ನಿವೃತ್ತ ಜೀವನ ನಗು ನಗುತ್ತಾ ಕಳೆಯ ಬೇಕು – ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ರೋಣ ಸ.02

ಗದಗ ಜಿಲ್ಲೆಯ ರೋಣ ತಾಲೂಕಿನ ರೋಣ ಪಟ್ಟಣದ ಸರ್ಕಾರಿ ನಿವೃತ್ತ ಸಂಘದವರು ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮ ಜೀವನದಲ್ಲಿ ಸದಾ ಕಾಯಕದಲ್ಲಿ ತೊಡಗಿರುವ ಶಿಕ್ಷಕರು ಅವರನ್ನು ಮರೆಯಬಾರದು ಅವರು ಕಳಿಸಿದ ವಿದ್ಯಾರ್ಥಿಗಳು ಇಂದು ದೇಶದಲ್ಲಿ ಬಹಳಷ್ಟು ಜನರು ತಮ್ಮದೇ ಆದ ವಿಶಿಷ್ಟ ಪ್ರಪಂಚದಲ್ಲಿ ಜೀವನ ನಡೆಸುತ್ತಿದ್ದಾರೆ ಎಂದರು. ಸಿದ್ದರಾಮಯ್ಯ ನವರ. ಸರ್ಕಾರ ಒಳ್ಳೆಯ ಕೆಲಸ ಮಾಡುತ್ತದೆ 7 ನೇ. ವೇತನ ಜಾರಿಗೆ ತರಲು ಕಾಂಗ್ರೆಸ್ ಪಕ್ಷದ ಸರ್ಕಾರ ಇಂದು ದೇಶದಲ್ಲಿ ಬಹಳಷ್ಟು ನೌಕರರಿಗೆ ಜೀವನ ನಡೆಸಲು ಸಾಧ್ಯ ಎಂದರು. ನಿವೃತ್ತ ಸಂಘದವರು ಶಾಸಕರಿಗೆ ನಮಗೆ ಸಂಘದ ಸಭೆ ಮಾಡಲು ಜಾಗವಿಲ್ಲ ಅದಕ್ಕೆ ಶಾಸಕರು ನಮಗೆ ಸರ್ಕಾರದ ಜಾಗದಲ್ಲಿ ನಿವೇಶನ ಕೊಡಿಸಬೇಕೆಂದು ಮನವಿ ಮಾಡಿದರು. ಅದಕ್ಕೆ ಶಾಸಕರು ಅಧಿಕಾರಿಗಳು ಜೊತೆ ಮಾತನಾಡಿ ಅನುಕೂಲ ಮಾಡಿ ಕೊಡುವೆ ಎಂದರು. ಮತ್ತು ಶಾಸಕರ ನಿಧಿಯಿಂದ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಿ ಕೋಡುತ್ತೇನೆ ಎಂದರು. ಕಾರ್ಯಕ್ರಮದಲ್ಲಿ ರೋಣ ಗುಲಗಂಜಿ ಮಠದ ಸ್ವಾಮೀಜಿ ಗುರುಪಾದ ದೇವರು ಸಾನಿಧ್ಯ ವಹಿಸಿದ್ದರು ವೇದಿಕೆಯ ಮೇಲೆ ಪುರಸಭೆ ಸದಸ್ಯೆ ಬಾಬುಸಾಬ ವೀರಯೈ ಸೋಮನಕಟಮಠ ನೌಕರರ ಸಂಘದ ಅಧ್ಯಕ್ಷ ವಾಯು ಡಿ ಗಾಣಿಗರ ಖತೀಬ್ ಸರ್ ಸಿ ವಿ ಆಯಾ ಬೀಳಗಿ ಹಾಜರಿದ್ದರು. ಬಾರಕೇರ ನಿರೂಪಿಸಿದರು. ಕಾರ್ಯಕ್ರಮದಲ್ಲಿ ರೋಣ ತಾಲೂಕ ಎಲ್ಲಾ ನಿವೃತ್ತ ನೌಕರರು ಭಾಗವಹಿಸಿದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಎಫ್. ಗೋಗೇರಿ.ತೋಟಗಂಟಿ.ಗದಗ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button