ನಾಗರ ಪಂಚಮಿ ನಿಮಿತ್ತ ಖೋ ಖೋ ಪಂದ್ಯಾವಳಿ ಆಯೋಜನೆ.
ಮರಿಯಮ್ಮನಹಳ್ಳಿ ಆ.10

ನಾಗರ ಪಂಚಮಿ ನಿಮಿತ್ತ ಗ್ರಾಮೀಣ ಸೊಗಡಿನಂತೆ ಯುವಕರಲ್ಲಿ ಆಟೋಟಗಳ ಬಗ್ಗೆ ಪ್ರೋತ್ಸಾಹ ತುಂಬಲು ನಾಗರ ಪಂಚಮಿಯ ವಿಶೇಷ ದಿನದಂದು ಪಟ್ಟಣದ ಎ.ಕೆ. ಕಾಲೋನಿಯ ಯುವಕರು ತಾವೇ ತಂಡಗಳನ್ನು ರಚಿಸಿ ಕೊಂಡು ಖೋಖೋ ಪಂದ್ಯಾವಳಿಯನ್ನು ಆಯೋಜಿಸಿದ್ದರು. ಈ ಪಂದ್ಯಾವಳಿಯಲ್ಲಿ ಭಾಗವಹಿಸಿ ನೋಡುಗರಿಗೆ ರಮಣೀಯ ಕ್ಷಣಗಳನ್ನು ನೋಡಿ ಕಣ್ತುಂಬಿ ಕೊಳ್ಳುವಂತೆ ಆಟ ಆಡಿದರು. ಪಂದ್ಯದಲ್ಲಿ ಪ್ರಥಮ ಬಹುಮಾನ ‘ಜೈ ಭೀಮ್’ ತಂಡ 5,000 ಸಾವಿರ ನಗದು ಬಹುಮಾನ ದೊಂದಿಗೆ ಟ್ರೋಫಿ ಗೆದ್ದರೆ. ‘ಪರಮಾತ್ಮ’ ತಂಡ ದ್ವಿತೀಯ ಬಹುಮಾನ 3,000 ಸಾವಿರ ನಗದು ಮತ್ತು ಟ್ರೋಫಿ ಗೆದ್ದು ಸಮಾಧಾನ ಪಡಬೇಕಾಯಿತು. ಪಂದ್ಯದ ನಿರ್ಣಯಕರಾಗಿ, ಎಲ್. ಸುರೇಶ, ಎಂ. ದುರುಗಪ್ಪ, ವ್ಯವಸ್ಥಾಪಕರಾಗಿ, ಎಲ್. ಬಿ ಮಂಜುನಾಥ, ಹಲಗಿ ಉಮೇಶ.ನಡೆಸಿ ಕೊಟ್ಟರು. ಈ ಸಂಧರ್ಭದಲ್ಲಿ ಲಕ್ಕಿಮರದ ಹನುಮಂತಪ್ಪ, ಭರ್ಮಪ್ಪ, ಪೈಲ್ವಾನ್ ವೆಂಕಟೇಶ್, ಹೊಸಗೇರಿ ಹುಲುಗಪ್ಪ, ಎಂ. ಸ್ವಾಮಿ, ಹಲಗಿ ಹನುಮಂತ, ಎಲ್. ರಾಮಮೂರ್ತಿ, ವಿಶ್ವನಾಥ್, ರಾಜ, ಆನಂದ,ಎಂ. ಮಂಜುನಾಥ, ವಿ. ಪರುಶುರಾಮ, ಎಲ್ ಸ್ವಾಮಿ, ಗಂಗಾಧರ, ಕೊಟ್ರೇಶ ಇತರರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ