ಅಸ್ಕಿ ಗ್ರಾಮೀಣ ಬ್ಯಾಂಕಿನ ಮ್ಯಾನೇಜರ್ ಎಂ. ಮೋಹನ್ ರಾವ್ ರವರಿಗೆ ರೈತರಿಂದ ಸನ್ಮಾನಿಸಿ ಗೌರವಿಸಿದರು.
ಅಸ್ಕಿ ಜು.10

ತಾಳಿಕೋಟೆ ತಾಲೂಕಿನ ಅಸ್ಕಿ ಗ್ರಾಮದ ಗ್ರಾಮೀಣ ಬ್ಯಾಂಕಿನ ಮ್ಯಾನೇಜರ್.ಎಂ. ಮೋಹನ್ ರಾವ್ ಇವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಇವರ ವತಿಯಿಂದ ಗೌರವ ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ ರೈತ ಸಂಘ ತಾಲೂಕ ಅಧ್ಯಕ್ಷರಾದ ಶ್ರೀಶೈಲ್ ವಾಲಿಕಾರ್ ಇವರು ಈ ಬ್ಯಾಂಕಿನ ಮ್ಯಾನೇಜರ್ ಸಾಹೇಬರು ನಮ್ಮ ರೈತರಿಗೆ ಒಳ್ಳೆ ಮಾರ್ಗದರ್ಶಕ ಆಗಿದ್ದಾರೆ ಯಾವುದೇ ರೈತರ ಬಗ್ಗೆ ಸಾಲ ಬೇಕಾದರೆ ರೈತರಿಗೆ ಬಹಳ ಬೆಂಗಾವಲಾಗಿ ರೈತರಿಗೆ ಸಲಹೆ ನೀಡಿದ ಗ್ರಾಮೀಣ ಬ್ಯಾಂಕಿನ ಮ್ಯಾನೇಜರ್ ಸಾಹೇಬರಿಗೆ ಹೃದಯ ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.

ಮತ್ತು ರೈತ ಸಂಘದ ಅಧ್ಯಕ್ಷರಾದ ಮೈಬೂಬಬಾಷ ಮನಗೂಳಿ ಇವರು ಕೂಡ ಅಸ್ಕಿ ಗ್ರಾಮೀಣ ಬ್ಯಾಂಕಿನ ಮ್ಯಾನೇಜರ್ ಸಾಹೇಬರಿಗೆ ಶಾಲು ಸನ್ಮಾನ ಮಾಡಿ ಅಭಿನಂದನೆಗಳನ್ನು ಸಲ್ಲಿಸಿದರು.ಈ ವೇಳೆ ಕಲಿಕೇರಿ ಗ್ರಾಮದ ರೈತ ಮುಖಂಡರಾದ ಶರಣು ಕೌದಿ ಅಸ್ಕಿ ಗ್ರಾಮೀಣ ಬ್ಯಾಂಕಿನ ಮ್ಯಾನೇಜರ್ ಸಾಹೇಬರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ರಾಘವೇಂದ್ರ ಸರ್ ಫೀಲ್ಡ್ ಆಫೀಸರ್. ಶಿವು ಹೂಸೂರ್. ಯಮನಪ್ಪ ಬನ್ನಟ್ಟಿ. ಅನೇಕ ರೈತ ಬಾಂಧವರು ಪಾಲ್ಗೊಂಡಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ ಮನಗೂಳಿ ತಾಳಿಕೋಟೆ.