ಜ್ಞಾನವೇ ಇಲ್ಲದ ವಕ್ಫ್ ಸಚಿವರು, ದಸ್ತಗಿರಿ ಮುಲ್ಲಾ. ಸಿದ್ದನಗೌಡ ಪಾಟೀಲ್ ಹೇಳಿಕೆ.
ಗೋಲಗೇರಿ ನ.07

ಗೋಲಗೇರಿ ವಕ್ಫ್ ಆಸ್ತಿಯ ವಿಷಯವಾಗಿ ರಾಜ್ಯದಲ್ಲಿ ವಕ್ಫ್ ಆಸ್ತಿಯು ಅತಿಕ್ರಮಣ ಮತ್ತು ಕಬಳಿಕೆ ಆಗಿದ್ದು. ಸರ್ಕಾರ ವಕ್ಫ್ ಆಸ್ತಿಯನ್ನು ಉಳಿಸಿ ಕೊಳ್ಳಬೇಕೆಂದು ಟಿಪ್ಪು ಕ್ರಾಂತಿ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ದಸ್ತಗೀರ ಮುಲ್ಲಾ ಸಿದ್ದನಗೌಡ ಪಾಟೀಲ ಸರಕಾರಕ್ಕೆ ಆಗ್ರಹಿಸಿದ್ದಾರೆ. ಸಿಂದಗಿ ತಾಲೂಕಿನ ಗೋಲಗೇರಿಯಲ್ಲಿ ಗುರುವಾರ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ದಸ್ತಗೀರ ಮುಲ್ಲಾ ವಕ್ಫ್ ಬಗ್ಗೆ ಜ್ಞಾನಾನೆ ಇಲ್ಲದ ವಕ್ಫ್ ಸಚಿವರು ವಕ್ಫ್ ಬೋರ್ಡ ಚುನಾವಣಾ ಪ್ರಚಾರಕ್ಕಾಗಿ ಬಂದು ವಕ್ಫ್ ಅದಾಲತ್ ಮಾಡುವುದರ ಮುಖಾಂತರ ಗೊಂದಲ ಸೃಷ್ಟಿಸಿ ಸುಮ್ಮನಿರುವುದು ನೋಡಿದರೆ ಸರ್ಕಾರನೇ ಸಾರ್ವಜನಿಕರ ಆಸ್ತಿ ಅತಿಕ್ರಮಣ ಮಾಡಿದ ಹಾಗಾಗಿದೆ. 1913 ರ ಟ್ರಸ್ಟಿ ಆ್ಯಕ್ಟ್ ಮತ್ತು 1913 ರ ಮುಸಲ್ಮಾನ ವಕ್ಫ್ ವ್ಯಾಲಿಡೀಟಿ ಆ್ಯಕ್ಟ್ ರಚಿಸಿ ಲಿಖಿತವಾಗಿ ಹಾಗೂ ಮೌಖಿಕವಾಗಿ ಧಾರ್ಮಿಕ ಸ್ಥಳಗಳಿಗೆ ಆಸ್ತಿಯನ್ನು ದತ್ತಿ, ಧಾನ ಅಂದರೆ ವಕ್ಫ್ ಮಾಡಬಹುದು ಎಂದು ಕಾನೂನು ರಚಿಸಲಾಯಿತು. ತದನಂತರ 1954 ರಲ್ಲಿ ವಕ್ಫ್ ಆಸ್ತಿಗಳ ರಕ್ಷಣೆ ಮತ್ತು ನಿರ್ವಹಣೆ ಮಾಡಲಿಕ್ಕೆ ವಕ್ಫ್ ಕಾನೂನನ್ನು ತರಲಾಯಿತು. ಕಾನೂನು ಮಾಡಿದ ನಂತರ 1965 ರಿಂದ 1970 ರವರೆಗೆ ವಕ್ಫ್ ಆಸ್ತಿಯನ್ನು ಸರ್ವೇ ಮಾಡಲಾಯಿತು. ಇದಾದ ನಂತರ 1974 ರಲ್ಲಿ ಮುಂಬೈ ಕರ್ನಾಟಕ ವಕ್ಫ್ ಆಸ್ತಿಗಳನ್ನು ಗೆಜೆಟ್ ನಲ್ಲಿ ನೋಂದಾಯಿಸಲಾಯಿತು. ಮತ್ತೆ 2020-21 ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮತ್ತೆ ವಕ್ಫ್ ಆಸ್ತಿಗಳನ್ನು ಗೆಜೆಟ್ ನಲ್ಲಿ ನೋಂದಾಯಿಸಲಾಯಿತು.ಆದರೆ ಇಂದು ರಾಜ್ಯದಲ್ಲಿ ನಡೆದಿರುವ ವಿದ್ಯಾಮಾನಗಳನ್ನು ನೋಡಿದರೆ ವಕ್ಫ್ ಆಸ್ತಿಯನ್ನು ಭೂಗಳ್ಳರು ಹಾಗೂ ಅತಿಕ್ರಮಣ ಕಾರರು ಕಬಳಿಸಿ ಕೊಂಡರೊ.? ಅಥವಾ ವಕ್ಫ್ ಬೋರ್ಡ್ ನೇ ಸಾರ್ವಜನಿಕರ ಆಸ್ತಿ ಕಬಳಿಸಿ ಕೊಂಡಿತೋ ಎಂಬುವದು ಬಹಿರಂಗ ವಾಗಬೇಕಾಗಿದೆ.ಅನಧಿಕೃತವಾಗಿ ವಕ್ಫ್ ಬೋರ್ಡ್ ಸಾರ್ವಜನಿಕರ ಮತ್ತು ರೈತರ ಆಸ್ತಿಯನ್ನು ಕಬಳಿಸಿ ಕೊಂಡಿದ್ದೆ ಆಗಿದ್ದರೆ. ಅನ್ಯಾಯಕ್ಕೆ ಒಳಗಾದವರು ವಕ್ಫ್ ಟ್ರಿಬಿನಲ್ ಕೋರ್ಟಲ್ಲಿ ಮೂಲ ದಾಖಲೆ ಗೊಳೊಂದಿಗೆ ಅರ್ಜಿ ಸಲ್ಲಿಸಿ ನ್ಯಾಯ ಪಡೆದು ಕೊಳ್ಳಲು ಅವಕಾಶ ಇದೆ. ಆದರೆ ವಕ್ಫ್ ಆಸ್ತಿಯನ್ನು ಭೂಗಳ್ಳರು, ಅತಿಕ್ರಮಣ ಕಾರರು ಕಬಳಿಸಿ ಕೊಂಡರೆ..! ಸರ್ಕಾರ ಅಂಥವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಸರ್ಕಾರ ಶೀಘ್ರ ವಕ್ಫ್ ಆಸ್ತಿಯನ್ನು ಸರ್ವೇ ಮಾಡಿಸಿ ಹದ್ದುಬಸ್ತ್ ಮಾಡುವುದರ ಮುಖಾಂತರ ವಕ್ಫ್ ಆಸ್ತಿಯನ್ನು ಉಳಿಸಿ ಕೊಳ್ಳಬೇಕು. ಸಾರ್ವಜನಿಕರಿಗೆ ನಿಜವಾಗಲೂ ವಕ್ಫ್ ಇಲಾಖೆಯಿಂದ ತೊಂದರೆ ಆಗಿದ್ದರೆ ರಾಜ್ಯದಲ್ಲಿ ರಾಜ್ಯ ಸರ್ಕಾರ ಒಂದು ನಿವೃತ್ತ ನ್ಯಾಯಮೂರ್ತಿ ಗಳ ಸಮಿತಿ ರಚಿಸಿ ರಾಜ್ಯದಲ್ಲಿ ಯಾರು, ಯಾರ ಆಸ್ತಿಯನ್ನು ಕಬಳಿಸಿ ಕೊಂಡಿದ್ದಾರೆ. ವರದಿ ತಯಾರಿಸಿ ಸರ್ಕಾರಕ್ಕೆ ಒಪ್ಪಿಸಲಿ. ಅದನ್ನು ಬಿಟ್ಟು ವೋಟ್ ಬ್ಯಾಂಕ್ ರಾಜಕಾರಣ ಮಾಡುವುದು ಸರಿ ಅಲ್ಲ. ತಮ್ಮ ತಮ್ಮ ಪಕ್ಷದ ಭೂಗಳ್ಳರನ್ನು ಉಳಿಸುವ ಸಲುವಾಗಿ ಈ ರೀತಿಯ ತಪ್ಪು ಮಾಹಿತಿ ಸಾರ್ವಜನಿಕರಲ್ಲಿ ಮೂಡಿಸುವುದು ಸರಿಯಲ್ಲ. ಈ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕರಿಗೆ ಏನಾದರೂ ನೈತಕತೆ ಅನ್ನೋದು ಇದ್ದರೆ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾನಪಾಡಿಯವರ್ ವರದಿಯನ್ನು ಜಾರಿ ಮಾಡಲಿ ಮತ್ತು ಜಾರಿ ಮಾಡಿಸುವ ಸಲುವಾಗಿ ಹೋರಾಟ ಮಾಡಲಿ. ವಿಶೇಷವಾಗಿ ರಾಜ್ಯದಲ್ಲಿ ಬಿಜೆಪಿ ಪಕ್ಷದ ನಾಯಕರು ಜನರನ್ನು ದಾರಿ ತಪ್ಪಿಸಿವ ಕೆಲಸ ಹಾಗೂ ಕೋಮು ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಬಾರದು. ಒಟ್ಟಾರೆ ಸರ್ಕಾರ ವಕ್ಫ್ ಆಸ್ತಿಯನ್ನು ಉಳಿಸಿ ಕೊಳ್ಳಬೇಕು ಎಂದರು ಸಿದ್ದನಗೌಡ ಪಾಟೀಲ ಮಾತನಾಡಿದರು. ಡವಳಾರ, ಯಲಗೋಡ, ವಕ್ಫ ಆಸ್ತಿ ಗೋಲಗೇರಿ ಗೊಲ್ಲಾಳೇಶ್ವರ ದೇವಸ್ಥಾನ ಯಂಕಂಚಿ ದಾವಲ ಮಲಿಕ ದೇವಸ್ಥಾನ ಕಲಬುರ್ಗಿ ಶರಣ ಬಸವೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ ಮುಜರಾಯಿ ಇಲಾಖೆಯಿಂದ ಆಸ್ತಿಗಳು ಇದ್ದಾವೆ ಎಂದರು.ಟಿಪ್ಪು ಕ್ರಾಂತಿ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ದಸ್ತಗೀರ್ ಮುಲ್ಲಾ ಸಿದ್ದನಗೌಡ ಪಾಟೀಲ ನಾನಗೌಡ ಪಾಟೀಲ ಪತ್ರಿಕಾಗೋಷ್ಠಿ ಮುಖಾಂತರ ವಕ್ಫ್ ಆಸ್ತಿಯನ್ನು ಉಳಿಸಿ ಕೊಳ್ಳಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ