ಪ್ರೌಢ ಶಾಲೆ ಮಕ್ಕಳಿಂದ ಪಂಜಿನ ಮೆರವಣಿಗೆ ನೃತ್ಯ ಹಾಗೂ ಜಾಥಾ.
ಕೊಟ್ಟೂರು ಆ.15

ಪಟ್ಟಣದ ಶ್ರೀ ವೀರಭದ್ರೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಮಕ್ಕಳಿಂದ ಅಗಷ್ಟ್ 14 ರ ಬುಧವಾರ ಸಂಜೆ 6 ಗಂಟೆಗೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ರಾಷ್ಟ್ರಾ ಅಭಿಮಾನದ ಗೀತೆಗಳಿಗೆ ನೃತ್ಯ, ಪಂಜಿನ ಮೆರವಣಿಗೆ, ಮೂಲಕ ಪ್ರಮುಖ ಬೀದಿಗಳಲ್ಲಿ 78 ನೇ. ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಜನರನ್ನು ರಂಜಿಸುವುದರ ಜೊತೆಗೆ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಹಿರಿಯರನ್ನ ಹಾಗೂ ದೇಶಕ್ಕಾಗಿ ಪ್ರಾಣ ಕೊಟ್ಟ ಸೈನಿಕರನ್ನು ಸ್ಮರಣೆ ಮಾಡುವುದರ ಜೊತೆಗೆ ಮಕ್ಕಳ ಪಂಜಿನ ಮೆರವಣಿಗೆ ಮತ್ತು ನೃತ್ಯ ಜಾಥಾ ಸಾಗಿತು.ಪ್ರೌಢ ಶಾಲೆ ಮಕ್ಕಳ ನೃತ್ಯ ಮತ್ತು ಪಂಜಿನ ಮೆರವಣಿಗೆ ಕ್ಷಣ ಮಾತ್ರದಲ್ಲೇ ಜನರ ಗಮನ ಆಕರ್ಷಣೆ ಗೊಳಿಸಿತ್ತು. ಅಗಷ್ಟ್ 15 ರ ಮುನ್ನ ದಿನವಾದ ಇಂದು ಸ್ವಾತಂತ್ರ್ಯಕ್ಕಾಗಿ ಪ್ರಾಣತೆತ್ತ ವೀರ ಯೋಧರನ್ನು ಸಾರ್ವಜನಿಕರು ಸಹ ಸ್ಮರಿಸಿಕೊಳ್ಳಲು ವೀರಭದ್ರೇಶ್ವರ ಆಂಗ್ಲ ಮಾದ್ಯಮ ಪ್ರೌಢ ಶಾಲೆ ಮಕ್ಕಳ ಜಾಥಾ ಸಹಾಯಕವಾಯಿತು.ಈ ಜಾಥಾ ಸಂದರ್ಭದಲ್ಲಿ ಶ್ರೀ ವೀರಭದ್ರೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಗೋಪಾಲಕೃಷ್ಣ ಶಾಲೆಯ ಶಿಕ್ಷಕ ವರ್ಗ ಶ್ವೇತಾವಸ್ತ್ರ ಧರಿಸಿ ಮಕ್ಕಳ ಜೊತೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸ್ಮರಿಸುವಲ್ಲಿ ಭಾಗಿಯಾಗಿದ್ದರು. ಪಿಎಸ್ಐ ಗೀತಾಂಜಲಿ ಶಿಂಧೆ, 112 ವಾಹನ ಹಾಗೂ ಕೊಟ್ಟೂರು ಪೊಲೀಸ್ ಸಿಬ್ಬಂದಿಗಳು ಮಕ್ಕಳಿಗೆ ಭದ್ರತೆ ಒದಗಿಸಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು.