ಈ ದಿನ ಕೂಡ್ಲಿಗಿ ಕೃಷಿ ಇಲಾಖೆಯ ಆವರಣದಲ್ಲಿ ರೈತ ದಿನಾಚರಣೆಯನ್ನು ಆಚರಿಸಲಾಯಿತು.

ಕೂಡ್ಲಿಗಿ ಡಿಸೆಂಬರ್.24

ಕೃಷಿ ಸಮಾಜದ ಪ್ರಧಾನ ಕಾರ್ಯದರ್ಶಿಎಮ್.ಬಸವರಾಜ್ ಮಾತನಾಡಿ ಇತ್ತಿಚಿನ ದಿನಗಳಲ್ಲಿ ಕೃಷಿ ಮಾಡುವವರ ಸಂಖ್ಯೆ ತೀರಾ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗಿರುತ್ತದೆ ಕಾರಣ ನಮ್ಮ ರೈತರು ಆಧುನಿಕ ಕೃಷಿಗೆ ಮಾರು ಹೋಗಿ ಹಳೆಯ ಪದ್ದತಿ ಸಾವಯವ ಕೃಷಿ ಮರೆತು ಅನೇಕ ರೋಗ ಲಕ್ಷಣಗಳು ಸಾಮಾನ್ಯವಾಗಿ ಬಿಟ್ಟಿವೆ ಸಣ್ಣ ಸಣ್ಣ ವಯಸ್ಸಿನಲ್ಲಿ ಬಿ.ಪಿ.ಶುಗರ್.ನಂತಹ ಅನೆಕ ಕಾಯಿಲೆಗಳು ನಮ್ಮನ್ನು ಕಾಡುತ್ತಿವೆ ಇದಕ್ಕೆಲ್ಲ ಕಾರಣ ರಾಸಾಯನಿಕ ಕೃಷಿ ಮತ್ತೆ ನಾವು ಹಳೆಯ ಪದ್ದತಿ ಸಾಂಪ್ರದಾಯಿಕ ಕೃಷಿಗೆ ಒತ್ತು ಕೊಡುವ ಮೂಲಕ ನಮ್ನ ಕೃಷಿ ಉಳಿಸಬೇಕೆಂದು ಹೇಳಿದರು.ದೇವರಮನಿ ಮಹೇಶ ಮಾತನಾಡಿ ಸರ್ಕಾರಗಳು ರೈತರಿಗೆ ಅನುಕೂಲ ಆಗುವಂತಹ ಕಾರ್ಯಗಳನ್ನು ತರುವ ಮೂಲಕ ಮತ್ತು ಬೀಜ ಗೊಬ್ಬರಗಳ ಸರಿಯಾದ ರೀತಿಯಲ್ಲಿ ಸರಬರಾಜು ಮಾಡುವ ಮೂಲಕ ಮತ್ತು ರೈತರಿಗೆ ಸಹಾಯ ಧನ ಕೊಡುವ ಮೂಲಕ ನೀರಾವರಿ ಅವಕಾಶ ಕಲ್ಪಿಸುವ ಯೋಜನೆಗಳನ್ನು ರೂಪಿಸಲು ಮನವಿ ಮಾಡಿದರು.

ಕಾಯಕಲ್ಪ ರೈತ ಉತ್ಪಾದಕರ ಸಂಘದ ಸಿ.ಇ ಒ.ನಾಗರಾಜ್ ಮಾತನಾಡುತ್ತಾ ರೈತರು ಮೌಲ್ಯ ವರ್ಧನೆ ಮಾಡಿ ಲಾಭವನ್ನು ಗಳಿಸಲು ಸಾಧ್ಯ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ ರೈತ ಕಂಪನಿಗಳನ್ನು ಮಾಡುವುದರ ಮೂಲಕ ರೈತ ಆರ್ಥಿಕವಾಗಿ ಹೆಚ್ಚು ಲಾಭ ಗಳಿಸಬಹುದು ಎಂದರು ನಂತರ ಕೃಷಿ ಇಲಾಖೆಯು ಸಹಾಯಕ ನಿರ್ದೆಶಕರೂ ಸುನೀಲ್ ಕುಮಾರ್ ಇವರು ಪ್ರಾಸ್ಥಾವಿಕದಲ್ಲಿ ಅರ್ಥಪೂರ್ಣ ರೈತ ದಿನಾಚರಣೆಯನ್ನು ಆಚರಿಸಬೇಕೆಂದು ಮತ್ತು ರೈತರು ಸರ್ಕಾರದ ವತಿಯಿಂದ ಸಿಗುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಪಡೆದು ಕೊಂಡು ಆಧುನಿಕ ತಂತ್ರಜ್ಞಾನ ಬಳಸಿ ರೈತರು ಸ್ವಾವಲಂಬಿ ಜೀವನ ನಡೆಸಲು ತಿಳಿಸಿದರೂ.ಈ ಸಂದರ್ಭದಲ್ಲಿ ಶ್ರವಣ ಕುಮಾರ್ ನಿರೂಪಣೆ ಮಾಡಿದರು ನೀಲಾನಾಯ್ಕ್ ಅವರು ಸ್ವಾಗತ ಮಾಡಿದರು ಮತ್ತು 5 ಜನ ವಿವಿಧ ರೀತಿಯ ಕೃಷಿಗಳಲ್ಲಿ ಸಾಧನೆ ಮಾಡಿದ ರೈತರನ್ನು ಗುರುತಿಸಿ ಸನ್ಮಾನಿಸಲಾಯಿತು.

ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button