ಶಿಷ್ಟಾಚಾರ ಉಲ್ಲಂಘಿಸಿ ದಿವ್ಯ ಮೌನಕ್ಕೆ ಶರಣಾದ – ತಾಲೂಕ ಆಡಳಿತ.
ಮಾನ್ವಿ ನ. 05

ಸರಕಾರ ಸೂಚಿಸಿದ ಮಾನದಂಡದಂತೆ ಪ್ರತಿ ಕಾರ್ಯಕ್ರಮಕ್ಕೆ ಅಧಿಕಾರಿಗಳು ಭಾಗವಹಿಸಿ ಶಿಷ್ಟಾಚಾರ ಪಾಲನೆ ಮಾಡಬೇಕು. ಆದರೆ ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಇಲ್ಲದಿರುವುದನ್ನು ಕಂಡು ಶಾಸಕ ಹಂಪಯ್ಯ ನಾಯಕರು ಕಿಡಿಕಾರಿದ್ದಾರೆ. ಪ್ರತಿ ಜಯಂತಿ ಸಭೆಗೆ ಆಹ್ವಾನ ನೀಡದೆ ನಿಮ್ಮಷ್ಟಕ್ಕೆ ನೀವೆ ಸಭೆ ಮಾಡುತ್ತೀರಾ ಅಂದ ಮೇಲೆ ಶಾಸಕರ ಬಗ್ಗೆ ನಿಮಗೆ ಗೌರವ ಇದೇನಾ ಅಥವಾ ನಿಮ್ಮಷ್ಟದಂತೆ ನಡೆದು ಬಿಡಿ ಎಲ್ಲಾ ನಿಮ್ಮದೆ ಕಾರುಬಾರು ಎಂದು ವೇದಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾನ್ವಿಯಲ್ಲಿ ಆಡಳಿತ ವ್ಯವಸ್ಥೆ ಹದಗೆಟ್ಟಿದ್ದು, ಇಲ್ಲಿ ಯಾರು ಹೇಳೋರು ಕೇಳೋರು ಯಾರು ಇಲ್ಲವಾಗಿದ್ದರಿಂದ ಶಾಸಕ ಹಂಪಯ್ಯ ನಾಯಕ ಅವರು ಸಹ ಸರಕಾರಿ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬರುತ್ತಾರೆ ಅಥವಾ ಇಲ್ಲವಾ ಎಂದು ಕೇಳಿದಾಗ ಮಾತ್ರ ಸುಧಾರಣೆಯಗಲು ಸಾಧ್ಯ. ಇಲ್ಲವೆಂದರೆ ಮತ್ತಷ್ಟು ಆಡಳಿತ ಅನ್ನೋದು ದಿವಾಳಿ ಯಾಗೋದು ಸತ್ಯ ಅಂತಾ ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ