ಕೋಗಳಿ ಗ್ರಾಮದಲ್ಲಿ 25 ನೇ. ವರ್ಷದ ಗಣೇಶ ಉತ್ಸವ.

ಕೊಟ್ಟೂರು ಸ.07

ಶುಕ್ರವಾರ ರಂದು ಕೋಗಳಿ ಗ್ರಾಮದಲ್ಲಿ ಜೈನ ಬಸದಿ ಜೀರ್ಣೋದ್ಧಾರ ಯುವಕ ಸಂಘ ಇವರು ಸತತವಾಗಿ 25 ವರ್ಷದ ಗಣೇಶ ಉತ್ಸವ ನಡೆಸಿದರು. ಈ ದಿನ ಊರಮ್ಮನ ದೇವಸ್ಥಾನದ ಹತ್ತಿರ ಜೈನ ಬಸದಿ ಜೀರ್ಣೋದ್ಧಾರ ಯುವಕ ಸಂಘ ಕೋಗಳಿ ವತಿಯಿಂದ ಗೌರಿ ಗಣೇಶನ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನಾಡಿನ ಸಮಸ್ತ ಜನತೆಗೆ ವಿಘ್ನ ನಿವಾರಕ ನಿಮ್ಮೆಲ್ಲಾ ಕಷ್ಟಗಳನ್ನು ದೂರ ಮಾಡಲಿ. ನಿಮ್ಮ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಗೊಳ್ಳಲಿ. ಗಣಪತಿ ನಿಮಗೆ ಆಯಸ್ಸು ಆರೋಗ್ಯ ಐಶ್ವರ್ಯ ಸಂಪತ್ತು ಯಶಸ್ಸು ನೆಮ್ಮದಿ ನೀಡಲಿ. ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಗಣೇಶ ಚತುರ್ಥಿಯ ಶುಭಾಶಯಗಳು ತಿಳಿಸುವವರು.ವೀರೇಶ್ ಕೊಟ್ರೇಶ್ ರವಿ ರಾಜಣ್ಣ ರೂಪೇಶ್ ಸಂತೋಷ್ ಬಸವರಾಜ ಇನ್ನು ಮುಂತಾದವರು ಜೈನ ಬಸದಿ ಜೀರ್ಣೋದ್ಧಾರ ಯುವಕ ಸಂಘದವರು ಯುವಕರು ಮುಖಂಡರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button