“ಡೆಂಗ್ಯೂ, ಮಲೇರಿಯಾ ರೋಗ ತಡೆಗೆ, ಸೊಳ್ಳೆ ಉತ್ಪತ್ತಿ ತಡೆಯಿರಿ”.
ಗುಂಡನಪಲ್ಲೆ ಆ.12

ಬಾಗಲಕೋಟೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಬೆನಕಟ್ಟಿ ಉಪ ಕೇಂದ್ರ ವ್ಯಾಪ್ತಿಯ ಗುಂಡನಪಲ್ಲೆ ಗ್ರಾಮದಲ್ಲಿ “ಮಲೇರಿಯಾ ಡೆಂಗ್ಯೂ ನಿಯಂತ್ರಣಕ್ಕಾಗಿ ಸೊಳ್ಳೆ ಉತ್ಪತ್ತಿ ತಡೆಯಿರಿ” ಆರೋಗ್ಯ ಅರಿವು ಜನ ಜಾಗೃತಿ ಆಯೋಜನೆ,ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿಯವರು, ಡೆಂಗ್ಯೂ, ಮಲೇರಿಯಾ ರೋಗ ತಡೆಗೆ, ಸೊಳ್ಳೆ ಉತ್ಪತ್ತಿ ತಡೆಯಿರಿ. ಸೊಳ್ಳೆ ಉತ್ಪತ್ತಿ ತಾಣಗಳು ಬೆಳೆಯದಂತೆ ನೋಡಿ ಕೊಳ್ಳಬೇಕು ಸೊಳ್ಳೆ ಪರದೆ ನಿರೋಧಕ ಬಳಸಬೇಕು. ಸುತ್ತ ಮುತ್ತ ಪರಿಸರ ಸ್ವಚ್ಛತೆ, ವೈಯಕ್ತಿಕ ಸ್ವಚ್ಛತೆ ಶುದ್ಧ ನೀರು ಸೇವನೆ ಪ್ರಾಮುಖ್ಯತೆ ನೀಡಬೇಕು ಎಂದು ಜಾಗೃತಿ ಮೂಡಿಸಿದರು.ಯಾವುದೇ ತರಹ ಜ್ವರ ಕಾಣಿಸಿದರೆ ಹತ್ತಿರದ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿರಿ. ಡೆಂಗ್ಯೂ, ಮಲೇರಿಯಾ ರೋಗದ ಭಯ ಬೇಡ, ಮುನ್ನೆಚ್ಚರಿಕೆ ಕ್ರಮ ಪಾಲನೆ ಮಾಡಬೇಕು. ಹಾಗೂ ಗ್ರಾಮದಲ್ಲಿ ಮನೆ ಮನೆ ಭೇಟಿ ನೀಡಿ ಸಂಶಯುತ ಮಲೇರಿಯಾ ರಕ್ತ ಲೇಪನ ಸಂಗ್ರಹ ಮಾಡಿ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು.”ಆರೋಗ್ಯ ಅರಿವು” ಜನರಲ್ಲಿ ಜಾಗೃತಿ ಮೂಡಿಸಿದರು ಡೆಂಗ್ಯೂ, ಮಲೇರಿಯಾ ರೋಗ ತಡೆಗೆ ಸೊಳ್ಳೆ ಉತ್ಪತ್ತಿ ತಡೆಯಿರಿ ಆರೋಗ್ಯ ಜನ ಜಾಗೃತಿಯಲ್ಲಿ ತಾಲುಕಾ ಪಂಚಾಯತ ಮಾಜಿ ಸದಸ್ಯ ರಾಜಶೇಖರ್ ಅಂಗಡಿ, ಗ್ರಾಮದ ಬಸವರಾಜ ಜೋಗರಡ್ಡಿ ಕಿರಣ ವಾಲಿಕಾರ ಶಂಕ್ರೆಪ್ಪ ಚಿಪರಿ ಮುಖಂಡರುಗಳು ಯುವಕರು ಭಾಗವಹಿಸಿದ್ದರು.