ಹರನಹಳ್ಳಿ ಗ್ರಾಮವನ್ನ ದಿವಾಳಿ ಮಾಡಿದ – ಇ.ಓ ಖಾಲಿದ್ ಅಹ್ಮದ್, ಪಿ.ಡಿ.ಓ ನಾಗಭೂಷಣ.
ಹರನಹಳ್ಳಿ ಮಾ.30

ರಸ್ತೆ ಅಗಲೀಕರಣ ಮಾಡಿ ಹರನಹಳ್ಳಿ ಗ್ರಾಮವನ್ನು ಅಭಿವೃದ್ಧಿ ಮಾಡುತ್ತೇವೆಂದು ಪಿ.ಡಿ.ಓ ನಾಗಭೂಷಣ ಹಾಗೂ ತಾಲೂಕ ಪಂಚಾಯತಿ ಇ.ಓ ಖಾಲಿದ್ ಅಹ್ಮದ್ ಜನರಿಗೆ ಸುಳ್ಳು ಭರವಸೆ ಕೊಟ್ಟು ಗ್ರಾಮಸ್ಥರನ್ನು ದಿವಾಳಿ ಸ್ಥಿತಿಯಲ್ಲಿ ಇಟ್ಟಿರುವುದು ಬೆಳಕಿಗೆ ಬಂದಿದೆ.ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಹರನಹಳ್ಳಿ ಗ್ರಾಮದ ರಸ್ತೆಯನ್ನು ಒತ್ತುವರಿ ಮಾಡಲಾಗಿದೆ ಎಂದು ಅಧಿಕಾರಿಗಳ ಮಟ್ಟದಲ್ಲಿ ಚರ್ಚೆಯಾಗಿ ಸಹಾಯಕ ಆಯುಕ್ತ ಗಜಾನನ ಸಾಹೇಬ್ರು ಫೀಳ್ಡಿಗಿಳಿದು ಕಳೆದ 2 ತಿಂಗಳ ಹಿಂದೆ ಮನೆಗಳನ್ನು ಕಟಿಂಗ್ ಮಾಡಿದ್ದರು.ಒತ್ತುವರಿ ಮನೆಗಳನ್ನು ತೆರವು ಮಾಡಿದ ನಂತರ ಹರನಹಳ್ಳಿ ಗ್ರಾಮದ ಮುಖ್ಯ ರಸ್ತೆ ನಿರ್ಮಾಣ ಮಾಡಿ ಚರಂಡಿಯನ್ನು ನಿರ್ಮಿಸುವ ಕೆಲಸ ಪಿ.ಡಿ.ಓ ನಾಗಭೂಷಣ ಹಾಗೂ ಇ.ಓ ಖಾಲಿದ್ ಅಹ್ಮದ್ ಮಾಡಬೇಕಿತ್ತು.ಆದರೆ, ಹರನಹಳ್ಳಿ ಗ್ರಾಮವನ್ನು ಒಮ್ಮೆ ಸುತ್ತು ಹಾಕಿದರೆ ಸಾಕು ಜನರು ಯಾವ ಸ್ಥಿತಿಯಲ್ಲಿ ಬದುಕುತ್ತಿದ್ದಾರೆಂದು ಜಿಲ್ಲಾಡಳಿತಕ್ಕೆ ಅರಿವಾಗುತ್ತದೆ.

ಚರಂಡಿ ಮಾರ್ಗ ಇಲ್ಲದ ಕಾರಣ ಮನೆಯ ಮುಂದೆ ಮಲೀನ ನೀರು ನಿಂತು ಸೊಳ್ಳೆಗಳ ಕಾಟಕ್ಕೆ ಜನರಂತು ರೋಷಿದ್ದರಿಂದ ನಮ್ಮ ಗೋಳು ಯಾರು ಕೇಳುತ್ತಾರೆಂದು ಪಿ.ಡಿ.ಓ ನಾಗಭೂಷಣ ಹಾಗೂ ಇ.ಓ ಖಾಲಿದ್ ಅಹ್ಮದ್ ವಿರುದ್ಧ ಗ್ರಾಮಸ್ಥರು ಕಿಡಿ ಕಾರಿದ್ದಾರೆ.ರಸ್ತೆ ಮೂಲಕ ಯಾರಾದರು ಸಾಗಿದರೆ ತಗ್ಗು ಯಾವ ದಿಕ್ಕಿನಲ್ಲಿದೆ ಎಂದು ತಿಳಿಯದ ಕಾರಣ ವಾಹನ ಸಮೇತ ಕೆಲವರು ಬಿದ್ದಿರುವ ಉದಾಹರಣೆ ಇದೆ.ಸುಂಕೇಶ್ವರ ಗ್ರಾಮ ಪಂಚಾಯತಿ ಪಿ.ಡಿ.ಓ ನಾಗಭೂಷಣ ಹಾಗು ಇ.ಓ ಖಾಲಿದ್ ಅಹ್ಮದ್ ಅವರ ದುರಾಡಳಿತಿಂದ ಹರನಹಳ್ಳಿ ಗ್ರಾಮವನ್ನು ದಿವಾಳಿ ಮಾಡುವುದರ ಜೊತೆಗೆ ಒಂದು ದಿನವಾದರು ಇಲ್ಲಿ ಕಾಲ ಕಳೆದರೆ ಇವರಿಗೆ ಅರಿವಾಗುತ್ತದೆ ಎಂದು ಗ್ರಾಮಸ್ಥರಾದ ಮೌಲಾಲಿ, ಮೈಸೂರು ಮಲ್ಲಮ್ಮ ಒತ್ತಾಯಿಸಿದ್ದಾರೆ.
ಕೋಟ್:-
ಹರನಹಳ್ಳಿ ಗ್ರಾಮದ ರಸ್ತೆ ಅಗಲೀಕರಣ ನೆಪದಲ್ಲಿ ಪಿಡಿಓ ನಾಗಭೂಷಣ ಹಾಗೂ ಇ.ಓ ಖಾಲಿದ್ ಅಹ್ಮದ್ ಸೇರಿದಂತೆ ಅಧಿಕಾರಿಗಳು ಮನೆಗಳನ್ನ ಕಟಿಂಗ್ ಮಾಡಿದರು.ಆದರೆ ನಮ್ಮ ಗ್ರಾಮದಲ್ಲಿ ರಸ್ತೆ ಹಾಗು ಚರಂಡಿಯನ್ನು ನಿರ್ಮಾಣ ಮಾಡದೆ ಪಿಡಿಒ ನಾಗಭೂಷಣ ಹಾಗೂ ಇಒ ಖಾಲಿದ್ ಅಹ್ಮದ್ ಜನರಿಗೆ ಭರವಸೆ ಕೊಟ್ಟು ಮೋಸ ಮಾಡಿದ್ದಾರೆ.
ಅಮರೇಶ ಪಾಟೀಲ್, ಹರನಹಳ್ಳಿ ಗ್ರಾಮದ ನಿವಾಸಿ.
ಕೋಟ್:-
ಸರ್ ನಮ್ಮೂರಲ್ಲಿ ಮನೆಗಳನ್ನು ಹೊಡೆದು ಹಾಕುವುದಕ್ಕೆ ಪರ್ಮಿಶನ್ ಬಂದಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.ಆದರೆ ಮನೆಗಳನ್ನು ಹೊಡೆದಾಕಿದ ನಂತರ ರೋಡ್ ಮತ್ತು ಚರಂಡಿ ನಿರ್ಮಿಸುವುದಕ್ಕೆ ಯಾಕೆ ಪರ್ಮಿಶನ್ ಬಂದಿಲ್ಲ, ನಮಗೇನಾದರು ಆದರೆ ಯಾರು ಹೊಣೆ.
ಶರಣಮ್ಮ, ಹರನಹಳ್ಳಿ ಗ್ರಾಮದ ನಿವಾಸಿ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ