ಮಾರಮ್ಮ ದೇವಿಯ ಜಾತ್ರೆಗೆ ಬಂದಂತ ಭಕ್ತಾಧಿಗಳಿಗೆ ಸ್ವಚ್ಛತೆ ಮತ್ತು ಆರೋಗ್ಯ, ನೀರಿನ, ವ್ಯವಸ್ಥೆ ಸಂಬಂಧಪಟ್ಟ ಅಧಿಕಾರಿಗಳಿಗೆ – ಸೂಚಿಸಿದ ಶಾಸಕರು.
ಗೌರಸಮುದ್ರ ಆ.17

ಇಂದು ಚಳ್ಳಕೆರೆ ತಾಲೂಕಾ ಆಡಳಿತದಲ್ಲಿ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್.ವೈ ಗೋಪಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಮೊಳಕಾಲ್ಮುರು ವಿಧಾನ ಸಭಾ ಕ್ಷೇತ್ರದ ಆರಾಧ್ಯ ದೇವತೆಯಾದ ಶ್ರೀ ಗೌರಸಮುದ್ರ ಮಾರಮ್ಮ ದೇವಿಯ ಜಾತ್ರಾ ಬಹಳ ಸಂಭ್ರಮ ಸಡಗರ ದಿಂದ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತಾದಿಗಳು ಬಂದು ಮಾರಮ್ಮ ದೇವಿಗೆ ಬಾಯಿ ಬೇಗ ಬೇವಿನ ಸೀರೆ ಭಕ್ತಾದಿಗಳು ಹರಿಕೆ ತೀರಿಸಿ ಸಂಕಷ್ಟಗಳನ್ನು ಮನಸ್ಸಿನಲ್ಲಿ ಅಂದು ಕೊಂಡಂತೆ ಒಳ್ಳೆಯ ಕೆಲಸಗಳಿಗೆ ಪರಿಹಾರ ಮಾಡುತ್ತಾಳೆ ಮಾರಮ್ಮ ದೇವಿ ಹಣ್ಣು ಕಾಯಿ ಕರ್ಪೂರ ದೊಂದಿಗೆ ಪೂಜೆ ಸಲ್ಲಿಸಿ ಬೇಟೆ ಅರ್ಪಣೆ ಮಾಡಿ ಜಾತ್ರಾ ಮಹೋತ್ಸವ ಸುಮಾರು ಲಕ್ಷಾನು ಗಟ್ಟಲೆ ಭಕ್ತಾದಿಗಳು ಬರುತ್ತಾರೆ. ಜಾತ್ರೆಗೆ ಬಂದಂತ ಭಕ್ತಾದಿಗಳಿಗೆ ನೀರಿನ ವ್ಯವಸ್ಥೆ ಮತ್ತು ಸ್ವಚ್ಛತೆ ವ್ಯವಸ್ಥೆ ಆರೋಗ್ಯ ವ್ಯವಸ್ಥೆ ನೋಡಿ ಕೊಳ್ಳಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮತ್ತು ತಹಸಿಲ್ದಾರ್ ಇವರಿಗೆ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಎನ್.ವೈ ಗೋಪಾಲಕೃಷ್ಣ ಶಾಸಕರು ಸಲಹೆ ಸೂಚಿಸಿದರು ಅಧಿಕಾರಿಗಳಿಗೆ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅಗತ್ಯ ಸಲಹೆ ಸೂಚನೆ ನೀಡಿದರು.ತಾಲೂಕಾ ಮಟ್ಟದ ಇಲಾಖೆ ಅಧಿಕಾರಿಗಳು ಹಾಗೂ ಮಾರಮ್ಮ ದೇವಿಯ ಟ್ರಸ್ಟ್ ಕಮೀಟಿಯವರು ಗ್ರಾಮದ ಮುಖಂಡರು ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮುರು