ಢಣಾಪುರ ಗ್ರಾಮ ಪಂಚಾಯಿತಿಗೆ ಬಿ.ಎಂ.ಎಂ ಕಂಪನಿ 16 ಕೋಟಿ ಹಣ ತೆರಿಗೆ ಪಾವತಿಸಲಾರದೇ ಇದ್ದು. ಸರ್ಕಾರದ ಖಜಾನೆಗೆ ನಷ್ಟ ಆಗಿದ್ದರಿಂದ ಕೂಡಲೇ ಬಿ.ಎಂ.ಎಂ ಕಂಪನಿಯ ಪರವಾನಿಗೆ ರದ್ದು ಪಡಿಸಿ. ಕಪ್ಪುಪಟ್ಟಿಗೆ ಸೇರಿಸಿ – ಕಂಪನಿಯ ಮೇಲೆ ಪ್ರಕರಣ ದಾಖಲಿಸಲು ಆಗ್ರಹ.

ಢಣಾಪುರ ನ.09

ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ, ಢಣಾಪುರ್ ಗ್ರಾಮ ಪಂಚಾಯಿತಿ ಬಿ.ಎಂ.ಎಂ ಇಸ್ವಾಶ ಲಿಮಿಟೆಡ್ ಖಾಸಗಿ ಕಂಪನಿ ಎರಡು ವರ್ಷಗಳಿಂದ ಸುಮಾರು 16 ಕೋಟಿ ಹಣವನ್ನು ಪಂಚಾಯಿತಿಗೆ ಸಂದಾಯ ಮಾಡಲಾರದೆ ಇದ್ದು. ಅಭಿವೃದ್ಧಿ ಅಧಿಕಾರಿಗಳು ಪಿ.ಡಿ.ಓ ಇವರು ಈ ಕಂಪನಿಗೆ 16 ಕೋಟಿ ಹಣ ನಮ್ಮ ಗ್ರಾಮ ಪಂಚಾಯಿತಿಗೆ ಸಂದಾಯ ಮಾಡಲಾರದೆ ನಡೆಸುತ್ತಿದ್ದು. ಸರ್ಕಾರಕ್ಕೆ ನಷ್ಟ ಉಂಟಾಗಿದೆ ಎಂದು ಪತ್ರಗಳ ಬರೆದು ತಿಳಿಸಿದರು. ಸಹ ಇವರ ಪತ್ರಗಳಿಗೆ ಕಂಪನಿಯವರು ಲೆಕ್ಕಿಸಲಾರದೆ ತಮ್ಮ ಮನ ಬಂದಂತೆ ವರ್ತನೆ ಮಾಡುತ್ತಿದ್ದರಿಂದ ಇವರಿಗೆ ಅಧಿಕಾರಿಗಳ ಭಯ ಭೀತಿ ಇಲ್ಲದ್ದರಿಂದ ಎರಡು ವರ್ಷಗಳಿಂದ ಗ್ರಾಮ ಪಂಚಾಯಿತಿಗೆ ಹಣ ಸಂದಾಯ ಮಾಡುತ್ತಿಲ್ಲ ಅಂದರೆ ಇಷ್ಟು ದಿನಗಳ ವರೆಗೆ ಅಕ್ರಮವಾಗಿ ನಡೆಸುತ್ತಿದ್ದನ್ನು ನೋಡಿದರೆ ಉನ್ನತ ಅಧಿಕಾರಿಗಳು ಇಂತ ಖಾಸಗಿಯ ಕಂಪನಿಯ ಮೇಲೆ ಕ್ರಮ ಕೈಗೊಳ್ಳಲಾರದೆ ಇರುವುದರಿಂದ ಸರ್ಕಾರಕ್ಕೆ ಎಷ್ಟೇ ನಷ್ಟ ಆದರೇನು ನಮಗೇನು ಸಂಬಂಧ ಇಲ್ಲದಂತೆ ರೀತಿಯಾಗಿ ವರ್ತನೆ ಆಗಿದ್ದರಿಂದ ಇದಕ್ಕೆ ಅಧಿಕಾರಿಗಳೇ ನೇರ ಹೊಣೆಗಾರರೆಂದು ಹೇಳಿದರೆ.

ತಪ್ಪಾಗಲಿಕ್ಕಿಲ್ಲ ಆದುದರಿಂದ ತಾವುಗಳು ಬಿ.ಎಂ.ಎಂ ಖಾಸಗಿ ಕಂಪನಿಯನ್ನು ಕೂಡಲೇ ಪರವಾನಿಗೆ ರದ್ದುಪಡಿಸಿ ಇದನ್ನು ಕಪ್ಪುಪಟ್ಟಿಗೆ ಸೇರಿಸಿ ಈ ಕಂಪನಿಯ ಮೇಲೆ ಪ್ರಕರಣವನ್ನು ದಾಖಲಿಸಿ ಕೊಳ್ಳಬೇಕೆಂದು ಈ ಮೂಲಕ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿಯ ಕೆ.ಶಂಕರ್ ನಂದಿಹಾಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button