ಎನ್.ವೈ ಗೋಪಾಲಕೃಷ್ಣ ಶಾಸಕರ ನಡಾವಳಿಕೆ ಅಭಿವೃದ್ಧಿ ನೋಡಿ – ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಂಡರು.
ರಾಂಪುರ ಆ.25

ಇಂದು ರಾಂಪುರ ಶಾಸಕರ ನಿವಾಸದಲ್ಲಿ ನಾಯಕನ ಹಟ್ಟಿ ಪಟ್ಟಣ ಪಂಚಾಯಿತಿ ಸದಸ್ಯರಾದ ಜಿ.ಅರ್.ರವಿಕುಮಾರ್ ಹಾಗೂ ಉಮಾಪತಿ ಅವರು ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್.ವೈ ಗೋಪಾಲಕೃಷ್ಣ ರವರ ಜನಪರ ಆಡಳಿತ ಪಕ್ಷ ತತ್ವ ಸಿದ್ಧಾಂತ ಹಾಗೂ ಅಭಿವೃದ್ಧಿ ದೃಷ್ಟಿ ಕೋನದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಂಡರು, ಅವರನ್ನ ಆತ್ಮೀಯವಾಗಿ ಸ್ವಾಗತಿಸಿ ಮುಂದಿನ ರಾಜಕೀಯ ಜೀವನ ಶುಭವಾಗಲಿ ಎಂದು ಹಾರೈಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ, ನಾಗೇಶ್ ರೆಡ್ಡಿ, ಹಿರಿಯ ಮುಖಂಡರಾದ ಬಾಲರಾಜ,ಓಬಣ್ಣ,ಸೂರನಾಯಕ್ ಪ್ರಭುಸ್ವಾಮಿ, ಸುಬಾನ್ ಸಾಬ್,ಉಮಾಪತಿ, ತಿಪ್ಪೇಸ್ವಾಮಿ,ಬಾಲಾರೆಡ್ಡಿ,ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮುರು