ಜಿಂದಾಲ್ ಕಂಪನಿಗೆ 3677 ಸಾವಿರಾರು ಎಕರೆ ಭೂಮಿಯನ್ನು ಖಾಸಗಿ ಕಂಪನಿಗೆ ಕೊಟ್ಟಿರುವ ಕ್ರಮ ಖಂಡನೆ, ತತಕ್ಷಣ ಆದೇಶವನ್ನು – ವಾಪಸ್ ಪಡೆಯಲು ಕೆ.ಡಿ.ಆರ್.ವ್ಹಿ ಯಿಂದ ಆಗ್ರಹ.

ಬಳ್ಳಾರಿ ಆ.27

ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಬಳ್ಳಾರಿ, ರಾಜ್ಯದಲ್ಲಿ ಭೂ ರಹಿತ ಲಕ್ಷಾಂತರ ಜನರು ಸರಕಾರಿ ಜಮೀನಿಗೆ ಸಾಗುವಳಿ ಉಳುಮೆ ಮಾಡಿಕೊಂಡ ನಂತರ ಅರ್ಜಿ ಸಲ್ಲಿಸಿ ಭೂಮಿಯ ಹಕ್ಕಿಗಾಗಿ ಹಲವು ದಶಕ ಗಳಿಂದ ಭೂಮಿಯ ಹಕ್ಕು ಪತ್ರಗಳು ಬರದೇ ಇರುವುದರಿಂದ ಕಾಯುತ್ತಿದ್ದರೂ ಬಡ ಜನರಿಗೆ ಹಕ್ಕು ಪತ್ರಗಳನ್ನು ನೀಡಲಾರದೆ ಹಾರಿಕೆ ಉತ್ತರಗಳು ಸರಕಾರಗಳು ಉನ್ನತ ಮಟ್ಟದ ಅಧಿಕಾರಿಗಳು ಹೇಳುತ್ತಲೇ ಬರುತ್ತಿತ್ತು ಬಡ ದಲಿತರಿಗೆ ಹಾಗೂ ಅಲ್ಪಸಂಖ್ಯಾತರಿಗೆ ತುಂಡು ಭೂಮಿಯನ್ನು ಮಂಜೂರಾತಿ ನೀಡದೆ ನಯವಾಗಿ ವಂಚಿಸುತ್ತಾ ಬರಲಾಗುತ್ತಿದ್ದು. ಆದರೆ ಜಿಂದಾಲ್ ಕಂಪನಿಗೆ 3677 ಸಾವಿರಾರು ಎಕರೆ ಭೂಮಿಯನ್ನು ಒಂದು ಖಾಸಗಿ ಕಂಪನಿಗೆ ಕೊಟ್ಟಿರುವ ರಾಜ್ಯ ಸರ್ಕಾರದ ಕೂಡಲೇ ಆದೇಶವನ್ನು ವಾಪಸ್ ಪಡಿಯ ಬೇಕೆಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಒತ್ತಾಯಿಸಿದೆ. ಅಭಿವೃದ್ಧಿ ಹೆಸರಿನಲ್ಲಿ ಭೂಮಿಯನ್ನು ಖಾಸಗೀಯ ಕಂಪೆನಿಗಳಿಗೆ ಅತೀ ಕಡಿಮೆ ಬೆಲೆಯಲ್ಲಿ ನೀಡುವ ಸರ್ಕಾರ ಸಾಮಾನ್ಯ ಜನರಿಗೆ ಅದರ ಹತ್ತು ಪಟ್ಟು ಬೆಲೆಗೂ ನೀಡುವುದಿಲ್ಲ ಅಭಿವೃದ್ಧಿ ಎಂದು ಖಾಸಗಿ ಕಂಪನಿಗಳಿಗೆ ಭೂಮಿಯನ್ನು ಮಾರುವ ಬದಲು ಸರ್ಕಾರವೇ ಉದ್ಯಮ ನಡೆಸಿದರೆ ನೈಸರ್ಗಿಕ ಸಂಪತ್ತು ಸರ್ಕಾರದ ಬಳಿಗೆ ಉಳಿಯುತ್ತದೆ ಎನ್ನುವುದು ನಮ್ಮ ಉದ್ದೇಶವಾಗಿದೆ ಇಂದಿನ ಸರ್ಕಾರಗಳು ಮಠ ಮಾನ್ಯಗಳಿಗೆ ಕಾರ್ಪೊರೇಟ್ ಕಂಪನಿಗಳಿಗೆ ಟ್ರಸ್ಟ್ ಗಳಿಗೆ ನೀಡುವ ಮೂಲಕ ಜನ ವಿರೋಧಿಯಾಗಿ ನಡೆದು ಕೊಂಡಿತ್ತು ಈಗಿನ ಸರಕಾರವು ಕೂಡ ಅವರಿಗಿಂತ ನಾವೇನು ಕಡಿಮೆಯಿಲ್ಲ ಎನ್ನುವಂತೆ ವರ್ತಿಸುತ್ತಿದ್ದು ದುರದೃಷ್ಟಕರ ಸಂಗತಿ ಆಗಿದೆ. ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ ಎನ್ನುವಂತಾಗಿ ಬಿಟ್ಟಿದ್ದರಿಂದ ಸರ್ಕಾರಗಳ ವರ್ತನೆಗಳನ್ನು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಉಗ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಶಂಕರ್ ನಂದಿಹಾಳ್ ರವರು ಪತ್ರಿಕಾ ಮೂಲಕ ಎಚ್ಚರಿಸಿದ್ದಾರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button