ಅಲೆಮಾರಿ ಹಕ್ಕಿ ಪಿಕ್ಕಿ ಜನಾಂಗಕ್ಕೆ ಮನೆ ನಿರ್ಮಾಣಕ್ಕೆ ಒತ್ತಾಯ – ಜನತಾ ದರ್ಶನ ಕಾರ್ಯಕ್ರಮದಲ್ಲಿ ಮನವಿ ಪತ್ರ ನೀಡಿದರು.
ಹೊಸಪೇಟೆ ಆ.15

ನಗರ ವ್ಯಾಪ್ತಿಯಲ್ಲಿ ಬರುವ ಕಾರಿಗನೂರು ಅಲೆಮಾರಿ ಹಕ್ಕಿ ಪಿಕ್ಕಿ ಸಮುದಾಯದ 43 ಫಲಾನುಭವಿಗಳಿಗೆ ಅತೀ ಶೀಘ್ರದಲ್ಲಿ ಮನೆ ನಿರ್ಮಾಣ ಮಾಡಿ ಕೊಡುತ್ತೇವೆ ಎಂದು ಹೊಸಪೇಟೆಯಲ್ಲಿ ಜನತಾದರ್ಶನ ಕಾರ್ಯಕ್ರಮದಲ್ಲಿ ಭರವಸೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ಇದುವರೆಗೆ ಯಾವುದೇ ಕಾಮಗಾರಿ ನಡೆದಿಲ್ಲ. ಅತೀ ಶೀಘ್ರದಲ್ಲಿ ಆಲೆಮಾರಿಗಳಿಗೆ ವಸತಿ ನಿರ್ಮಾಣ ಮಾಡುವಂತೆ ಜಿಲ್ಲಾ ಸಚಿವ ಜಮೀರ್ ಹಮದ್ ಖಾನ್ ಇವರಿಗೆ ಅಲೆಮಾರಿ ಬುಡಕಟ್ಟು ರಾಜ್ಯಾಧ್ಯಕ್ಷರಾದ ಸಣ್ಣ ಮಾರೆಪ್ಪ ಮನವಿ ಪತ್ರ ಸಲ್ಲಿಸಿದರು.ಹೊಸಪೇಟೆ ನಗರ ವ್ಯಾಪ್ತಿಯಲ್ಲಿ ಬರುವ ಕಾರಿಗನೂರು ಶಿಕಾರಿ ಕಾಲೋನಿಯ ಎಸ್.ಟಿ.ಅಲೆಮಾರಿ ಹಕ್ಕಿ ಪಿಕ್ಕಿ ಸಮುದಾಯದ 43 ಕುಟುಂಬಗಳ ಫಲಾನುಭವಿಗಳಿಗೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತ ಹಾಗೂ ರಾಜೀವ್ ಗಾಂಧಿ ವಸತಿ ಇಲಾಖೆಯಿಂದ ಈ ಹಿಂದೆ ಮನೆ ಮಂಜೂರಾತಿ ಮತ್ತು ಕಾಮಗಾರಿ ಆದೇಶ ಪತ್ರಗಳನ್ನು ವಿತರಿಸಲಾಯಿತು. ವಸತಿ ನಿರ್ಮಾಣ ಕಾಮಗಾರಿ ನಡೆಯದೆ ಇರುವುದು ವಿಪರ್ಯಾಸ ಜನತಾ ದರ್ಶನ ಕಾರ್ಯಕ್ರಮದಲ್ಲಿ ಗಣಿ ಭಾದಿತ ಪ್ರದೇಶವಾಗಿರುವ ನಗರದ ಕಾರಿಗನೂರಿನ ಅಲೆಮಾರಿಗಳ ಹಕ್ಕಿ ಪಿಕ್ಕಿ ಸಮುದಾಯದ ಜನರು ವಾಸವಾಗಿರುವ ಕಾಲೋನಿಗೆ ಭೇಟಿ ನೀಡಿದಾಗ ಅಲೆಮಾರಿ ಹಕ್ಕಿ ಪಿಕ್ಕಿ ಜನಾಂಗದವರ ಕಾಲೋನಿಯ ನಿವಾಸಿಗಳನ್ನು ವಿಚಾರಿಸಿ, ವಾಸ್ತವ್ಯ ಸ್ಥಿತಿಯನ್ನು ಪರಿಗಣಿಸಿ ಅಲೆಮಾರಿ’ ಜನಾಂಗದವರ ಮನವಿ ಪತ್ರವನ್ನು ಪಡೆದು ಕೊಂಡು ಹಕ್ಕಿ ಪಿಕ್ಕಿ ಸಮುದಾಯದ ವರಿಗೆ ಸಾರ್ವಜನಿಕರ ಸಮ್ಮುಖದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು, ಜಿಲ್ಲಾಧಿಕಾರಿಗಳು ತಹಶೀಲ್ದಾರರು ಇವರ ಸಮ್ಮುಖದಲ್ಲಿ ಗಣಿ ಭಾದಿತ ಅನುದಾನದಲ್ಲಿ 43 ಮನೆಗಳನ್ನು ಅಲೆಮಾರಿ ಜನಾಂಗದವರಿಗೆ ಮೂರು ತಿಂಗಳ ಒಳಗಾಗಿ ನಿರ್ಮಿಸಿ ಕೊಡುತ್ತೇವೆ ಎಂದು ಸಚಿವರು ಭರವಸೆ ನೀಡಿದ್ದಾರೆ ಎಂದರು.ಈ ಸಂದರ್ಭದಲ್ಲಿ ಪಕ್ಕೀರಪ್ಪ ಬಾದಗಿ, ಜೆ ರಮೇಶ್, ರಾಜು ಕುಮಾರ್, ಮಾರುತಿ, ಸಣ್ಣ ಬಾಬು, ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಒಕ್ಕೂಟ ಪದಾಧಿಕಾರಿಗಳು ಸದಸ್ಯರು ಹಾಗು ಅಲೆಮಾರಿ ಸಮುದಾಯದ ಮುಖಂಡರು ಇತರರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್. ಹೊಸಪೇಟೆ