ರಾಧಾಕೃಷ್ಣನ್ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಶಿಕ್ಷಕ ದಿನಾಚರಣೆ ಆಚರಣೆ.
ಸೂಳೇಭಾವಿ ಸ.07

ಇಳಕಲ್ ತಾಲೂಕಿನ ಸೂಳೇಭಾವಿ ಗ್ರಾಮದ ಪ್ರತಿಷ್ಠಿತ ವಿದ್ಯಾಸಂಸ್ಥೆ ಶ್ರೀ ಸ್ವಾಮಿ ವಿವೇಕಾನಂದ ಪಿಯುಸಿ ಕಾಲೇಜಿನಲ್ಲಿ ಇಂದು ವಿದ್ಯಾರ್ಥಿಗಳು ಸೇರಿ ಸಡಗರ ಸಂಭ್ರಮದಿಂದ ಉಪನ್ಯಾಸಕರಿಗೆ ಕೆಕ್ ಕಟ್ಟು ಮಾಡಿಸುವುದರ ಮೂಲಕ ಶಿಕ್ಷಕರ ದಿನಾಚರಣೆ ಆಚರಿಸಿದರು.ಒಂದಕ್ಷರ ಕಲಿಸಿದಾತ ಗುರು, ಇಂದು ತಾವೆಲ್ಲ ಕಲಿಸಿದ ಗುರುಗಳಿಗೆ ಕೆಕ್ ಕಟ್ಟ ಮಾಡಿಸಿ ಗೌರವ ನೀಡಿದ್ರಿ,ನಿವು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶತೆಗೆದು ಕೊಂಡಾಗ ನಮಗೆ ನೀವು ಕೊಡುವ ಗೌರ ಎಂದು ಸಂಸ್ಥೆಯ ಪ್ರಾಂಶುಪಾಲ ಮಹಾದೇವ ಮೇಳಿ ಅವರು ಮಕ್ಕಳ ಕುರಿತು ಮಾತನಾಡಿದರು.ಶಿಕ್ಷಣ ಕೆಡಿಸುವಂತ ವಸ್ತುವಲ್ಲ, ಕದಿಯುವಂತಹ ಆಸ್ತಿನೂ ಅಲ್ಲ ನೀವು ಶಿಕ್ಷಕರಿಗೆ ಗೌರವಿಸಿದರೆ ಶಿಕ್ಷಣ ಒಲಿಯುತ್ತದೆ,ಹರ ಮುನಿದರು ಗುರು ಮುನಿವನೇ ಎಂಬ ಮಾತು ಸತ್ಯ ಎಂದು ಇತಿಹಾಸದ ಉಪನ್ಯಾಸಕ ಜಗದೀಶ ಕುರಿ ಮಾತನಾಡಿದರು.ಡಾ, ಸರ್ವಪಲ್ಲಿ ರಾಧಾಕೃಷ್ಣ ಅವರ ಜನ್ಮ ದಿನಾಚರಣೆಯ ಅಂಗವಾಗಿ ಶಿಕ್ಷಕರ ದಿನಾಚರಣೆ ಆಚರಿಸುತ್ತಾ ಬಂದಿದ್ದೇವೆ,ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ತಿಳಿಸುತ್ತಾ ಮಾತನಾಡಿದ ರಾಜ್ಯಶಾಸ್ತ್ರ ಉಪನ್ಯಾಸಕ ಶರೀಫ ಗಿಡ್ಡೆಸಾಬನ್ ಅವರು ಮಾತನಾಡುತ್ತಾ ಶಿಕ್ಷಣ ಕೆಡುವ ವಸ್ತುವಲ್ಲ, ಕಲಿತಷ್ಟು ಜ್ಞಾನ ಪಸರಿಸುತ್ತದೆ,ಮುಚ್ಚಿದಷ್ಟು ಜ್ಞಾನ ಮುಳುಗುತ್ತದೆ ಶಿಕ್ಷಣದ ಕುರಿತು ನಮ್ಮ ಮುಂದೆ ಎರಡು ಆಯ್ಕೆಗಳಿವೆ ಅದರಲ್ಲಿ ನಾವು ಯಾವುದನ್ನು ತೆಗೆದು ಕೊಳ್ಳುತ್ತೇವೆ ಅನ್ನುವುದರ ಮೇಲೆ ನಮ್ಮ ಭವಿಷ್ಯ ನಿಂತಿದೆ, ವಿದ್ಯಾರ್ಥಿಗಳು ಶಿಕ್ಷಕರಿಗೆ ಗೌರವಿಸುವುದನ್ನು ಮೊದಲು ಕಲಿಯಬೇಕು ಎಂದು ಶಿಕ್ಷಣದ ಕುರಿತು ಮಾತನಾಡಿದರು.ವಿಜಯ ಬಾಗಲಿ ಅವರು ಕಾರ್ಯಕ್ರಮವನ್ನು ನೀರೂಪಿಸಿದರು, ಮಹಾಂತೇಶ ಮಡಿವಾಳ ಸ್ವಾಗತಿಸಿದರು,ಮಲ್ಲಮ್ಮ,ಸಕ್ರಮ್ಮ, ಅಶ್ವಿನಿ,ಸುಸ್ಮಿತಾ, ಶ್ರೀಧೇವಿ,ಲಕ್ಷ್ಮೀ ಭಕ್ತಿಗೀತೆ ಹಾಡಿದರು, ಭರತ ಗೋಡಿ ವಂದಿಸಿದರು. ಬಸವಾರಜ, ಮಲ್ಲೇಶ ಮಹಾಂತೇಶ ಮತ್ತಿತರ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ.