ಕುರುಬ ಸಮಾಜದ ಯುವ ನಾಯಕ, ಯಲ್ಲಪ್ಪ ಹೆಗ್ಗಡೆಯವರ ಮೇಲೆ ಮಾರಣಾಂತಿಕ ಹಲ್ಲೆ ….. !
ಬೀಳಗಿ ( 28/August/2023) :
ಬಾಗಲಕೋಟೆ ಜಿಲ್ಲೆಯಲ್ಲಿನ ಭ್ರಷ್ಟ, ಕೋಮುವಾದಿ ಮತ್ತು ಜನ ದ್ರೋಹಿ ರಾಜಕಾರಣಿಗಳಿಗೆ ಹಾಗೂ ಅಧಿಕಾರಿಗಳಿಗೆ ಚಳಿ ಬಿಡಿಸುತ್ತಾ ವ್ಯವಸ್ಥೆಯ ಬದಲಾವಣೆಗಾಗಿ ಸದಾಕಾಲವೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಸಾಮಾಜಿಕ ಯುವ ಹೋರಾಟಗಾರ ರೈತಪರ, ಯುವಪರವಾಗಿದ್ದ ಯುವ ನಾಯಕ ಯಲ್ಲಪ್ಪ ಹೆಗಡೆ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.

ಬೀಳಗಿಯಲ್ಲಿ ಲೀಗಲ್ ನೋಟಿಸ್ ಮೂಲಕ ಡಾ. ಮುರುಗೇಶ ನಿರಾಣಿ ಕೇಳಿದ ಪರಿಹಾರದ ಹಣವನ್ನು ಮನೆ-ಮನೆಯಿಂದ ಸಾರ್ವಜನಿಕವಾಗಿ ಸಂಗ್ರಹಿಸುವಾಗ ಅದನ್ನು ಸಹಿಸದ ಐದಾರು ಜನ ಗುಂಡಾಗಳು ಅಕ್ರಮ ಕೂಟವನ್ನು ರಚಿಸಿಕೊಂಡು ಮಾರಣಾಂತಿಕ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದಾರೆ.

ಹಿಂದೆಯೂ ಅವರ ಮತ್ತು ಅವರ ತಂದೆ ಸೇರಿ ಕುಟುಂಬದ ಮೇಲೆ ಹಲ್ಲೆ, ದಬ್ಬಾಳಿಕೆ, ಜೀವಬೆದರಿಕೆ ನಡೆದಿದ್ದವು ಸಾಲದೆಂಬಂತೆ ಮುಂದುವರಿದು ಒಂದು ಹೋರಾಟದಲ್ಲಿ ಸುಳ್ಳು ಕೇಸ್ ದಾಖಲಿಸಿ ಕುಗ್ಗಿಸಲು ಜೈಲಿಗೆ ಕಳುಹಿಸಲಾಗಿತ್ತು. ಯಾವುದಕ್ಕೂ ಅಂಜದ ಕುಗ್ಗದ ಧೈರ್ಯವಂತ ಯಲ್ಲಪ್ಪ ತಮ್ಮ ಹೋರಾಟ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಮತ್ತಷ್ಟು ತೀವ್ರಗೊಳಿಸಿ ಇತ್ತಿಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬೀಳಗಿ ವಿಧಾನಸಭಾ ಕ್ಷೇತ್ರದಿಂದ ಹಾಲಿ ಸಚಿವರಾಗಿದ್ದ ಮುರುಗೇಶ್ ನಿರಾಣಿ ವಿರುದ್ದ ಸ್ಪರ್ಧಿಸಿ ಸಂಚಲನ ಮೂಡಿಸಿ ನಿರಾಣಿಯರವನ್ನು ಮಣ್ಣು ಮುಕ್ಕಿಸಿದ್ದರು ಇದರಿಂದ ಹತಾಶೆಗೊಳ್ಳಗಾದ ಮುರುಗೇಶ್ ನಿರಾಣಿ ಅವರ ಭಾಷಣ ಮತ್ತು ಸ್ಪರ್ಧೆಯಿಂದ ತನಗೆ ಸಾಕಷ್ಟು ಹಾನಿ, ಅವಮಾನವಾಗಿ ಎಂದು ಅದಕ್ಕೆ ಐದು ಕೋಟಿ ರೂಪಾಯಿ ಹಾನಿ ಪರಿಹಾರವನ್ನು ನೀಡುವಂತೆ ಕೇಳಿದ್ದರು.
ಪ್ರಾಮಾಣಿಕ, ಬಡ ಹೋರಾಟಗಾರನ ಬಳಿ ಅಷ್ಟೊಂದು ಹಣ ಎಲ್ಲಿಂದ ಬರಬೇಕು ಹೇಳಿ ಅದಕ್ಕಾಗಿ ಇದನ್ನು ಸಾಧ್ಯವಾದಷ್ಟು ಜನರಿಂದಲೇ ಸಂಗ್ರಹಿಸಲು ಮುಂದಾದ ಸಂದರ್ಭದಲ್ಲಿ ತೀವ್ರ ಹಲ್ಲೆಗೆ ಒಳಗಾಗಿದ್ದಾರೆ. ಕೂಡಲೇ ಹಲ್ಲೆಕೋರರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ದುಷ್ಟ ಹಲ್ಲೆಕೋರರನ್ನು ಬಂಧಿಸಬೇಕು ಜೊತೆಗೆ ಅದಕ್ಕೆ ಕುಮ್ಮಕ್ಕು ನೀಡಿದ ಆ ಕೃತ್ಯದ ಹಿಂದಿರುವ ಎಲ್ಲಾ ಶಕ್ತಿಗಳನ್ನು ಆರೋಪಿಗನ್ನಾಗಿಸಿ ಎಲ್ಲರ ಮೇಲೂ ಕಠಿಣ ಕಾನೂನು ಕ್ರಮ ಜರುಗಿಸಿ ನ್ಯಾಯ ದೊರಕಿಸಬೇಕಿದೆ.

ಯಲ್ಲಪ ಮತ್ತು ಆತನ ಕುಟುಂಬಕ್ಕೆ ಸೂಕ್ತ ಭದ್ರತೆಯನ್ನು ನೀಡಬೇಕು.ಈ ಹೊತ್ತಿನಲ್ಲಿ ನಾಡಿನ ಎಲ್ಲಾ ಜೀವಪರ ಧ್ವನಿಗಳು ಯಲ್ಲಪ್ಪ ರವರೊಂದಿಗೆ ನಿಂತು ನ್ಯಾಯಕ್ಕಾಗಿ ಆಗ್ರಹಿಬೇಕಿದೆ.