ಸ್ಪೂರ್ತಿ ಧಾಮಕ್ಕೆ ಡಾ, ಕೆ.ಮಲ್ಲಪ್ಪ ಯರಗೋಳ ತಹಶೀಲ್ದಾರ್.
ಮಸ್ಕಿ ಆ.16

ಪಟ್ಟಣದ ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಡಿಯಲ್ಲಿ ಸ್ಥಾಪಿತವಾಗಿರುವ ಅಭಿನಂದನ್ ಸ್ಪೂರ್ತಿ ಧಾಮಕ್ಕೆ ಮಸ್ಕಿಯ ತಹಶೀಲ್ದಾರ್ ರಾದ ಡಾ, ಮಲ್ಲಪ್ಪ.ಕೆ.ಯರಗೋಳ ಭೇಟಿ ನೀಡಿ ಮಕ್ಕಳ ಕುಸಲೋಪಚಾರವನ್ನು ವಿಚಾರಿಸಿದರು. ಈ ಒಂದು ಸಂಸ್ಥೆಯು ಶಿಕ್ಷಣದಿಂದ ವಂಚಿತ ಮಕ್ಕಳ ಶಿಕ್ಷಣಕ್ಕಾಗಿ ಈ ಆಶ್ರಮವನ್ನು ಸ್ಥಾಪಿಸಿದ್ದು ಈ ಆಶ್ರಮಕ್ಕೆ ನಾವು ಎಲ್ಲಾ ಇಲಾಖೆಗಳಿಂದ ನೆರವನ್ನು ನೀಡುತ್ತೇವೆ ಹಾಗೂ ಇಂತಹ ಸೇವೆಯಿಂದ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸಾಧ್ಯ ಎಂದರು ಈ ಆಶ್ರಮದ ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲಿ ಮುಂದುವರೆಯುತ್ತಿದ್ದು ವಿಶೇಷವಾಗಿ ಖೋ ಖೋ ಕ್ರೀಡೆಯಲ್ಲಿ ಮಿನಿ ಪ್ಯಾರ ಒಲಂಪಿಕ್ ಗೆ ಆಯ್ಕೆ ಯಾಗಿರುವುದು ಹೆಮ್ಮೆಯ ವಿಷಯ ಎಂದರು ನಾವು ಬಿಡುವಿನ ವೇಳೆಯಲ್ಲಿ ಈ ಆಶ್ರಮಕ್ಕೆ ನಿರಂತರವಾಗಿ ಭೇಟಿ ನೀಡುತ್ತೇವೆ ಎಂದು ಭರವಸೆ ನೀಡಿದರು.ಇದೇ ಸಂದರ್ಭದಲ್ಲಿ ಅಭಿನಂದನ್ ಸಂಸ್ಥೆಯ ಸಂಸ್ಥಾಪಕ ರಾಮಣ್ಣ. ಹಂಪರಗುಂದಿ. ಶಿಕ್ಷಕರಾದ ಜಾಫರ್ಮಿಯ, ಮಲ್ಲಿಕಾರ್ಜುನ್. ಬಡಿಗೇರ್, ಸ್ಪೂರ್ತಿ ಧಾಮದ ಮಕ್ಕಳು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ.