ಕೊಟ್ಟಲಗಿ ಗ್ರಾಮದ ಭಾವಿವೊಂದರಲ್ಲಿ ಆಕಸ್ಮಿಕವಾಗಿ ಕಾಲುಜಾರಿ ಬಿದ್ದಿರುವ ಆಕಳನ್ನು ರಕ್ಷಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಯವರು.

ಕೊಟ್ಟಲಗಿ ಆ.13

ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ಬಸವರಾಜ್ ಭೈರಪ್ಪ ಜಾಂಬಗೊಂಡರವರ ಜರ್ಸಿ ಆಕಳು ದಿನಾಂಕ 12.08.2024. ರಂದು ಸಾಯಂಕಾಲದ ಸಮಯದಲ್ಲಿ ಅಂದಾಜು 30×30 ಅಡಿ ವಿಸ್ತಾರವಾದ 60 ರಿಂದ 65 ಅಡಿ ಆಳದ ಅದರಲ್ಲಿ 20 ಅಡಿ ಆಳದ ತೆರೆದ ನೀರಿರುವ ಭಾವಿಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಜರ್ಸಿ ಆಕಳು ಬಿದ್ದಿದ್ದು, ಸದರಿ ಸ್ಥಳೀಯ ನಿವಾಸಿಗಳು ಘಟನೆಯ ವಿಷಯವನ್ನು ಅಥಣಿ ಅಗ್ನಿಶಾಮಕ ಠಾಣೆಗೆ ದೂರವಾಣಿ ಕರೆ ಮಾಡಿ ತಿಳಿಸಿದರು, ಕರೆ ಬಂದ ತಕ್ಷಣ ಜಲ ವಾಹನ ದೊಂದಿಗೆ ಅಗ್ನಿಶಾಮಕ ತಂಡ ಸ್ಥಳಕ್ಕೆ ದೌಡಾಯಿಸಿ ಕಾರ್ಯ ಪ್ರವೃತ್ತರಾಗಿ ಸುಮಾರು 60 ರಿಂದ 65 ಅಡಿ ಆಳದ ಅದರಲ್ಲಿ 20 ಅಡಿ ಭಾವಿಯಲ್ಲಿ ಹೊಸ ಹಗ್ಗಗಳ ಸಹಾಯ ದಿಂದ ಕೆಳಗಿಳಿದು ಸುಮಾರು 00:30 ಮೂವತ್ತು ನಿಮಿಷಗಳ ಕಾಲ ಶ್ರಮ ವಹಿಸಿ ಅಧಿಕಾರಿ ಹಾಗೂ ಸಿಬ್ಬಂದಿಯವರು ಪ್ರಾಣ ರಕ್ಷಣೆಗಾಗಿ ಕೂಗುತ್ತಿದ್ದ ಜರ್ಸಿ ಆಕಳನ್ನು ಜೀವಂತವಾಗಿ ಅಗ್ನಿಶಾಮಕ ಇಲಾಖೆಯ ತಂಡ ರಕ್ಷಣೆ ಮಾಡಿರುತ್ತಾರೆ.

ಈ ಸಮಯ ಪ್ರಜ್ಞೆ ಕಾರ್ಯವನ್ನು ವೀಕ್ಷಿಸಿದ ಕೊಟ್ಟಲಗಿ ಗ್ರಾಮದ ಸ್ಥಳೀಯ ನಿವಾಸಿಗಳು ಅಗ್ನಿಶಾಮಕ ತಂಡದ ಕಾರ್ಯ ದಕ್ಷತೆಯನ್ನು ಮೆಚ್ಚಿ ಶ್ಲಾಘಿಸಿ ಹಾಗೂ ಹಸ್ತಲಾಘವ ಮಾಡಿ ಜರ್ಸಿ ಆಕಳ ಪ್ರಾಣ ರಕ್ಷಣೆ ಮಾಡಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದರು. ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಎ.ಡಿ ಮುಲ್ಲಾ ರವರ ನೇತ್ರತ್ವದಲ್ಲಿ ಅಪ್ಪಾಸಾಹೇಬ ಹೋನಖಾoಡೆ, ಸಾದೇವ ಶಿಂಧೆ , ರವೀಂದ್ರ ಸಂಗಮ, ಶಿವಯ್ಯ ಮಠಪತಿ, ಸಿದ್ದಪ್ಪ ಹಗಲಂಬಿ, ಸಂತೋಷ್ ಧರ್ಮಟ್ಟಿ, ಭಾಗವಹಿಸಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button