ಅಮಾಯಕ ವಿದ್ಯಾರ್ಥಿ ಮೇಲೆ ಶಿಕ್ಷಕ ನಿಂದಲೇ ಹಲ್ಲೆ-ಆಕ್ರೋಶ.
ರೋಣ ಡಿ.11

ಕ್ಷುಲ್ಲಕ ಕಾರಣಕ್ಕೆ ಪಟ್ಟಣದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಶಿಕ್ಷಕರೊಬ್ಬರು ವಿದ್ಯಾರ್ಥಿಯನ್ನು ಮನಬಂದತೆ ಥಳಿಸಿದ ಘಟನೆ ನಡೆದಿದ್ದು, ಗಂಭೀರ ಗಾಯಗೊಂಡ ವಿದ್ಯಾರ್ಥಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.ಬಸವರಾಜ ಒಡೆಯರ ಎಂಬಾತನೇ ಹಲ್ಲೆಗೊಳಗಾದ 10 ನೇ. ತರಗತಿ ವಿದ್ಯಾರ್ಥಿ. ವಿದ್ಯಾರ್ಥಿ ಬೆಳಗಿನ ಜಾವ ಶಾಲೆಯಲ್ಲಿ ನೀಡಿರುವ ಟ್ರ್ಯಾಕ್ ಪ್ಯಾಂಟ್ ಹಾಗೂ ಟಿ-ಶರ್ಟ್ ಧರಿಸಿ ವಾಕಿಂಗ್ ಮಾಡುತ್ತಿದ್ದ ವೇಳೆ ಬಸವರಾಜ ಹಾಗೂ ಆತನ ಸ್ನೇಹಿತರು ಅಂತರಾಷ್ಟ್ರೀಯ ಪುಟ್ಬಾಲ್ ಆಟಗಾರರ ಬಗ್ಗೆ ಚರ್ಚೆ ಮಾಡುವಾಗ ಆ ಅಂತರಾಷ್ಟ್ರೀಯ ಆಟಗಾರನಂತೆ ಬಸವರಾಜ ಪುಟ್ ಬಾಲ್ ಒದೆಯುವ ಶೈಲಿಯನ್ನು ತನ್ನ ಗೆಳೆಯರಿಗೆ ತೋರಿಸುತ್ತಾನೆ ಆ ಕ್ಷಣದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಧೂಳಪ್ಪ ಗಾಣಿಗೇರ ಆ ಸ್ಥಳಕ್ಕೆ ಬರುವಾಗ ನನಗೆ ಕಾಲು ತೋರಿಸಿ ಮಾತನಾಡತಿಯ ಎಂದು ಹಾಗೂ ನೀನೇನು ದೊಡ್ಡ ಅಂತಾರಾಷ್ಟ್ರೀಯ ಪುಟ್ ಬಾಲ್ ಆಟಗಾರ ಆಗಿದ್ದೀಯಾ ಎಂದು ಇದಕ್ಕೆ ಕೋಪ ಗೊಂಡ ಶಿಕ್ಷಕ ವಿದ್ಯಾರ್ಥಿಯನ್ನು ಮನ ಬಂದಂತೆ ಹೊಡೆದಿದ್ದಾರೆ. ಗಂಭೀರ ಗಾಯಗೊಂಡ ವಿದ್ಯಾರ್ಥಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ವಿದ್ಯಾರ್ಥಿ ಪೋಷಕರು ಮಗನನ್ನು ಹೊಡೆದಿದ್ದರ ಬಗ್ಗೆ ಹಲ್ಲೆ ಮಾಡಿದ ಶಿಕ್ಷಕನನ್ನು ಪ್ರಶ್ನಿಸಿದ್ದಾರೆ. ಆಗ ಶಿಕ್ಷಕ ಪೋಷಕರ ಮೇಲೂ ದರ್ಪ ತೋರಿದ್ದಾನೆ. ಈ ವೇಳೆ ಶಿಕ್ಷಕ ಹಾಗೂ ಪಾಲಕರ ನಡುವೆ ಗಲಾಟೆ ಕೂಡ ನಡೆದಿದೆ. ಶಾಲೆಯ ಇನ್ನೂಳಿದ ಶಿಕ್ಷಕರು ಪಾಲಕರನ್ನು ಸಮಾಧಾನ ಪಡಿಸಿದರು ತಮ್ಮ ಮಗನ ಮೇಲೆ ಆಗಿರುವ ತೀವ್ರ ಗಾಯವನ್ನು ನೋಡಿ ಕೋಪಗೊಂಡು ದೈಹಿಕ ಶಿಕ್ಷಕ ಧೂಳಪ್ಪ ಗಾಣಿಗೇರ ಮೇಲೆ ನರೇಗಲ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾತಿ ಮಾಡಲಾಗಿದೆ ಎಂದು ವರದಿಯಾಗಿದೆ.ಬಾಕ್ಸ್-:ನಮ್ಮ ಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಧೂಳಪ್ಪ ಗಾಣಿಗೇರ ವಿದ್ಯಾರ್ಥಿ ಬಸವರಾಜ ಒಡೆಯರ ಅವರನ್ನು ಹೊಡೆದಿದ್ದಾರೆ. ಇದರಿಂದ ವಿದ್ಯಾರ್ಥಿಗೆ ಬಾಸುಂಡೆ ಮೂಡಿದ್ದು, ರಕ್ತ ಕೂಡ ಬಂದಿದೆ. ಗಾಯಾಳು ವಿದ್ಯಾರ್ಥಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಪಾಲಕರು ಕರೆದುಕೊಂಡು ಹೋಗಿದ್ದಾರೆ. ಶಿಕ್ಷಕ ತಪೊಪ್ಪಿಗೆ ಬರೆದು ಕೊಟ್ಟಿದ್ದು, ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು.• ಜಿ. ನಾಗರಾಜ, ಪ್ರಾಚಾರ್ಯರು, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ ರೋಣ