ಮಾನವೀಯತೆ ಮೆರೆದ ಧರ್ಮಸ್ಥಳ ಸಂಸ್ಥೆಯ ಕಾರ್ಯಕರ್ತರು.
ಹೊಸಪೇಟೆ ಅ.30

ತಾಲೂಕಿನ ಚಿತವಾಡಗಿ ವ್ಯಾಪ್ತಿಯ ಖಾಜಾ ನಗರದಲ್ಲಿ ಮೆಹಬುಬ್ ಭಾಷಾ ಹಾಗೂ ನಂದಿ ಬಂಡಿ ಗ್ರಾಮದಲ್ಲಿ ಹುಲಿಗೆಮ್ಮ ಎನ್ನುವವರು ಹಲವು ದಿನಗಳಿಂದ ಅಂಗಾಂಗ ವೈಫಲ್ಯ ದಿಂದ ಬಳಲುತ್ತಿದ್ದರು ಇದನ್ನು ಗಮನಿಸಿದ ಧರ್ಮಸ್ಥಳ ಸಂಸ್ಥೆಯ ಕಾರ್ಯಕರ್ತರು ಇವರಿಗೆ ಉಚಿತವಾಗಿ ವ್ಹಿಲ್ ಚೇರ್ ಕೊಡಿಸಬೇಕೆಂದು ಪರಮ ಪೂಜ್ಯರಿಗೆ ಮನವಿ ಸಲ್ಲಿಸಿದ್ದರು. ಇವರ ಮನವಿಗೆ ಪುರಸ್ಕರಿಸಿದ ಪೂಜ್ಯರು ಜನ ಮಂಗಳ ಕಾರ್ಯಕ್ರಮದ ಅಡಿಯಲ್ಲಿ ಇವರಿಗೆ ಉಚಿತವಾಗಿ ವ್ಹಿಲ್ ಚೇರ್ ಕಳುಹಿಸಿ ಕೊಟ್ಟಿದ್ದಾರೆ. ಈ ದೀನ ಈ ಸಲಕರಣೆಯನ್ನು ತಾಲ್ಲೂಕಿನ ಯೋಜನಾಧಿಕಾರಿ ಶ್ರೀ ಮಾರುತಿ ಎಸ್ ಸರ್ ಅವರು ಫಲಾನುಭವಿಗೆ ನೀಡಿ ಅವರ ಆರೋಗ್ಯ ಕ್ಷೇಮ ವಿಚಾರಿಸಿ ನಂತರ ಮಾತನಾಡಿದ ಅವರು ಪರಮ ಪೂಜ್ಯರ ಜನಪ್ರಿಯ ಕಾರ್ಯಕ್ರಮವಾದ ಜಲ ಮಂಗಳ ಕಾರ್ಯಕ್ರಮದ ಅಡಿಯಲ್ಲಿ ರಾಜ್ಯದಲ್ಲಿ ಈಗಾಗಲೇ ಸಾವಿರಾರು ವಿಕಲ ಚೇತನರಿಗೆ ಉಚಿತವಾಗಿ ಅವರಿಗೆ ಅಗತ್ಯವಿರುವ ಸಲಕರಣೆಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ವಿಕಲಚೇತನರು ಇದರ ಸದುಪಯೋಗ ಪಡಿಸಿ ಕೊಳ್ಳಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕ್ಕೆ ಶ್ರೀಮತಿ ವಿನೂತ ಮೇಲ್ವಿಚಾರಕರಾದ ಮಲ್ಲಪ್ಪ ತಾಲೂಕಿನ ಕೃಷಿ ಅಧಿಕಾರಿ ಚನ್ನಪ್ಪ ಸೇವಾ ಪ್ರತಿನಿಧಿ ನೀಲಮ್ಮ, ಲಕ್ಷ್ಮಿ ಹಾಗೂ ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ