ಶ್ರೀ ಬಸವನಗರ ವಾರ್ಡ್ 10/1 ಶ್ರೀ ಗಣೇಶ ಉತ್ಸವ ಅದ್ದೂರಿಯಾಗಿ ಆಚರಣೆ.

ಬಾಗಲಕೋಟೆ ಸ.08

ಶ್ರೀ ಬಸವ ನಗರ ವಾರ್ಡ್ 10/1 ಬಾಗಲಕೋಟ ಶ್ರೀ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮುಂಜಾನೆ ಮಂಗಲ ವಾದ್ಯ ಸುಮಂಗಲೆಯರ ಆರತಿ ಮಕ್ಕಳು “ಜಯ ಗಣೇಶ” ಗಣಪತಿ ಮೊರಯ್ಯ ಗಣಪತಿ ಬಪ್ಪ ಘೋಷ ಜಯಕಾರ ಹಾಕುತ್ತಾ ತೆರೆದ ವಾಹನದ ಮುಖಾಂತರ ವಿಘ್ನೇಶ್ವರ ಪೂಜಾ ಸ್ಥಳದಿ ಕರೆ ತಂದು ಹೂವು ಹಣ್ಣು ಹಾರ ಕಾಯಿ ಕರ್ಪೂರ ತನು ಮನ ಭಕ್ತಿ ಪೂರ್ವಕವಾಗಿ ಪೂಜೆ ಸಲ್ಲಿಸಿ ಮಂತ್ರ ಜಪದೊಂದಿಗೆ ವಿನಾಯಕ ವಿದ್ಯ ಬುದ್ಧಿ ಸಿದ್ಧಿಗೆ ರಿದ್ದಿದೇವನ ಸ್ಮರಣೆ ಮೂಲಕ ಲಂಬೋದರನಿಗೆ ಶಿರಬಾಗಿ ನಮಿಸಿ ಪೂಜಿಸಿ ಸಡಗರ ಸಂಭ್ರಮದಿಂದ ಸಹ ಕುಟುಂಬದವರು ಆಚರಿಸಿದರು. ಗೋಧುಳಿ ಸಮಯದಲ್ಲಿ ವಿಶೇಷ ಪೂಜೆಯೊಂದಿಗೆ ಮುದ್ದು ಮಕ್ಕಳ ಸಂಗೀತ ಆಸನ ಸ್ಪರ್ಧೆ, ಮಹಿಳೆಯರಿಗೆ ಪುರುಷರಿಗೆ ಸಂಗೀತ ಆಸನ ಸ್ಪರ್ಧೆ, ನೃತ್ಯ ಸಂಗೀತ ಪ್ರೇಕ್ಷಕರ ಗಮನ ಸೆಳೆಯಿತು ಶ್ರೀ ಬಸವ ನಗರ ಗಣೇಶ ಉತ್ಸವ ಸಮೀತಿಯಿಂದ ಬಹುಮಾನ ವಿತರಣೆ ಮಾಡಲಾಯಿತು ಶ್ರೀ ಗಣೇಶ ಮೂರ್ತಿಯ ಹೂಮಾಲೆ ಪೂಜಾ ಸಾಮಗ್ರಿಗಳ ಹರಾಜು ಪ್ರಕ್ರಿಯೆ ನಡೆಯಿತು ಬಡಾವಣೆ ನಿವಾಸಿಗಳಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಶ್ರೀ ಬಸವ ನಗರ ಗಣೇಶ ಉತ್ಸವ ಕಾರ್ಯಕ್ರಮದಲ್ಲಿ ಬಸವ ನಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವೀರೇಶ ಹಡಕ್ಯಾಳ, ಹಿರಿಯರಾದ ನಿಂಗಣ್ಣ ಕಂಕಣಮೇಲಿ, ಹಿರೇಕುಂಬಿ ಶರಣು ಅಮಾತಿಗೌಡರ, ಗುರು ವಡವಡಗಿ, ಸಂಜೀವ ಕುಲಕರ್ಣಿ, ಪ್ರಕಾಶ್ ಅಲದಿ, ಮಲ್ಲಪ್ಪ ಜಕ್ಕಲಿ, ಕೃಷ್ಣಾ ಪವಾರ ಆನಂದ ಭಗವತಿ, ಸುರೇಶ ಅಂಗಡಿ, ರಮೇಶ ತರಕಾರ, ಕೋಟಿ ಡಾ.ಎಚ್ ಆರ್ ತೋಸನಿವಾಲ, ರಡ್ಡಿ, ಮಹಾಂತೇಶ ನಾಲತವಾಡ, ಪ್ರೇಮ ಚವ್ಹಾಣ, ಪದಾಧಿಕಾರಿಗಳು, ಸಹ ಕುಟುಂಬ ಪರಿವಾರ ಮುದ್ದು ಮಕ್ಕಳು ಉತ್ಸಾಹದಿಂದ ಬಡಾವಣೆಯ ಗಣ್ಯ ಮಾನ್ಯರ ತನು ಮನ ಧನ ಸಹಾಯ ಸಹಕಾರದಿಂದ ಬಾಗಲಕೋಟೆ ಶ್ರೀ ಬಸವ ನಗರ ವಾರ್ಡ್ 10/1 ಬಾಗಲಕೋಟ ಶ್ರೀ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮುಂಜಾನೆ ಮಂಗಲ ವಾದ್ಯ ಸುಮಂಗಲೆಯರ ಆರತಿ ಮಕ್ಕಳು “ಜಯ ಗಣೇಶ” ಗಣಪತಿ ಮೊರಯ್ಯ ಗಣಪತಿ ಬಪ್ಪ ಘೋಷ ಜಯಕಾರ ಹಾಕುತ್ತಾ ತೆರೆದ ವಾಹನದ ಮುಖಾಂತರ ವಿಘ್ನೇಶ್ವರ ಪೂಜಾ ಸ್ಥಳದಿ ಕರೆ ತಂದು ಹೂವು ಹಣ್ಣು ಹಾರ ಕಾಯಿ ಕರ್ಪೂರ ತನು ಮನ ಭಕ್ತಿ ಪೂರ್ವಕವಾಗಿ ಪೂಜೆ ಸಲ್ಲಿಸಿ ಮಂತ್ರ ಜಪದೊಂದಿಗೆ ವಿನಾಯಕ ವಿದ್ಯ ಬುದ್ಧಿ ಸಿದ್ಧಿಗೆ ರಿದ್ದಿದೇವನ ಸ್ಮರಣೆ ಮೂಲಕ ಲಂಬೋದರನಿಗೆ ಶಿರಬಾಗಿ ನಮಿಸಿ ಪೂಜಿಸಿ ಸಡಗರ ಸಂಭ್ರಮದಿಂದ ಸಹ ಕುಟುಂಬದವರು ಬಾಗಲಕೋಟೆ ಶ್ರೀ ಬಸವನಗರ ವಾರ್ಡ್ 10/1 ಶ್ರೀ ಗಣೇಶ ಉತ್ಸವ ವಿಜ್ರಂಭಣೆಯಿಂದ ಯಶಸ್ವಿಯಾಗಿ ಜರುಗಿತು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button