“ಪ್ರಥಮ ಪೂಜೆ ಅಧಿಪತಿಶ್ರೀ ಗಣಪತಿ ವರಪ್ರದಾಯ”…..

ಶಿವ ಪಾರ್ವತಿ ಸುಪುತ್ರ ವಿನಾಯಕ

ಗಜ ಮುಖ ಗಣಪತಿ

ತಂದೆ ತಾಯಿಯೇ ಪ್ರತ್ಯಕ್ಷ ವಿಶ್ವರೂಪ ತೋರಿದ

ಜಯ ಗಣೇಶ

ವಿದ್ಯ ಬುದ್ಧಿ ಸಿದ್ಧಿಗೆ ರಿದ್ದಿದೇವ

ನಗು ಮೊಗ ಶ್ರೀಏಕದಂತ

ಸಕಲ ಸಂಕಷ್ಟ ಹರ ವಿಘ್ನೇಶ್ವರ

ಸರ್ವ ಜನ ಹಿತ ಶುಭಕರ

ಶ್ರೀ ಲಂಬೋದರ ಲಕುಮಿಕರ ಸುಮುಖ

ಗಣಾಧೀಶ

ಸಿದ್ಧಿ ವಿನಾಯಕ ಮನದಲಿ ಮೂಡಿದ ಗಣಪ

ಬದುಕಿನ ವಿದ್ಯೆಗೆ ತಂದ ಹೊಳಪ ಲಂಬೋದರ

ಬದುಕಿನ ಬಂಡಿಗೆ ವಿಘ್ನ ನಿವಾರಕ

ಶೂರ್ಪಕರ್ಣ

ಜೀವನ ಪ್ರತಿಕ್ಷಣ ಸಿದ್ಧಿಗೆ ಬುದ್ಧಿಗೆ ರಿದ್ದಿದೇವ

ವಕ್ರತುಂಡ

ಸಕಲ ಮಂಗಲ ಕಾರ್ಯದಿ ಪ್ರಥಮ ಪೂಜಿತ

ಏಕದಂತ

ಶಿವ ಪಾರ್ವತಿ ಮೆಚ್ಚಿನ ಲಕುಮಿಕರ ಸುಮುಖ

ತಂದೆ ತಾಯಿಯೇ ವಿಶ್ವ ವೆಂದ ದೇವ

ಗಜಮುಖ

ಸಣ್ಣತನದಲಿ ದೊಡ್ಡತನದ ಭಾವ ಭಕ್ತಿಯ

ಇಪ್ಪತ್ತೊಂದು ನಮಸ್ಕಾರ ಸದಾ ಅರ್ಪಿತ

ಗಜಮುಖ ಜನಮುಖಿ

ತನು ಮನ ನಿರ್ಮಲ ಭಕ್ತಿ ಭಾವಕೆ ಕೃಪೆ

ತೋರುವ ಪ್ರಥಮ ಪೂಜೆ ಅಧಿಪತಿ

ಶ್ರೀ ಗಣಪತಿ ವರಪ್ರದಾಯ

ಸರ್ವೇಶ್ವರ ಬಾಲಚಂದ್ರ

ಭಾದ್ರಪದ ಶುಕ್ಲ ಪಕ್ಷದ ಚತುರ್ದಶ

ಸರ್ವಜನ ಪೂಜಿತ ಕಪಿಲ

ಸುರಗ್ರಜ ನಮೋ ನಮಃ

-ದೇಶಂಸು

ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ

ಆರೋಗ್ಯ ನಿರೀಕ್ಷಣಾಧಿಕಾರಿ

“ವಿಶ್ವ ಮಾನವ ಜೀವ ರಕ್ಷಕ”

ಐಕಾನ್ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು.

ಬಾಗಲಕೋಟೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button