ಕೆರೆಯ ಸುತ್ತಲಿನ ತೆರೆದ ಮತ್ತು ಕೊಳವೆ ಬಾವಿ ಸರ್ಕಾರದ ವಶಕ್ಕೆ.

ಇಂಡಿ ಜನೇವರಿ.17

ಇಂಡಿ ಉಪ ವಿಭಾಗದ ಇಂಡಿ, ಸಿಂದಗಿ ಮತ್ತು ಆಲಮೇಲ ತಾಲೂಕಿನಲ್ಲಿರುವ ಕೆರೆಗಳ ಅಂಚಿನ ಸುತ್ತಲೂ ೩೦ ಮೀ ಪರೀಧಿಯಲ್ಲಿ ಬರುವ ಖಾಸಗಿ ಮಾಲೀಕರ ತೆರೆದ ಮತ್ತು ಕೊಳವೆ ಬಾವಿಗಳನ್ನು ಹಾಗೂ ಇನ್ನಿತರ ಯಾವುದೇ ನೀರಿನ ಮೂಲಗಳನ್ನು ತಾತ್ಕಾಲಿಕವಾಗಿ ಸರಕಾರದ ಆಧೀನಕ್ಕೆ ಪಡೆಯಲಾಗಿದೆ ಎಂದು ಕಂದಾಯ ಉಪ ವಿಬಾಗಾಧಿಕಾರಿ ಅಬೀದ್ ಗದ್ಯಾಳ ತಿಳಿಸಿದ್ದಾರೆ.ತಾಲೂಕಿನ ಸಂಗೊಗಿ ಕೆರೆಯ ಸುತ್ತ ಮುತ್ತಲಿನ ಪ್ರದೇಶಗಳಿಗೆ ಭೇಟಿ ರೈತರಿಗೆ ಮನವರಿಕೆ ಮಾಡಿ ಬರಗಾಲ ನಿವಾರಿಸಲು ಮಾನವೀಯ ಆಧಾರದ ಮೇಲೆ ಎಲ್ಲರೂ ಕೂಡಿ ಸಹಕಾರ ನೀಡಲು ವಿನಂತಿಸುವ ಸಂದರ್ಭದಲ್ಲಿ ಮಾತನಾಡಿದರು. ಇಂಡಿ ಉಪ ವಿಭಾಗದಲ್ಲಿ ಬರಗಾಲ ಆವರಿಸುವದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಬವಣೆ ಹೆಚ್ಚಾಗುವ ಸಂಭವವಿದ್ದು ಮಾನವೀಯ ಆಧಾರದ ಮೇಲೆ ಸಹಕಾರ ನೀಡಬೇಕೆಂದು ಎಸಿಯವರು ಕೋರಿದ್ದಾರೆ.ಇಂಡಿ ತಾಲೂಕಿನ ಸಂಗೊಗಿ,ತಡವಲಗಾ,ಹಂಜಗಿ,ಲೋಣಿ ಕೆಡಿ,ಮತ್ತು ಅರ್ಜನಾಳ ಹಾಗೂ ಆಲಮೇಲ ತಾಲೂಕಿನ ಬಳಗಾನೂರ ಮತ್ತು ಸಿಂದಗಿ ತಾಲೂಕಿನ ಹೊನ್ನಳ್ಳಿ, ಯಂಕಚಿ ಗ್ರಾಮದ ಕೆರೆಗಳ ಅಂಚಿನ ಸುತ್ತ ೧೪೭ ಕಾಯ್ದೆ ಜಾರಿ ಮಾಡಿದೆ ಎಂದರು.ಕಾರಣ ಸಧ್ಯ ಮತ್ತು ಮುಂಬರುವ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಬವಣೆ ನೀಗಿಸಲು ಸದರಿ ನೀರಿನ ಮೂಲಗಳನ್ನು ತಾತ್ಕಾಲಿಕವಾಗಿ ಸರಕಾರದ ಸುಪರ್ದಿಗೆ ತೆಗೆದು ಕೊಳ್ಳುವುದು ಅವಶ್ಯವಿದ್ದು ಸಿಆರ್ ಪಿಸಿ ೧೯೭೩ ರ ಕಲಂ ೧೪೭ ರ ಅಡಿ ಇರುವ ಅಧಿಕಾರದ ಮೇರೆಗೆ ಮತ್ತು ಮಾನವೀಯ ದೃಷ್ಟಿಯಲ್ಲಿ ಕಲಂ ಜಾರಿಗೆ ಮಾಡಿದೆ ಎಂದು ಅಬೀದ್ ಗದ್ಯಾಳ ತಿಳಿಸಿದ್ದಾರೆ. ತಹಸೀಲ್ದಾರ ಬಿ.ಎಸ್.ಕಡಕಬಾವಿ, ಹೆಸ್ಕಾಂನ ಎಸ್.ಆರ್.ಮೇಡೇಗಾರ, ಜಿ.ಪಂ ಕುಡಿಯುವ ನೀರು ಸರಬರಾಜು ಎಸ್.ಆರ್. ರುದ್ರವಾಡಿ, ಪಿ.ಎಸ್.ಐ ಸೋಮೇಶ ಗೆಜ್ಜೆ , ಇಒ ಬಾಬು ರಾಠೋಡ ಮತ್ತಿತರಿದ್ದರು.

ಜಿಲ್ಲಾ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button