಮಂದಹಾಸ ಮೂಡಿಲಿ ಎಂದು ದೇವಸ್ಥಾನದ ಅರ್ಚಕ ಪ್ರಭು ಪುರಾಣಿಕ ಮಠ ನೇತೃತ್ವದಲ್ಲಿ ಹೊಸ ಮರಗಳಲ್ಲಿ ನವ ಧಾನ್ಯಗಳ ಜೊತೆಗೆ ಹೂ, ಹಣ್ಣು, ಹಾಗೂ ಹೊಸ ವಸ್ತ್ರಗಳನ್ನು ಇಟ್ಟು ಶಾಸ್ತ್ರೋಕ್ತವಾಗಿ ಗಂಗಾ ಮಾತೆಗೆ ಪೂಜೆ ಸಲ್ಲಿಸಿ ನಂತರ ತ್ರಿವೇಣಿ ನದಿಗಳಿಗೆ ಬಾಗಿನ ಅರ್ಪಿಸಿದರು. ನಂತರ ವೇದಿಕೆಯ ಕಾರ್ಯಕ್ರಮದಲ್ಲಿ ಮಾತನಾಡಿ ರಾಜ್ಯದಲ್ಲಿ ಉತ್ತಮ ಮಳೆಯಾಗಿ ರಾಜ್ಯದ ಎಲ್ಲಾ ನದಿಗಳು ತುಂಬಿ ಹರಿಯುತ್ತಿದ್ದು. ಕ್ಷೇತ್ರ ಜೀವ ನದಿಗಳಾದ ಕೃಷ್ಣೆ ಘಟಪ್ರಭೆ ಮತ್ತು ಮಲಪ್ರಭೆ ನದಿಗಳು ಸಹ ಮೈದುಂಬಿ ಹರಿದು ರೈತರ ಮೊಗದಲ್ಲಿ ಹರ್ಷವನ್ನುಂಟು ಮೂಡಿಸಿವೆ. ಇದೇ ರೀತಿ ಪ್ರತಿ ವರ್ಷವೂ ಎರಡು ನದಿಗಳು ತುಂಬಿ ಹರಿದು ಕ್ಷೇತ್ರದಲ್ಲಿ ಹಸಿರು ಕ್ರಾಂತಿಯಾಗಲಿ, ರೈತರ ಬಾಳಿಗೆ ಬೆಳಕಾಗಲಿ, ನಮ್ಮ ರೈತರಿಗೆ ಯಾವ ಸಂಕಷ್ಟಗಳು ಎದುರಾಗದಿರಲಿ ಎಂದು ಆ ಸಂಗಮನಾಥನಲ್ಲಿ ಪ್ರಾರ್ಥಿಸುತ್ತೇನೆ ಎಂದರು.ಎಸ್.ಆರ್.ನವಲಿ ಹಿರೇಮಠರು ಮಾತು ಮುಗಿಸುತ್ತಿದಂತೆ ಅವರ ಕಾರ್ಯಕರ್ತ ಮಲ್ಲು ಕಮರಿ ಎದ್ದು ನಿಂತು ವಿಧಾನ ಸಭೆಯ ಚುನಾವಣೆಯಲ್ಲಿ ನೀವು ಸೋತ ನಂತರ ಕ್ಷೇತ್ರದಲ್ಲಿಯೇ ಇರೋದಿಲ್ಲ. ಸೋತ ಮೇಲೆ ಕ್ಷೇತ್ರವನ್ನು ಬಿಟ್ಟು ಓಡಿ ಹೋಗಿದ್ದಾರೆ ಎಂದು ಹಾಲಿ ಮತ್ತು ಮಾಜಿ ಶಾಸಕರು ಕ್ಷೇತ್ರಾದ್ಯಂತ ಅನೇಕ ಕಾರ್ಯಕ್ರಮಗಳಲ್ಲಿ ಮಾತನಾಡುತ್ತಾರೆ ಇದರಿಂದ ನಿಮ್ಮ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಠಿಯಾಗುತ್ತಿದೆ ಇದಕ್ಕೆ ನೀವು ಸ್ಪಷ್ಟಿಕರಿಸ ಬೇಕು ಎಂದಾಗ ನಾನು ಎಲ್ಲೂ ಓಡಿ ಹೋಗಿಲ್ಲ. ನಾನು ಹುಟ್ಟಿದ ಕ್ಷೇತ್ರ ನನ್ನ ಕೊನೆಯ ಉಸಿರು ಇರುವ ತನಕ ನಿಮ್ಮೊಂದಿಗೆ ಸದಾ ಇರುತ್ತೇನೆ. ಈ ಕ್ಷೇತ್ರದ ಸಮಗ್ರ ಅಭಿವೃದ್ದಿಯೇ ನನ್ನ ಗುರಿ.ಮಾತನಾಡುವರಿಗೆ ನಾವು ಎಂದು ಮಾತನಾಡ ಬಾರದು. ಚುನಾವಣೆಯಲ್ಲಿ ಗೆಲುವು ಸೋಲು ಸರ್ವೆ ಸಾಮಾನ್ಯ. ನಾವೆಲ್ಲರೂ ಕೂಡಿ ಕೊಂಡು ಮುಂದೆ ಬರುವ ತಾಲೂಕ ಪಂಚಾಯತ ಹಾಗೂ ಜಿಲ್ಲಾ ಪಂಚಾಯತ ಚುನಾವಣೆಯಲ್ಲಿ ಎರಡು ರಾಷ್ಟೀಯ ಪಕ್ಷಗಳಿಗೆ ನಮ್ಮ ತಾಕತ್ತೇನು ಎನ್ನುವುದ್ದನ್ನು ತೋರಿಸೋಣ ಎಂದರು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ  ಗಾಣಿಗೇರ, ಷಡಕ್ಷರಯ್ಯ ಹಿರೇಮಠ, ಜಗದೀಶ ಹೊಸಮನಿ, ಎಂ.ಎಸ್.ಮಠ, ಎಂ.ಎಸ್ ಪಾಟೀಲ, ಎಲ್ ಎಂ ಪಾಟೀಲ, ಜಾಕೀರ ಹುಸೇನ ತಾಳಿಕೋಟಿ, ಮಹಾಂತೇಶ ಮೂಲಿನಮನಿ, ಮುತ್ತಣ್ಣ ಮೂಲಿನಮನಿ, ನಿಂಗಪ್ಪ ಜಾಲಿಹಾಳ, ಕೃಷ್ಣ ಜಾಲಿಹಾಳ, ರಮೇಶಗೌಡ ಮರಿಗೌಡ್ರ, ಅಶೋಕ ತಳಗಡೆ, ರವಿ ಅಂಬಿಗೇರ, ಸಂಗಪ್ಪ ಹಡಪದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button