ನೀರು ಕಾಯಿಸಿ, ಸೋಸಿ ಕುಡಿಯಿರಿ.
ಮನಗೂಳಿ ಜು.22

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಜನತೆಗೆ ನಲ್ಲಿ ಮೂಲಕ ಪೂರೈಸ ಲಾಗುತ್ತಿರುವ ಕೃಷ್ಣ ನದಿಯ ಕುಡಿಯುವ ನೀರನ್ನು ಕಾಯಿಸಿ, ಆರಿಸಿ, ಸೋಸಿ ಬಳಿಕೆ ಮಾಡಬೇಕು. ಮಳೆಗಾಲ ಹಿನ್ನೆಲೆಯಲ್ಲಿ ನದಿಯಲ್ಲಿ ಮಳೆ ನೀರು ಸೇರಿ ಕೊಂಡಿದೆ . ನೀರು ಶುದ್ಧೀಕರಣ ಮಾಡಿದರು ಮುಂಜಾಗ್ರತೆ ಕೈಗೊಳ್ಳ ಬೇಕು. ಹಾಗೂ ಸ್ವಚ್ಛತೆ ಕಾಪಾಡ ಬೇಕು. ನೀರು ಮಿತವಾಗಿ ಬಳಸ ಬೇಕು. ನೀರು ತಮಗೆ ಸಾಕಾದ ಮೇಲೆ ನಲ್ಲಿ ನೀರು ಬಂದ್ ಮಾಡುವುದು. ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಇದು ಪರಿಣಾಮಕಾರಿ ಕ್ರಮವಾಗಿದೆ ಎಂದು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳಾದ ಶಬ್ಬೀರ್ ರೇವೂರಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್ ವಾಯ್ ಕಿಳ್ಳಿ.ಇಲಕಲ್ಲ.