ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಖಂಡಿಸಿ ಕಾಂಗ್ರೇಸ್ ಆಕ್ರೋಶ ವ್ಯಕ್ತಪಡಿಸಿದೆ.
ಹೊಸಪೇಟೆ ಜೂನ್.21

ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ಪೂರೈಸದೇ ರಾಜ್ಯಗಳ ಮಧ್ಯೆ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಮಂಗಳವಾರ ನಗರದಲ್ಲಿ ಪ್ರತಿಭಟನಾ ನಡೆಸಿತು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿರಾಜ್ ಶೇಕ್ ಮಾತನಾಡಿ, ರಾಜ್ಯದಲ್ಲಿರುವ ಎಲ್ಲಾ ಬಿಪಿಎಲ್, ಅಂತ್ಯೋದಯ ಕಾರ್ಡ್ದಾರರಿಗೆ ತಲಾ 10 ಕೆ.ಜಿ. ಅಕ್ಕಿ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ಅದಕ್ಕಾಗಿ ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾಕ್ಕೆ 2.8 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಪೂರೈಕೆಗೆ ರಾಜ್ಯ ಸರ್ಕಾರ ಪತ್ರ ಬರೆದರೆ, ಅಕ್ಕಿ ನೀಡಲು ಆಗುವುದಿಲ್ಲ ಎಂದು ಜೂ.13 ರಂದು ಉತ್ತರಿಸುವ ಮೂಲಕ ಕೇಂದ್ರ ಸರ್ಕಾರ ಕನ್ನಡಿಗರನ್ನು ನಿರ್ಲಕ್ಷಿಸಿದೆ. ಎಥೆನಾಲ್ ಉತ್ಪಾದನೆಗಾಗಿ ಖಾಸಗಿ ಕಂಪನಿಗಳಿಗೆ ಪ್ರತಿ ಕೆಜಿ 24 ರೂ. ರಂತೆ ಕೇಂದ್ರ ಸರ್ಕಾರ ಪೂರೈಸುತ್ತಿದೆ.

ನಾವು ಪ್ರತಿ ಕೆಜಿಗೆ 34 ರೂ. ನೀಡಲು ಒಪ್ಪಿದ್ದೇವೆ. ಹೀಗಿದ್ದರೂ ರಾಜ್ಯ ಸರ್ಕಾರಕ್ಕೆ ಅಕ್ಕಿ ಪೂರೈಕೆಗೆ ಹಿಂದೇಟು ಹಾಕುತ್ತಿರುವುದು ಸರಿಯಲ್ಲ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದಂತೆ ನಡೆಯುತ್ತಿದ್ದಾರೆ. ಐದೂ ಗ್ಯಾರಂಟಿಗಳನ್ನು ಈಡೇರಿಸಲಿದ್ದಾರೆ. ಈಗಾಗಲೇ ಎರಡು ಗ್ಯಾರಂಟಿಗಳಿಗೆ ಚಾಲನೆ ನೀಡಲಾಗಿದೆ. ಅನ್ನಭಾಗ್ಯ ಯೋಜನೆಗೆ ಅಕ್ಕಿ ಸರಬರಾಜಿಗೆ ಕೇಂದ್ರ ಸರ್ಕಾರ ಹಿಂದೇಟು ಹಾಕಿರುವುದು ನಿಜಕ್ಕೂ ಖಂಡನೀಯ ಎಂದರು.ಈ ಸಂದರ್ಭದಲ್ಲಿ ತಹಶೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರವನ್ನು ನೀಡಲಾಯಿತುಕೂಡ್ಲಿಗಿ ಶಾಸಕಡಾ.ಎನ್.ಟಿ.ಶ್ರೀನಿವಾಸ್ಹರಪನಹಳ್ಳಿ ಎಂ.ಪಿ.ಲತಾ ಮಾತನಾಡಿದರು. ಮುಖಂಡರಾದ ತಮನಳೇಪ್ಪ.ಬೇಲೂರು ಅಂಜಿನಪ್ಪ.ಪ್ರೇಮಕುಮಾರ ಮಾತನಾಡಿದರು.

ಮುಖಂಡರಾದ ತಮನಳೇಪ್ಪ, ಬೇಲೂರು ಅಂಜಿನಪ್ಪ. ಅಟವಾಳಗಿ ಕೊಟ್ರೇಶ, ಹನುಮಂತಪ್ಪ, ಗುರುಸಿದ್ಧನಗೌಡ, ಸಂಗಪ್ಪ, ಡಿ.ವೆಂಕಟರಮಣ, ನಿಂಬಗಲ್ ರಾಮಕೃಷ್ಣ, ಸಣ್ಣ ಮಾರೆಪ್ಪ, ಬಣ್ಣದಮನೆ ಸೋಮಶೇಖರ್, ಮಾರೆಣ್ಣ, ಅಂಕೇಶ್ ನಾಯಕ, ಪ್ರದೀಪ್ ಕುಮಾರ, ರಾಜಾಸಾಬ್, ಸೈಯದ್ ಶುಕ್ರು, ಅಸ್ಲಂ ಮಾಳಗಿ, ಸಣ ವೀರಪ್ಪ, ಸಾಹೀರಾ ಬಾನು, ಶಿಲ್ಪಾ, ಯೋಗಲಕ್ಷ್ಮೀ ಇತರರಿದ್ದರು.
ತಾಲೂಕ ವರದಿಗಾರರು:ಮಾಲತೇಶ್. ಶೆಟ್ಟರ್. ಹೊಸಪೇಟೆ