ಲಿಂಗಾಯತ ಗಾಣಿಗ 2ಎ ಜಾತಿ ಪ್ರಮಾಣ ಪತ್ರ ಕೊಡುವುದು ಕಾನೂನು ಬಾಹಿರ, ಕೊಟ್ಟಿರುವಂತ 2ಎ ಜಾತಿ ಪ್ರಮಾಣ ಪತ್ರ ರದ್ದು ಮಾಡಿ – ಬುಡ್ಡಿ ಬಸವರಾಜ್.
ಕೂಡ್ಲಿಗಿ ಸ.08

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ಶುಕ್ರವಾರ ರಂದು ಗಾಂಧೀಜಿ ಚಿತಾಭಸ್ಮ ದಿಂದ ಹತ್ತಾರು ಪ್ರಮುಖ ಹಾಗೂ ಹೋರಾಟಗಾರರು ಮುಂಖಂಡರುಗಳು ಕೂಡ್ಲಿಗಿಯ ಪ್ರಮುಖ ರಸ್ತೆಗಳ ಮೂಲಕ ಕೂಡ್ಲಿಗಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಲಿಂಗಾಯತ ಗಾಣಿಗ ಜಾತಿ ಅವರಿಗೆ ಜಾತಿ ಪ್ರಮಾಣ 2ಎ ಜಾತಿ ಪ್ರಮಾಣ ಪತ್ರವನ್ನು ಕೊಡಬಾರದು ಎಂಬ ಘೋಷಣೆಗಳೊಂದಿಗೆ ತಹಶೀಲ್ದಾರ್ರಾದ ರೇಣುಕಾ ರವರಿಗೆ ಆಡಳಿತ ಸೌಧದ ಮುಂದೆ ಬಂದು ಅನೇಕ ಮುಖಂಡರಗಳ ಸಮ್ಮುಖದಲ್ಲಿ ಮನವಿ ಪತ್ರವನ್ನು ಕೊಡಲಾಯಿತು. ಈ ಹಿಂದೆ ನಮ್ಮ ಕೂಡ್ಲಿಗಿ ತಾಲೂಕಿನಲ್ಲಿ 2ಎ ಜಾತಿ ಪ್ರಮಾಣ ಪತ್ರವನ್ನು ಲಿಂಗಾಯಿತ ಗಾಣಿಗ ಜಾತಿಯವರು ಪಡೆದು ಕೊಂಡಿರುತ್ತಾರೆ. ಇದು ಕಾನೂನು ಹಾಗೂ ಸಂವಿಧಾನ ಬಾಹಿರವಾಗಿ ಸುಳ್ಳು ಪ್ರಮಾಣ ಪತ್ರವನ್ನು ಪಡೆದಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ ಇದನ್ನು 2ಎ ವರ್ಗದಲ್ಲಿ ಬರುವ ಸಮಸ್ತ ಹಿಂದುಳಿದ ಜಾತಿಗಳು ಒಕ್ಕೂಟದಿಂದ ಖಂಡಿಸುತ್ತೇವೆ, ಕಾರಣ ಲಿಂಗಾಯಿತ ಗಾಣಿಗ ಜಾತಿಯವರಿಗೆ 2ಎ ಪ್ರಮಾಣ ಪತ್ರವನ್ನು ನೀಡಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ ಹೀಗಾಗಿ ಇವರು ಮುಂದುವರೆದ ಲಿಂಗಾಯತ ಜಾತಿಗೆ ಸೇರಿದವರಾಗಿದ್ದು.

ಇವರು ಹಿಂದುಳಿದ ಜಾತಿಯ 2ಎ ಪ್ರವರ್ಗಕ್ಕೆ ಸೇರಿದವರಲ್ಲ ಈ ಜಾತಿಯವರು ಸಾಮಾಜಿಕವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಮುಂದುವರೆದ ಪ್ರಮುಖ ಜಾತಿಯವರಾಗಿದ್ದು ಎಂದು ಕುರುಬ ಸಮುದಾಯದ ಜಿಲ್ಲಾಧ್ಯಕ್ಷರಾದ ಬುಡ್ಡಿ ಬಸವರಾಜ್ ರವರು ಮಾನ್ಯ ತಹಶೀಲ್ದಾರರು ಮುಂದಿನ ದಿನಗಳಲ್ಲಿ ಸದರಿ ಜಾತಿಯವರು 3ಎ ಪ್ರವರ್ಗದಲ್ಲಿ ಬರುವುದರಿಂದ ಈ ಜಾತಿಗೆ ಸೇರಿದ ಜನರಿಗೆ 2ಎ ಮೀಸಲಾತಿ ಪ್ರಮಾಣ ಪತ್ರವನ್ನು ನೀಡಬಾರದೆಂದು ಹಿಂದುಳಿದ ಜಾತಿಗಳ ಒಕ್ಕೂಟದ ಪರವಾಗಿ ತಹಸೀಲ್ದಾರ್ ರೇಣುಕ ರವರಿಗೆ ಮನವಿ ಮಾಡುವುದರ ಮೂಲಕ ಇದು ಪ್ರಥಮ ಹಂತದ ಹೋರಾಟ ಮುಂದುನ ದಿನಗಳಲ್ಲಿ ಇದು ಹಾಗೆ ಮುಂದು ವರೆದು 2ಎ ಜಾತಿ ಪ್ರಮಾಣ ಪತ್ರ ಕೊಡುವುದು ನಮ್ಮ ಗಮನಕ್ಕೆ ಬಂದರೆ ನಾವು ಯಾರು ಸಮ್ಮನಿರೋಲ್ಲ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚಾರಿಕೆಯ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಕುರುಬರ ಸಂಘದ ತಾಲೂಕ ಅಧ್ಯಕ್ಷರು ಕುರುಬರ ಬಸವರಾಜ್, ಡಿ.ಎಸ್.ಎಸ್ ಮುಖಂಡ ಎಳೆನೀರು ಗಂಗಣ್ಣ, ಹಡಪದ ಕೊಟ್ರೇಶ್, ಮಡಿವಾಳ ಮಾರೇಶ್ ಜಿಲ್ಲಾ ಅಧ್ಯಕ್ಷರು, ಲಕ್ಕಜ್ಜಿ ಮಲ್ಲಿಕಾರ್ಜುನ, ಹಿಂದುಳಿದ ವರ್ಗಗಳ ಒಕ್ಕೂಟ ಪ್ರಧಾನ ಕಾರ್ಯದರ್ಶಿ, ಚೌಡಪ್ಪ ಹಡಪದ ಸಮಾಜದ ತಾಲೂಕ ಅಧ್ಯಕ್ಷರು, ಉಪ್ಪಾರ್ ವೆಂಕಟೇಶ್ ಭಗೀರಥ ಜಿಲ್ಲಾ ಉಪಾಧ್ಯಕ್ಷರು, ಕೆ ಟಿ ರಾಜಣ್ಣ ಭಗೀರಥ ಜಿಲ್ಲಾಧ್ಯಕ್ಷ, ಮಡಿವಾಳ ಸಮಾಜದ ಅಧ್ಯಕ್ಷರು, ಸಿ ವಿ ನಾಗೇಶ್ ಹೊಸಳ್ಳಿ ಗಾಯಕನಹಳ್ಳಿ ಕನಕ ವಿದ್ಯಾ ಸಂಸ್ಥೆ ಬಿಟಿ ಮಂಜಣ್ಣ ಹಡಪದ ಜಿಲ್ಲಾಧ್ಯಕ್ಷರು ಕೊಟ್ರೇಶ್ ಸಮಾಜ ಮುಖಂಡರು ಮರಿಯಪ್ಪ ದಯಾನಂದ, ದೊಡ್ಡ ಲೋಕಪ್ಪ ಕುರುಬ ಸಮಾಜದ ಮುಖಂಡರು, ಉಜ್ಜಿನಿ ವೆಂಕಟೇಶ್,ಬಸವರಾಜ್ ಓಬಿಸಿ ಬ್ಲಾಕ್ ಕೂಡ್ಲಿಗಿ, ಕುಮಾರಸ್ವಾಮಿ ಯಾದವ್ ಸಮಾಜದ ಮುಖಂಡರು ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ. ಬಿ.ಸಾಲುಮನೆ.ಕೂಡ್ಲಿಗಿ.ವಿಜಯನಗರ.