ತಾಲೂಕ ಸಹಕಾರ ಭಾರತಿ ಸಮಿತಿ ರಚನೆ – ಅಧ್ಯಕ್ಷರಾಗಿ ಎಂ.ಚನ್ನವೀರಗೌಡ ಆಯ್ಕೆ.
ಕೊಟ್ಟೂರು ನ.07

ಕೊಟ್ಟೂರು ತಾಲೂಕಿನ ಸಹಕಾರ ಭಾರತಿ ಅಧ್ಯಕ್ಷರಾಗಿ ಎಂ.ಚನ್ನವೀರಗೌಡ ಇವರನ್ನು ಸಹಕಾರಿ ಭಾರತಿ ಜಿಲ್ಲಾ ಸಮಿತಿ ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಎಂ. ಚನ್ನವೀರಗೌಡ ಇವರು ಪ್ರಸ್ತುತ ಕೊಟ್ಟೂರು ಪಟ್ಟಣದ ಕ್ಷಿತಿಜ ಸೌಹಾರ್ದ ವಿವಿದೊದ್ದೇಶ ಸಹಕಾರಿ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಉಪಾಧ್ಯಕ್ಷರಾಗಿ ಎ.ವಿಠಲ್ (ಪಿಎಸಿಎಸ್ ನಿಂಬಳಗೆರೆ) ಮತ್ತು ಆನಂದ (ಅಭಿನವ ಸೌಹಾರ್ದ) ಪ್ರಧಾನ ಕಾರ್ಯದರ್ಶಿಯಾಗಿ ಪ್ರದೀಪ.ಎಂ. (ಪಿಎಸಿಎಸ್ ತೂಲಹಳ್ಳಿ). ಸಂಘಟನಾ ಕಾರ್ಯ ದರ್ಶಿಯಾಗಿ ಅರವಿಂದ (ಶಿವಸ್ನೇಹ ಸೌಹಾರ್ದ) ಮಹಿಳಾ ಪ್ರಮುಖರಾಗಿ ಕೆ.ಬಸಮ್ಮ (ಕ್ಷಿತಿಜ ಸೌಹಾರ್ದ ಸಹಕಾರಿ ನಿರ್ದೇಶಕರು) ಸದಸ್ಯರಾಗಿ ಕೊಟ್ರೇಶ್ (ಸಂಪತ್ ಸೌಹಾರ್ದ) ಪ್ರಭುಸ್ವಾಮಿ (ಇಂದು ಸೌಹಾರ್ದ) ವಿಕಾಸ್ ( ಶಿವನಂದಿ ಸೌಹಾರ್ದ) ಹುಲಿರಾಜ್ (ವಿಶ್ವಬಂಧು ಮರುಳುಸಿದ್ದ ಸೌಹಾರ್ದ) ಇವರನ್ನು ತಾಲೂಕ ಸಹಕಾರ ಭಾರತಿಗೆ ಆಯ್ಕೆ ಮಾಡಿ ಜಿಲ್ಲಾ ಸಮಿತಿ ಆದೇಶ ನೀಡಿದೆ ಎಂದು ಚನ್ನವೀರಗೌಡ ಎಂ. ತಿಳಿಸಿದರು.ಕೊಟ್ಟೂರು ತಾಲೂಕಿನಲ್ಲಿ ಬರುವ ಇತರೆ ಪಿಎಸಿಎಸ್ ಹಾಗೂ ಸೌಹಾರ್ದ ಸಹಕಾರಿಗಳು, ಹಾಲು ಉತ್ಪಾದಕರ ಸಂಘದ ಸಿ.ಇ.ಓ ಗಳು ಹಾಗೂ ಎಲ್ಲಾ ತರಹದ ಸಹಕಾರಿ ಸಂಘಗಳು ಸಮಿತಿಯ ಸಹ ಸದಸ್ಯರಾಗಿರುತ್ತಾರೆ ಎಂದರು. ಸಹಕಾರಿ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಪಟ್ಟಿ ಮಾಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನಕ್ಕೆ ತರುವಂತಹ ಕೆಲಸ ಮಾಡುತ್ತೇನೆ. ಸಹಕಾರ ಕ್ಷೇತ್ರ ,ಸಹಕಾರ ಮತ್ತು ಸಹ ಬಾಳ್ವೆಯಿಂದ ಸ್ವತಂತ್ರವಾಗಿ ಕೆಲಸ ನಿರ್ವಹಿಸಲು ಇರುವಂತಹ ಹಂತ ಹಂತವಾಗಿ ಗುರುತಿಸಿ ಪಟ್ಟಿ ಮಾಡಿ ವಿಜಯನಗರ ಜಿಲ್ಲಾ ಅಧ್ಯಕ್ಷರಾದ ಬಾದಾಮಿ ಕರಿಬಸವನಗೌಡ ಇವರ ನೇತೃತ್ವದಲ್ಲಿ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ನಿವೃತ್ತ ಪ್ರಬಂಧಕರಾದ ಲೀಯಾಕತ್ ಅಲಿ ವಿಜಯನಗರ ಜಿಲ್ಲಾ ಮಾಜಿ ಅಧ್ಯಕ್ಷರು, ಹಾಗೂ ಸಹಕಾರ ಭಾರತಿ ಜಿಲ್ಲಾ ಅಧ್ಯಕ್ಷರಾದ ಬಾದಾಮಿ ಕರಿಬಸವನಗೌಡ ಹಾಗೂ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು ಅಧ್ಯಕ್ಷರಾದ ಜಿ.ನಂಜಗೌಡ್ರು ಮತ್ತು ಜಿಲ್ಲಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು