ನಾಳೆ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜಿನ ಬಾಲಕರ, ಬಾಲಕಿಯರ ಕುಸ್ತಿ ಪಂದ್ಯಾವಳಿ ಆಯೋಜನೆ.

ಕಲಕೇರಿ ಸ.29

ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ನಾಳೆ ಸೋಮವಾರ ದಿಂದ ಆದರ್ಶ ಶಿಕ್ಷಣ ಸಂಸ್ಥೆಯ ಅವರಣದಲ್ಲಿ ನಡೆಯುವ ಕುಸ್ತಿ ಪಂದ್ಯ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ವಿಜಯಪುರ ಹಾಗೂ ಎ.ಕೆ. ಸಿರಸಗಿ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ 2024-25 ನೇ. ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜಿನ ಬಾಲಕರ ಬಾಲಕಿಯರ ಕುಸ್ತಿ ಪಂದ್ಯಗಳನ್ನು ನಾಳೆ 30/09/2024 ಬೆಳಿಗ್ಗೆ 9 ಗಂಟೆಗೆ ಆಯೋಜಿಸಲಾಗಿದೆ ಎಂದು ದೈಹಿಕ ಉಪನ್ಯಾಸಕ ಶಾಂತೇಶ ದುರ್ಗಿಯವರು ಇಂದು ನಡೆದ ಪಂದ್ಯದ ಕುರಿತು ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಸಮಾರಂಭದಲ್ಲಿ ಉದ್ಘಾಟಕರಾಗಿ ದೇವರ ಹಿಪ್ಪರಗಿ ಶಾಸಕರಾದ ರಾಜುಗೌಡ ಪಾಟೀಲ್ ಕುದುರಿ ಸಾಲವಾಡಗಿ. ಸಿಂದಗಿ ಶಾಸಕರಾದ ಅಶೋಕ ಮನಗೂಳಿ. ಜಾಹಂಗಿರ ಬಾಷಾ ಸಿರಸಗಿ. ಶ್ರೀಮತಿ ಆರ್. ಎಸ್ ಪ.ಪೂ.ಉಪ ನಿರ್ದೇಶಕರಾದ ಮುಜಾವಾರ. ಡಾ, ಸಿ.ಕೆ ಹೊಸಮನಿ. ಪ್ರಕಾಶ ಗೂಂಗಡಿ. ಸುರೇಶ ಮಂಟೂರ. ಪಿ.ಎಸ್.ಐ ಕಲಕೇರಿ ರಾಜ್ ಅಹ್ಮದ್ ಸಿರಸಗಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು. ಶ್ರೀಮತಿ ವಿಜಯಲಕ್ಷ್ಮಿ ಬೇಡರ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರು. ಶಾಂತಗೌಡ ಪಾಟೀಲ್ ಅಧ್ಯಕ್ಷರು ಎಸ್. ಎಮ್. ವ್ಹಿ.ವ್ಹಿ. ಸಂಘ.ಕಲಕೇರಿ. ಸಿ.ಎಸ್. ಹಿರೇಮಠ್ ಪ್ರಾಚಾರ್ಯರು. ಶ್ರೀ ಬಸವೇಶ್ವರ ಸಂಯುಕ್ತ ಪ.ಪೂ. ಕಾಲೇಜ್ ಕಲಕೇರಿ. ಕೆ.ಎಚ್. ಸೋಮಾಪೂರ ಅಧ್ಯಕ್ಷರು ಲಯನ್ಸ ಕ್ಲಬ್. ಸಿಂದಗಿ. ಶಾಂತಗೌಡ ಗೋಗಿ ವಿಶ್ರಾಂತ ದೈಹಿಕ ಉಪನ್ಯಾಸಕರು ಸಿಕ್ಯಾಭ ಪದವಿ ಪೂರ್ವ ಕಾಲೇಜು ವಿಜಯಪುರ. ಉಮೇಶ್ ಜೋಗುರ್ ಗಣ್ಯ ವ್ಯಾಪಾರಸ್ಥರು ಹಾಗೂ ಜೋಗಾರ್ ಮೋಟರ. ಸಿಂದಗಿ. ಸಂಗಯ್ಯ.ಎಂ. ಮಠ ವ್ಯವಸ್ಥಾಪಕರು. ವೀಮಹೇಶ್ವರಿ ಕೋ ಆಪ್ ಬ್ಯಾಂಕ್ .ಸಿಂದಗಿ. ಶ್ರೀಧರ .ಎಸ್. ಬಿರಾದಾರ (ಅಡಿಕಿ) ಗಣ್ಯ ವ್ಯಾಪಾರಸ್ಥರು.ಸಿಂದಗಿ. ಎಲ್ಲಾ ರಾಜಕಾರಣಿಗಳು ಅನೇಕ ಮುಖಂಡರು ಈ ಸಮಾರಂಭದಲ್ಲಿ ಪಾಲ್ಗೊಳ್ಳುವರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ತಾಳಿಕೋಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button