ಮಾನವೀಯತೆ ಸಂದೇಶ ವೇದಿಕೆ ವತಿಯಿಂದ ಕಂಬಳಿಗಳ ವಿತರಣೆ.

ಸಿಂದಗಿ ಜನೇವರಿ.10

ನಗರದಲ್ಲಿ ಅಖಿಲ ಭಾರತ ಮಾನವೀಯತೆ ಸಂದೇಶ ವೇದಿಕೆ ಸಿಂದಗಿ ಶಾಖೆ ವತಿಯಿಂದ ಕಂಬಳಿ ವಿತರಿಸಲಾಯಿತು.ಈ ಸಂದರ್ಭದಲ್ಲಿ ತಾಲೂಕ ಆಸ್ಪತ್ರೆಯ ಪ್ರಯೋಗಾಲಯ ಅಧಿಕಾರಿ ಅತಿಥಿಗಳಾಗಿ ಆಗಮಿಸಿ, ರಾಜ್ ಶೇಖರ್ ನರಗೋದಿ ಮಾತನಾಡಿದರು, ಮಾನವೀಯತೆ ಸಂದೇಶ ವೇದಿಕೆಯ ಕಾರ್ಯ ಅದ್ವಿತೀಯವಾದುದು.ವೇದಿಕೆ ಅತ್ಯಂತ ಕಷ್ಟದಲ್ಲಿರುವವರನ್ನು ತಲುಪಿ ಅವರಿಗೆ ನೇರವಾಗುವ ಸಹಾಯ ಮಾಡುತ್ತದೆ.ಮತ್ತು ದಾನ ಕಾರ್ಯ ಮಾತ್ರವಲ್ಲದೆ ಪ್ರೀತಿ, ವಾತ್ಸಲ್ಯದ ಮೂಲಕ ಪರಸ್ಪರ ಸಹಕಾರ ದಿಂದ ಮಾನವೀಯತೆ ಹಾಗೂ ಸಮಾಜವನ್ನು ಅಭಿವೃದ್ಧಿ ಪಡಿಸುತ್ತದೆ.ನಮ್ಮ ಹಿರಿಯರು ತ್ಯಾಗ ಬಲಿದಾನದ ಮೂಲಕ ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ ,ದೇಶವನ್ನು ಸುಂದರ ಗೊಳಿಸಿದ್ದಾರೆ.

ಈ ದೇಶದ ಅಭಿವೃದ್ಧಿಗೆ ಮಾನವೀಯತೆಯ ನೆಲೆಯಲ್ಲಿ ಕೆಲಸ ಮಾಡ ಬೇಕಾಗಿದೆ.ಈ ಸಂದರ್ಭದಲ್ಲಿ ಮೌಲಾನಾ ದಾವೂದ್ ನದ್ವಿ ಮಾತನಾಡಿ, ಪರಸ್ಪರ ಸಹಕಾರದಿಂದ ಮಾತ್ರ ಮನುಷ್ಯ ಮತ್ತು ಸಮಾಜ ಬಲಿಷ್ಠವಾಗುಲು ಸಾಧ್ಯ. ಮತ್ತು ಸಹಾಯದ ಮೂಲಕ ಒಬ್ಬರಿ ಗೊಬ್ಬರು ಬೆಂಬಲವನ್ನು , ನೀಡಲು ನಾವು ಕೆಲಸ ಮಾಡ ಬೇಕಾಗಿದೆ ವೇದಿಕೆಯು ಮಾನವೀಯ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದೆ ಹಾಗೂ ಪರಸ್ಪರ ಸಂಬಂಧಗಳನ್ನು ಬಲ ಪಡಿಸುತ್ತದೆ. ಪ್ರತಿ ವ್ಯಕ್ತಿಯ ಬಳಿ ತಲುಪುವ ಮೂಲಕ ಸೇವೆ ಮಾಡಲು ಪ್ರಯತ್ನಿಸುತ್ತಿದೆ.ಒಗ್ಗಟ್ಟು ಬಹಳ ಮುಖ್ಯವಾಗಿದ್ದು, ಮಾನವೀಯ ನೆಲೆಯಲ್ಲಿ ಒಗ್ಗೂಡುವ ಮೂಲಕ ಉತ್ತಮ ವಾತಾವರಣ ನಿರ್ಮಿಸಬೇಕಿದೆ.ನಾವು ಎಲ್ಲಿಯೇ ವಾಸಿಸಲಿ ಅಲ್ಲಿ ಉತ್ತಮ ವ್ಯಕ್ತಿ ಯಾಗಿರಬೇಕು ಮತ್ತು ಯಾವಾಗಲೂ ಇತರರನ್ನು ಸಹಕಾರ ನೀಡಬೇಕು.ಎಂದು ತಿಳಿಸಿ ಹೇಳಿದರು ಈ ಕಾರ್ಯಕ್ರಮದಲ್ಲಿ ಮೌಲಾನಾ ಕಲೀಮುಲ್ಲಾಹ ನದ್ವ ಮೌಲಾನಾ ಇಬ್ರಾಹೀಮ ಶಫೀಕ ಸಾಬ ಮೈಹಿಬೂಬ ಯಂಕನಚಿ ಸಾಥ ನೀಡದರು.

ತಾಲೂಕ ವರದಿಗಾರರು:ಭೀಮಪ್ಪ ಹಚ್ಯಾಳ. ದೇವರ ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button