ಕೆ.ಜಿ.ಬಿ.ವಿ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಶಾಲೆಯ ವಿದ್ಯಾರ್ಥಿಗಳಲ್ಲಿ ಸಂಭ್ರಮ.

ಕೂಡಲ ಸಂಗಮ ಆ.29

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲ ಸಂಗಮ ಕಸ್ತೂರಿ ಬಾಯಿ ಗಾಂಧಿ ಬಾಲಕಿಯ ವಸತಿ ವಿದ್ಯಾಲಯ ಕೂಡಲ ಸಂಗಮ ಶ್ರೀಕೃಷ್ಣನ ಜನ್ಮಾಷ್ಠಮಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಕ್ಕಳು ಕೃಷ್ಣ–ರಾಧೆ ವೇಷ ಭೂಷಣದಲ್ಲಿ ಸಂಭ್ರಮಿಸಿದರು.ಶ್ರೀಕೃಷ್ಣನ ಜನ್ಮಾಷ್ಠಮಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಕ್ಕಳು ಕೃಷ್ಣ–ರಾಧೆ ವೇಷ ಭೂಷಣದಲ್ಲಿ ಸಂಭ್ರಮಿಸಿದರು. ಶ್ರೀಕೃಷ್ಣನ ಜನ್ಮಾಷ್ಠಮಿ ಸಂಭ್ರಮ ದಿಂದ ಜರುಗಿತು. ಬಹುತೇಕ ಮಕ್ಕಳು ಕೃಷ್ಣ, ರಾಧೆ, ರುಕ್ಮಿಣಿಯರ ವೇಷ ಭೂಷಣಗಳಿಂದ ಗಮನ ಸೆಳೆದರು. ಗ್ರಾಮದ ಸಾಮೂಹಿಕವಾಗಿ ಹೆಜ್ಜೆ ಹಾಕಿದ ಕೃಷ್ಣ, ರಾಧೆಯರನ್ನು ಸಾರ್ವಜನಿಕರು ಕಣ್ತುಂಬಿ ಕೊಂಡರು.

ಮುಖ್ಯ ಗುರು ಮಾತೆಯರಾದ ಶ್ರೀಮತಿ ಎಸ್‌ವಿ ಚಿಕ್ಕೋಡಿ ಮಾತನಾಡಿ ಶಾಲೆಯಲ್ಲಿ ರಾಷ್ಟ್ರೀಯ ಹಬ್ಬಗಳ ಸಹಿತ ಎಲ್ಲಾ ಹಬ್ಬಗಳನ್ನೂ ವಿಶೇಷವಾಗಿ ಆಚರಿಸಲಾಗುತ್ತಿದೆ. ಇದಕ್ಕೆ ಗ್ರಾಮಸ್ಥರು, ವಿದ್ಯಾರ್ಥಿಗಳ ಪಾಲಕರ ಸಹಕಾರ ಇದೆ ಎಂದರು. ಎಸ್‌.ಡಿ.ಎಂ.ಸಿ ಅಧ್ಯಕ್ಷರು ಸದಸ್ಯರು. ಶ್ರೀಮತಿ ಬಿ.ಎಂ ಶಿಕ್ಷಕರು ನಿರೂಪಣೆ ಮಾಡಿದರು. ಎ.ಎಸ್ ಗೊರಬಾಳ ಶಿಕ್ಷಕರು ಸ್ವಾಗತ, ಶ್ರೀ ಪಿ.ಆರ್ ಕೊಪ್ಪದ ವಂದನಾರ್ಪಣೆ ಹಾಗೂ ಶ್ರೀ ಆರ್.ಡಿ ಜೋಶಿ ಶಿಕ್ಷಕರು ಶ್ರೀ ಕೃಷ್ಣನ ಚರಿತ್ರೆಯನ್ನು ಕುರಿತು ಮಾತನಾಡಿದರು. ಮುಖ್ಯ ಗುರು ಮಾತೆಯರಾದ ಶ್ರೀ ಎಸ್.ಬಿ ಚಿಕ್ಕೋಡಿ ಕೃಷ್ಣನ ಕುರಿತು ಗೀತೆಗಳನ್ನು ಹಾಡಿದರು ಮಕ್ಕಳು ಎಸ್.ಡಿ.ಎಮ್.ಸಿ ಅಧ್ಯಕ್ಷರು ಸೇರಿದಂತೆ ವಿಜೃಂಭಣೆಯಿಂದ ಕೃಷ್ಣನ ಜನ್ಮಾಷ್ಠಮಿ ಆಚರಿಸಲಾಯಿತು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button