“ಜಗದಲಿ ನಾಯಿ ಬೆಕ್ಕಿನಾಟ, ಬೇಡ ಮನವೆ”…..

ನಂಬಿಕೆಗೆ ನಾಯಿ ಮನೆ ಚೌಕಿದಾರ
ಬೆಕ್ಕು ನೋಡಲು ನಯ ನಾಜುಕಕ
ಳ್ಳತನದ ಬೆಕ್ಕುಕಪ್ಪು ಚುಕ್ಕಿ
ನಂಬಿಕೆಗೆ ಅರ್ಹ ವ್ಯಕ್ತಿ ದೂರ
ಮೋಸ ನಯ ನಾಜೂಕ ಕಲಾವಲ್ಲಭ
ಸನಿಹ ನಾಲಿಗೆಗೆ ಕಹಿ ಉದರದಿ ಸಿಹಿ
ಬಾಯಿಗೆ ರುಚಿ ದೇಹದಿ ಕೊಬ್ಬು
ನೇರ ನುಡಿ ಮೋಸವಿರದ ಭಾವ
ಮಾತಿನಲಿ ನಯ ಕೃತಿಯಲಿ ವಂಚನೆ
ಸುಮನಗಳ ಹಾರೈಕೆ ಸೋಲಲು ಬಿಡದು
ಸೋಲಿಸಲು ಹೊಂಚು ಸಂಚು
ಗುಳ್ಳೆನರಿಗಳ ಸಂಪು ಗುಂಪು
ಸಿಂಹ ಘರ್ಜನೆ ಏಕಾಂಗಿತನ
ಕೆಡುಕು ಒಳಿತು ಅರಿವು ಇರಲು
ಜಗದಲಿ ನೀನೇ ಶ್ರೇಷ್ಠ ಕುಲಜ
ಮರಳಾಗದಿರು ಸ್ವಾರ್ಥ ಭಾವದಿ
ಅರಿವಿನ ಜ್ಞಾನ ನಿಜ ಮನುಜ
ಕುಲತಿಲಕ ನಾಗು ಜಗದಲಿ
ನಾಯಿ ಬೆಕ್ಕಿನಾಟ ಬೇಡ ಮನವೆ.

-ದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟೆ.